Home / ಕವನ / ಕವಿತೆ / ಕಾಡುಗೊಲ್ಲತಿಯರ ಪಾಡು

ಕಾಡುಗೊಲ್ಲತಿಯರ ಪಾಡು

ಗೊಲ್ಲರ ಹಟ್ಟಿಯಾಚೆಗಿನ ಕಾಡಿನಲ್ಲಿ
ಬೀಡು ಬಿಟ್ಟಿವೆ ಗೊಲ್ಲತಿಯರ ಕುಟೀರ
ಶಿಲುಬೆಗೇರುವ ಯಾತನಾ ಶಿಬಿರ
ತಿಂಗಳಿಗೊಂದಾವರ್ತಿ ಊರ ಹೊರಗೆ ನಲುಗುವ
ಗೊಲ್ಲತಿಯರ ಹೆಣ್ಣು ಸಂವೇದನೆಗಳು
ಊರೊಳಗಿದ್ದರೆ ಬಾಣಂತಿ, ಮುಟ್ಟಾದ ಹೆಣ್ಣು
ಮನೆಯಲ್ಲಿ ಹಾವು ಚೇಳು ಬರುವವಂತೆ.

ಗೊಲ್ಲರ ಹಟ್ಟಿಯಲಿ ಸೂತಕದ ಮನೆ
ನಾಗರೀಕ ಲೋಕದ ನಿರ್ಲಜ್ಜತೆಗೆ ಪ್ರತೀಕ
ಸರ್ಕಾರವೂ ಕಟ್ಟಿಸಿದೆ ಸೂತಕದ ಮನೆಗಳು
ಹುಲ್ಲ ಗುಡಿಸಲು ಬದಲಿಗೆ ಇಟ್ಟಿಗೆ ಗಾರೆ
ನೀರಿಲ್ಲ, ಬೆಳಕಿಲ್ಲ, ಕಿಟಕಿ, ಬಾಗಿಲುಗಳಿಲ್ಲ
ಶೌಚಾಲಯಗಳೂ ಇಲ್ಲದ ಗೂಡು
ಎದ್ದು ನಿಂತವು ಊರಾಚೆ ಕೃಷ್ಣಕುಟೀರಗಳು
ಮೌಡ್ಯದ ಆಚರಣೆಗೆ ಕೊನೆಯೇ ಇಲ್ಲವೇ?

ಗೊಲ್ಲರ ಹಟ್ಟಿಯ ಆ ಹೆಣ್ಣು
ಗೊಡ್ಡು ಸಂಪ್ರದಾಯ, ಕಟ್ಟಳೆಗೆ ತಲೆಬಾಗಿ
ಹಿರಿಯರ ಮಾತಿಗೆ ಬೆಲೆ ಕೊಟ್ಟು
ಮಳೆ, ಚಳಿ, ಗಾಳಿ, ಬಿಸಿಲು, ಕಾಡುಪ್ರಾಣಿ
ಹುತ್ತ – ಹಾವಿನ ಹರಿದಾಟ ಸರಪರ
ಇನ್ನೆಷ್ಟು ದಿನ ಸಹಿಸಬೇಕಿದೆಯೋ
ಅನಿಷ್ಟಗಳ ಅಳಿಸುವ ಸಂತರ ಆಗಮನಕ್ಕೆ
ಇನ್ನೆಷ್ಟು ದಿನ ಕಾಯಬೇಕಾಗಿದೆಯೋ ಅವಳು ?

ನೂರಾರು ಆವಿಷ್ಕಾರ, ವಿಜ್ಞಾನ, ಸಾಧನೆ
ಮೆಟ್ಟಿಲ್ಲ ಅವಳು ನಾಗರೀಕ ಮೆಟ್ಟಿಲು
ಮುಟ್ಟು, ಬಸಿರು, ಬಾಣಂತನಗಳ ಮಧ್ಯೆ
ಗೊಲ್ಲರ ಹಟ್ಟಿಯ ಹೆಣ್ಣಿನ ಬದುಕು
ಬೆಂಕಿಯಲಿ ನಲುಗುವ ಕಾಡ ಹೂಗಳು
ಅರಣ್ಯದ ಭಯಂಕರ ಪ್ರಾಣಿಗಳ ಮಧ್ಯೆ
ಕಾಡುಗೊಲ್ಲತಿಯರ ಅಘೋರಿ ವಾಸ.

ಆಗಲೇ ಹುಟ್ಟಿದ ಹಸಿ ಮಾಂಸದ ಮುದ್ದೆಗೆ
ಹೊಕ್ಕಳ ಬಳ್ಳಿಯನ್ನು ಕಚ್ಚಿ ಇಲಿ, ಬೆಕ್ಕು
ಜನರಿಲ್ಲ, ದೀಪವಿಲ್ಲ, ವಿಷಜಂತುಗಳ ಹರಿದಾಟ
ಕಾಡಿನ ಕ್ರೂರ ಮೃಗಗಳ ಘರ್ಜನೆ, ಸದ್ದು, ಸಪ್ಪಳ
ತಾಯಿ ಮಗುವಿನ ಮೌನ ರೋದನದ ಬಿಕ್ಕು
ಅರಿವಿನ ಸೂರ್ಯ ಗೊಲ್ಲರ ಗುಡಿಸಲಿಗೆ ಬರಲಿಲ್ಲ.
ಬೆಳೆದ ನಾಗರೀಕತೆ ಕಿವಿಗೆ ತಟ್ಟಲಿಲ್ಲ.

ದಿನ ದಿನದ ಹಿಂಸೆಗೆ ಕೊನೆ ಹೇಳಿ
ಗರ್ಭಕೋಶಕೇ ಕತ್ತರಿ ಹಾಕಿ ಗೊಲ್ಲತಿ
ಮೌಡ್ಯಕ್ಕೆ ಗರ್ಭವೇ ಬಲಿ
ಮುಟ್ಟಿನ ಕಟ್ಟು ಬಿಡಿಸಿಕೊಂಡಳು
ಮುಕ್ತಿ ಹಾಡಿದಳು ಕೃಷ್ಣ ಕುಟೀರಕೆ
ಮುಟ್ಟು ನಿಂತು ಹುಟ್ಟಿದ….
ಪಿಂಡಗಳಿಗೆ ಹಿಡಿ ಶಾಪ ಹಾಕುತ್ತ
ಕಳಂಕ ಕಳಚಿ ಯಾತನೆಗೆ ಕೊನೆ
‘ಹೆಣ್ಣು ಸಂತಾನವೇ ಪ್ರಾಪ್ತವಾಗದಿರಲಿ’
ಹಿಡಿ ಶಾಪ ಹಾಕಿದಳು ಮೌಡ್ಯಕ್ಕೆ
ಗರ್ಭವನ್ನೇ ಕಿತ್ತು ಬಿಸಾಕಿದಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...