Home / ಕವನ / ಕವಿತೆ / ನಾವಿದ್ದೇವೆಲ್ಲ ಯಾಕೆ?

ನಾವಿದ್ದೇವೆಲ್ಲ ಯಾಕೆ?

ಚಿತ್ರ: ವಿಕಿ ಇಮೇಜಸ್
ಚಿತ್ರ: ವಿಕಿ ಇಮೇಜಸ್

ಸತ್ತ ದನವ ತಿಂದೂ ತಿಂದೂ
ನಾವಿನ್ನೂ ಸತ್ತಿಲ್ಲವಲ್ಲ ಯಾಕೆ?
ಯುಗಯುಗಗಳಿಂದಾ ಪಾಂಡವರಂತೇ…
ಹಗೆಗಳಾಗಿ, ಬದುಕಿದ್ದೇವೆಲ್ಲ ಯಾಕೆ?
*

ಹೊಲೆಗೇರಿಲಿದ್ದು,
ಯುಗಯುಗಗಳಿಂದಾ
ಸತ್ತ ದನವೇ ನಮಗಾಯಿತಲ್ಲ ಯಾಕೆ?
ಕರೆಬಾನಿಲಿ ಮುಳುಗೆದ್ದರೂ,
ಇವ್ರಿನ್ನು ಸತ್ತಿಲ್ಲವಲ್ಲ ಯಾಕೇ?
*

ಊರ ಹೊರಗಟ್ಟಿದರೂ
ಸತ್ತ ದನವ ತಿನ್ನಲಿಟ್ಟರೂ
ನಮ್ಮ ಮನೆ, ಮಠಗಳಿಗೆ ಬೆಂಕಿಟ್ಟರೂ…
ನಮ್ಮ ಬಗ್ಗೆ, ಪ್ರೀತಿ ಬುಗ್ಗೆ, ಬತ್ತಿಲ್ಲವಲ್ಲ ಯಾಕೇ??
*

ಇಶ್ಟೊಂದು ವರ್ಷದಿ,
ಎಶ್ಟೊಂದು ಹರ್ಷದಿ,
ಈ ನಿಮ್ಮ ಕೂಡಿ, ಕಿತ್ತಾಡಿ, ಜೈಲು ಕಂಡರೂ…
ಇನ್ನು ಜೊತೆಗಿದ್ದೇವೆಲ್ಲ ಯಾಕೇ??
*

ಒಂಭತ್ತು ತಿಂಗಳು ಹೊತ್ತು,
ಕಡುಕಶ್ಟದಲಿ ಹೆತ್ತು,
ಹೊಟ್ಟೆ, ಬಟ್ಟೆ, ನೆತ್ತಿ ಕಟ್ಟಿ,
ವಿದ್ಯೆ, ಬುದ್ಧಿ ಕಲಿಸಿ,
ಓಟು ಹಾಕಿ – ನಿಮ್ಮನ್ನೆಲ್ಲ ಸಾಕಿ, ಸಲ್ವಿ,
ಮಂತ್ರಿ ಮಾಡಿದ್ದೇವಲ್ಲ ಯಾಕೇ??
*

ಈ ಮನೆ, ಮಠಗಳ
ಈ ಕೋಟೆ ಕೊತ್ತಲಗಳ
ಈ ಗುಡಿ ಗೋಪುರಗಳ
ಈ ಕೆರೆ, ಕುಂಟೆ, ಕಾಲುವೆ, ಡ್ಯಾಮುಗಳ ಕಟ್ಟಿ… ಕಟ್ಟಿ…
ಇನ್ನು ಹೊಲೆಮಾದಿಗರಾಗಿ,
ಉಳಿದಿವಲ್ಲ ಯಾಕೇ??
*

ಈ ನಿಮ್ಮ ಮಕ್ಕಳು, ಮೊಮ್ಮಕ್ಕಳನು ಎತ್ತಿ ಮುದ್ದಾಡಿ,
ಈ ನಿಮ್ಮ ಹೊಲ, ಗದ್ದೆ, ತೋಟಗಳನು ಉತ್ತಿ, ಭಿತ್ತಿ ಕಣಗಳ ಮಾಡಿ,
ಧವಸ, ಧಾನ್ಯಗಳ ಕೇರಿ, ತೂರಿ, ಹಸನು ಮಾಡಿ,
ಮೂಟೆ, ಮೂಟೆ, ಕಾಳು, ಕಡಿಗಳ ಹೊತ್ತು,
ಗುಮ್ಮೆ, ಗರ್ಸೆ, ಟಿಕ್ಕೆ, ಕಣಜಗಳ ತುಂಬಿದೆವಲ್ಲ ಯಾಕೇ?
*

ಏನೆಲ್ಲ ಬಹಿಷ್ಕಾರಗಳ ಮಧ್ಯೆ-
ಈ ನಮ್ಮ ನಾಡು, ನುಡಿ, ಸಂಸ್ಕೃತಿಯ ಉಳಿಸಿ, ಬೆಳೆಸಿದ್ದು ಯಾಕೇ?
ಈ ಗಿಡ, ಮರ, ಬಳ್ಳಿ, ಹಣ್ಣು, ಹೂವು, ವಂಶ, ಊರು ಬೆಳೆಸಿದ್ದು ಯಾಕೇ??
ನಿಮ್ಮೊಂದಿಗೆ ಕೂಡಿ ಬಾಳುವ ಹಂಬಲ,
ನಿಮ್ಮಂತಾಗಲು ಹೋಗಿ, ಹೋಗಿ,
ಇನ್ನು ಇಲ್ಲೇ ಹೊಲೆಗೇರಿಲಿದ್ದೇವೆಲ್ಲ ಯಾಕೆ?!
*

ಏನೆಲ್ಲ ಕಟ್ಟಿ, ಬೆಳೆಸಿ, ಉಳಿಸಿದ ನಾವು-
ಈಗ ಈ ಊರುಕೇರಿಯನು ಒಂದು ಮಾಡಿ,
ಮುರಿದ ಮನೆ, ಮನಗಳ, ಹಸನಾಗಿ, ಹೊಸದಾಗಿ,
ಮತ್ತೆ ಮತ್ತೆ ಕಟ್ಟಬಲ್ಲೆವೆಂಬಾ ಕೆಚ್ಚು, ಸಾಹಸ, ನಮ್ಮಲಿದೆಯಲ್ಲ ಯಾಕೇ??
ಈ ಹಳೇ ಸೂರ್‍ಯ, ಚಂದ್ರ, ನಕ್ಷತ್ರ ರಾಶಿಗಳನ್ನೆಲ್ಲ…
ಗುಡಿಸಿ, ಕುಪ್ಪೆ ಮಾಡಿ, ‘ಮಾದ್ಗಿಂಟ್ಲಿ’ ಕಟ್ಟಬಲ್ಲೆವು!!
ಈ ಭೂಮಿ, ಆಕಾಶದ ತುಂಬೆಲ್ಲ, ಹೊಸ ದೀಪಗಳ ಹಚ್ಚಬಲ್ಲೆವು!
*

‘ಯಾರಂದರು ನಮಗೆ? ನಾವಿಲ್ಲವೆಂದು?
ಸತ್ತ ದನವ ತಿಂದು ತಿಂದೂ…
ಎಂದೋ… ಸತ್ತಿರುವೆವೆಂದೂ…’
‘ಈ ನಮ್ಮ ಹೊಲಗೇರಿಲಿಂದು…
ಹಂದಿ, ನಾಯಿ, ಕತ್ತೆ, ಕುದುರೆ, ಇಲಿ, ಹೆಗ್ಗಣ, ನೊಣಗಳಂತೇ…
ಸತ್ತು ಸತ್ತು… ಬಿದ್ದಿರುವೆವೆಂದೂ…’
*

ಈಗೀಗ-ಸತ್ತ ದನವ ತಿನ್ನುವುದು ಕೈಬಿಟ್ಟು,
ಹೊಲೆಗೇರಿಲಿ… ಬದುಕುವುದಾ ಬಿಟ್ಟು,
ನಿಮ್ಮಕ್ಕ ಪಕ್ಕದಲ್ಲೇ ಬದುಕುವುದ ಕಲಿತ್ತಿದ್ದೇವೆ!
ಈಗೀಗ ಜಾತಿ, ಭೇದ ಮಾಡುವರನ್ನು, ಹುಡುಕುತ್ತಿದ್ದೇವೆ!
ನವರಂಧ್ರಗಳಿಗೆ, ಕೆತ್ತಿಕೆತ್ತಿ… ಬಗಣೆಗೂಟಗಳ ಬಡಿಯಲು,
ನಾವಿದ್ದೇವಲ್ಲ ಸಾಕೇ??
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...