ಕ್ರೈಸ್ತನ ನಿಷ್ಕ್ರಮಣ

ಕ್ರೈಸ್ತನ ನಿಷ್ಕ್ರಮಣ

ಚಿತ್ರ: ಕಾಯ್ ಕಲ್ಹ

ಮತ್ತೊಮ್ಮೆ ಹುಟ್ಟಿ ಬರಲೆ?
ಮತ್ತೊಮ್ಮೆ ಹುಟ್ಟಿ ಬರಲೆ?
– ಎಂದು ಕತ್ತಲಿನಿಂದ
ಕೇಳಿ ಬರುತಿದೆ ನಿನ್ನ ಧ್ವನಿ.

ಮತ್ತೊಮ್ಮೆ ನೀ ಬಂದರೆ
ಥರ್ಮೋಮೀಟರು ಇಟ್ಟು ನಿನ್ನ ಉಷ್ಣ ಅಳೆದೇವು
ರಾಜಕೀಯ ಖೈದಿಯೆಂದು ನಿನ್ನ ಮಿದುಳು ತೊಳೆದೇವು
ಹುಚ್ಚನೆಂದು ಆಸ್ಪತ್ರೆಯಲಿ ಹಾಕಿ ಕೊಂದೇವು

ನಾವು ಕಟ್ಟಿದ ಗುಡಿಗೋಪುರ ಸಂಸ್ಥೆಗಳ
ಅಡಿಗಲ್ಲು ಅಲುಗಿಸಬೇಡ
ಅಲ್ಲಿ ಕಳೆಹುಲ್ಲು ಬೆಳೆದರೂ
ಹಾವಸೆಯೆ ಹತ್ತಿದರೂ
ಹಾದರವೆ ನಡೆದರೂ
ಅದು ಪವಿತ್ರ ಸ್ಮಾರಕ
ಅಲುಗಿಸಬೇಡ
ಕುರುಡು ಸಾಮ್ಸನನ ಹಾಗೆ
ನಿನ್ನೊಡನೆ ನಮ್ಮ ಕೊಲಬೇಡ
ಓ ಕ್ರೈಸ್ತ,
ಮಾಡು ಅಷ್ಟೊಂದು ಉಪಕಾರ
ಕತ್ತಲೆಯಲೇ ನೀ ಕರಗಿ ಹೋಗು
ಹೋಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂದು-ಇಂದು
Next post ಶಾರ್ಕ್

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys