Home / ಕವನ / ಕವಿತೆ / ಅಂದು-ಇಂದು

ಅಂದು-ಇಂದು

ಎಲ್ಲಿ? ಹೋದಳೆಲ್ಲಿ?
ಉದ್ದ ಜಡೆ, ಜರಿಲಂಗ
ಮೊಲ್ಲೆ ಮೊಗ್ಗಿನ ಜಡೆಯಾಕೆ
ಮಡಿಕೆ ಕುಡಿಕೆ ಇರಿಸಿ
ಅಡುಗೆಯಾಟ ಆಡಿ
ಗೊಂಬೆ ಮಗುವ
ತಟ್ಟಿ ಮಲಗಿಸಿ
ಅಮ್ಮನಾಟ ಆಡಿದಾಕೆ
ಎಲ್ಲಿ? ಹೋದಳೆಲ್ಲಿ?
ಹೊಸಿಲು ದಾಟದ
ಬೆಳಕು ಕಾಣದ
ಸಣ್ಣ ಹುಡುಗಿ
ಬಣ್ಣ ಬಣ್ಣದ
ಬಳೆಯ ತೊಟ್ಟ
ಬೆಳ್ಳಿಗೆಜ್ಜೆ ಹುಡುಗಿ
ಹೋದಳೆಲ್ಲಿ?
ಎಲ್ಲರೂಟದ
ಎಂಜಲೆತ್ತಿ
ಗೋಮೆ ಬಳಿದು
ಕೆಲಸ ಬೊಗೆಸೆ
ಕಲಿತ ಹುಡುಗಿ
ಧ್ವನಿ ಎತ್ತದ
ನಾಚಿಕೆಯ ಹುಡುಗಿ
ಎಲ್ಲಿ ಹೋದಳೆಲ್ಲಿ
ಮೈಗಂಟಿದ ಜೀನ್ಸ್
ತೋಳಿದಲ್ಲದ ಟಾಪ್
ಹೈಯೀಲ್ಡಿನ ಹುಡುಗಿ
ಇಲ್ಲಿದ್ದಾಳೆ, ಬಾಯ್
ಕಟ್‌ನ ಬೆಡಗಿ!
ಅದೆಷ್ಟೊ ಹೆಜ್ಜೆ ಇರಿಸಿ
ಕಡಲುಗಳ ದಾಟಿ
ಕಂದರವ ಹಾರಿ
ಇಲ್ಲಿ ಬಂದಿದ್ದಾಳೆ
ಅಮ್ಮನಾಟ
ಆಡಿದಾಕೆ
ಗೊಂಬೆ ಮಗುವ
ತಟ್ಟಿ ಮಲಗಿಸಿದಾಕೆ
ಮನೆಯದಾಟಿ
ಸೈಬರ್‌ಕೆಫೆ
ತಲುಪಿದ್ದಾಳೆ
ಬೆಳ್ಳಿಗೆಜ್ಜೆಯ
ಹುಡುಗಿ ಕೈನಿ ಏರಿದ್ದಾಳೆ
ಕಂಪ್ಯೂಟರ್‌ಗುಂಡಿ
ಒತ್ತುತ್ತಿದ್ದಾಳೆ
ಸಪ್ತಸಾಗರವ
ದಾಟಿ ತನ್ನ ಮಿತಿಯ
ವಿಸ್ತರಿಸಿ, ಎಲ್ಲರೂಟ
ದ ಎಂಜಲೆತ್ತಿ ಗೋಮೆ
ಬಳಿದ ಹುಡುಗಿ
ಬಾನಿನುದ್ದಕ್ಕೂ
ಹಾರಾಡುತ್ತಿದ್ದಾಳೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...