ಕ್ರೈಸ್ತನ ನಿಷ್ಕ್ರಮಣ

ಕ್ರೈಸ್ತನ ನಿಷ್ಕ್ರಮಣ

ಚಿತ್ರ: ಕಾಯ್ ಕಲ್ಹ

ಮತ್ತೊಮ್ಮೆ ಹುಟ್ಟಿ ಬರಲೆ?
ಮತ್ತೊಮ್ಮೆ ಹುಟ್ಟಿ ಬರಲೆ?
– ಎಂದು ಕತ್ತಲಿನಿಂದ
ಕೇಳಿ ಬರುತಿದೆ ನಿನ್ನ ಧ್ವನಿ.

ಮತ್ತೊಮ್ಮೆ ನೀ ಬಂದರೆ
ಥರ್ಮೋಮೀಟರು ಇಟ್ಟು ನಿನ್ನ ಉಷ್ಣ ಅಳೆದೇವು
ರಾಜಕೀಯ ಖೈದಿಯೆಂದು ನಿನ್ನ ಮಿದುಳು ತೊಳೆದೇವು
ಹುಚ್ಚನೆಂದು ಆಸ್ಪತ್ರೆಯಲಿ ಹಾಕಿ ಕೊಂದೇವು

ನಾವು ಕಟ್ಟಿದ ಗುಡಿಗೋಪುರ ಸಂಸ್ಥೆಗಳ
ಅಡಿಗಲ್ಲು ಅಲುಗಿಸಬೇಡ
ಅಲ್ಲಿ ಕಳೆಹುಲ್ಲು ಬೆಳೆದರೂ
ಹಾವಸೆಯೆ ಹತ್ತಿದರೂ
ಹಾದರವೆ ನಡೆದರೂ
ಅದು ಪವಿತ್ರ ಸ್ಮಾರಕ
ಅಲುಗಿಸಬೇಡ
ಕುರುಡು ಸಾಮ್ಸನನ ಹಾಗೆ
ನಿನ್ನೊಡನೆ ನಮ್ಮ ಕೊಲಬೇಡ
ಓ ಕ್ರೈಸ್ತ,
ಮಾಡು ಅಷ್ಟೊಂದು ಉಪಕಾರ
ಕತ್ತಲೆಯಲೇ ನೀ ಕರಗಿ ಹೋಗು
ಹೋಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂದು-ಇಂದು
Next post ಶಾರ್ಕ್

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…