ಕ್ರೈಸ್ತನ ನಿಷ್ಕ್ರಮಣ

ಕ್ರೈಸ್ತನ ನಿಷ್ಕ್ರಮಣ

ಚಿತ್ರ: ಕಾಯ್ ಕಲ್ಹ

ಮತ್ತೊಮ್ಮೆ ಹುಟ್ಟಿ ಬರಲೆ?
ಮತ್ತೊಮ್ಮೆ ಹುಟ್ಟಿ ಬರಲೆ?
– ಎಂದು ಕತ್ತಲಿನಿಂದ
ಕೇಳಿ ಬರುತಿದೆ ನಿನ್ನ ಧ್ವನಿ.

ಮತ್ತೊಮ್ಮೆ ನೀ ಬಂದರೆ
ಥರ್ಮೋಮೀಟರು ಇಟ್ಟು ನಿನ್ನ ಉಷ್ಣ ಅಳೆದೇವು
ರಾಜಕೀಯ ಖೈದಿಯೆಂದು ನಿನ್ನ ಮಿದುಳು ತೊಳೆದೇವು
ಹುಚ್ಚನೆಂದು ಆಸ್ಪತ್ರೆಯಲಿ ಹಾಕಿ ಕೊಂದೇವು

ನಾವು ಕಟ್ಟಿದ ಗುಡಿಗೋಪುರ ಸಂಸ್ಥೆಗಳ
ಅಡಿಗಲ್ಲು ಅಲುಗಿಸಬೇಡ
ಅಲ್ಲಿ ಕಳೆಹುಲ್ಲು ಬೆಳೆದರೂ
ಹಾವಸೆಯೆ ಹತ್ತಿದರೂ
ಹಾದರವೆ ನಡೆದರೂ
ಅದು ಪವಿತ್ರ ಸ್ಮಾರಕ
ಅಲುಗಿಸಬೇಡ
ಕುರುಡು ಸಾಮ್ಸನನ ಹಾಗೆ
ನಿನ್ನೊಡನೆ ನಮ್ಮ ಕೊಲಬೇಡ
ಓ ಕ್ರೈಸ್ತ,
ಮಾಡು ಅಷ್ಟೊಂದು ಉಪಕಾರ
ಕತ್ತಲೆಯಲೇ ನೀ ಕರಗಿ ಹೋಗು
ಹೋಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂದು-ಇಂದು
Next post ಶಾರ್ಕ್

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…