ಕಂಡಿರ ಸುಂದರಿ ಕಮಲೆಯನು? ಕಂಡಿರ ಕೋಮಲೆ ವಿಮಲೆಯನು? ಧೀರನವೊಲು ದಿಗ್ವಿಜಯವ ಮಾಡಲು ಊರಿನ ಗಡಿಯನ್ನು ದಾಟಿದಳು. ಅವಳನು ಕಂಡರೆ ಒಲಿಯುವುದೇ, ಅವಳನೆ ಎಂದಿಗು ಒಲಿಯುವುದೇ. ಅವಳನು ಮಾಡಿದ ಬಿದಿ ತಾ ಮಾಡನು ಇನ್ನಾ ಚೆಂದದ ಚೆಲುವೆಯನು. ಕಮಲೇ, ನೀನೇ ರ...

ಸುಮಾರು ಐದು ಗಂಟೆಯಿರಬಹುದು. ಮೋಹನೆಯು ಕಸೂತಿಯ ಕೆಲಸ ವನ್ನು ಮಾಡುತ್ತ ಕುಳಿತಿದ್ದಾಳೆ. ಮನಸ್ಸೆಲ್ಲ ಎಲ್ಲೋ ಹೋಗಿದೆ. ಯಾವ ಕೆಲಸ ಮಾಡುವುದಕ್ಕೂ ಇಷ್ಟವಿಲ್ಲ. ಯಾವುದಕ್ಕೂ ಬೇಸರ, ಮನೆಯಲ್ಲಿ ವೀಣಾ ಇಲ್ಲದಿದ್ದರೆ ನೀನೇ ಎನ್ನುವವರಿಲ್ಲ. ತಲೆ ಒಡೆದರೂ...

ಕೃಷ್ಣ ಕೃಷ್ಣ ಎಂದು ಕನವರಿಸಿರುವೆ ನಾ ಕರು ತನ್ನ ತಾಯನ್ನು ಕರೆವಂತೆ ಕೃಷ್ಣ ಕೃಷ್ಣ ಎಂದು ಹಾ ತೊರೆಯುತ್ತಿದ್ದೆ ರಾತ್ರಿ ತನ್ನ ಚಂದ್ರನ ಕರೆವಂತೆ ನೀರಿನೊಳಗಿನ ಮೀನೊಂದು ಈಜುತ್ತ ಬೆಳಕನ್ನು ಪುಟ್ಟ ಕಂಗಳಿಂದ ನೋಡುವಂತೆ ಸಂಸಾರದ ನಡುವೆ ತೇಲಾಡಿದೆ ನ...

ಮೆಟ್ಟಲಿಳಿದು ಬಳುಕಿ ಬರುವಳು ಈ ಕಾಲದ ಚೆಲುವೆ ಸದ್ಯತೆಯ ಸೃಷ್ಟಿಸುವ ಶೃಂಗಾರದಲ್ಲಿ ಎಲ್ಲರೂ ಕಾದಿರಲು ರಂಗದ ಮುಂದೆ ಇವಳು ಇಡೀ ಲೋಕದ ತಲೆ ತಿರುಗುವಂತೆ ನರ್ತಿಸಲಿದ್ದಾಳೆ ಒಂದು ದಿನ ಅದೇ ಕೊನೆಯ ದಿನ ತಬಲೆಯವ ಕಾಯುವ ಸಿತಾರಿನವ ಕಾಯುವ ಸಭಿಕರಿಗೇನು...

ಕಡಲಿನಾವಿಯನೆತ್ತಿ ತಿರೆಗದನು ಮರೆಮಾಡಿ ಮುಗಿಲ ಮೇಲೆಯೆ ಬೆಳಗುವಿನತೇಜದಂತೆ ಭವಕವಿದ ದುರ್ದಿನದೊಳದರ ಮೇಲಾಡುತಿಹ ರಸದ ತೇಜಕೆ ಜೀವ ಹಂಬಲಿಪುದಿಂತೆ. ಆ ಮುಗಿಲ ಬಿಡಿಸುತಾ ಕಿರಣಗಳಿಗೆಳೆಸೋ೦ಕ ತಂದು ಕತ್ತಲ ಕಳೆವ ಶುಭಕಲ್ಪಗಳನು ಸುಂದರಾಗಮಕಲಿತ ದೇವೋತ್...

ಕಣ್ಣೆದುರೇ ನಡೆವ ಎಷ್ಟೊಂದು ಘಟನಗೆಗಳಿಗೆ ತಲಸ್ಪರ್ಶಿ ಸ್ಪರ್ಶ, ನೋಟ, ಸಂಶೋಧಕಳಾಗುವವಳೇ ಹೊಸದನ್ನು ಹುಡುಕಿ ಹೆಕ್ಕಿ ಉಣಬಡಿಸುವವಳೇ ಮೃದು ಸೌಮ್ಯ ಮಾತಿನ ಮನಸು ಗೆದ್ದವಳೇ ಇಂದೇಕೆ ಮೌನವಾಗಿ ಮಾತನಾಡದೇ ಮಲಗಿರುವೆ. ನಿಂತ ನೀರಾಗದೇ ಸದಾ ಹರಿವ ಹೊಳೆನ...

ಹೀರುತ್ತಿರುವುದು ಇಂಧನವಲ್ಲ ಪ್ರಕೃತಿ ಮಾತೆಯ ರಕ್ತ ಕುಸಿದರೆ ತಾಯಿ ನಮಗಿನ್ನಾರು ಅರಿಯಲು ಆಗೊ ನೀ ಶಕ್ತ ; ಗೆಳೆಯ ಅರಿಯಲು ಆಗೊ ನೀ ಶಕ್ತ || ಪ || ಸಾಲದೆ ಹೊಂಗೆ ಸಾಲದೆ ಬೇವು ಸಾಲದೆ ಹಿಪ್ಪೆ ಸಾಲು ಎಷ್ಟು ಬೇಕೊ ತೈಲವು ನಿನಗೆ ಕಣ್ತೆರೆದಿಂದು ಹೇ...

ಪಾಠಕವರ್ಗ! ಇದು ‘ರಾಜಾಸ್ಥಾನದ ಇತಿಹಾಸ ಮಂಜರಿ’ ಯಲ್ಲಿನ ಒಂದು ಸಣ್ಣ ಕಥೆಯ ಅವಲಂಬನವಾಗಿರುವುದು. ಗ್ರಂಥವು ಚಿಕ್ಕುದಾದರೂ ಹಲವು ನೀತಿಗಳು ಅಡಕವಾಗಿರುವುವು. || ಶ್ರೀ || ಅಂಬಾಲಿಕೆ ಒಂದನೆಯ ಅಧ್ಯಾಯ. ಒಂದು ದಿವಸ ದುರ್ಗದ ರಾಜೋದ್ಯಾ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...