ಜಾರತ ಕರ್ಮವು ತೀರಿದ ಬಳಿಕ

ಜಾರತ ಕರ್ಮವು ತೀರಿದ ಬಳಿಕ
ಆರಿಲ್ಲದೋಯಿತು ಐಸುರ ಕೊಳಕ          ||ಪ||

ಮಾರನೋಮಿಗೆ ಕೂಡಿ ಬಂದಿತು
ಆರಿಗ್ಹೇಳಲಿ ತೀರಲರಿಯದು
ಮೂರು ಪುರವನು ನಾಶಮಾಡಿತು
ಘೋರತರದಲಾವಿಯ ಹಬ್ಬ              ||೧||

ಶುದ್ದಚಂದ್ರನ ಕಿರಣವು ಸೋಂಕಿ
ಎದ್ದು ಭೂಮಿಗೆ ಗುದ್ದಲಿ ಹಾಕಿ
ಸದ್ಯಕಿದು ವೇದಾಂತ ಶಾಸ್ತ್ರದ
ಮಧ್ಯದಲಿ ಹುಡಿಕ್ಯಾಡಿ ನೋಡಿಕೋ
ಬುದ್ಧಿವಂತರಿಗೆ ತಿಳಿಯತಕ್ಕದ್ದು
ಚೋದ್ಯವಾದಕ್ಷರ ಪದದಲಿ            ||೨||

ಪಾಪಾತ್ಮರಿಗೆ ಫಕೀರನು ಖೋಡಿ
ಕೆಂಪು ಕರದು ಹಸಿರು ಹಾಕಿ ಲಾಡಿ
ರೂಪ ತಪ್ಪಿಸಿಕೊಂಡು ಲೋಕದಿ
ಮನಿ ಮನಿಯ ತಿರಕೊಂಡು ತಿಂದರೆ
ಈ ಪದವಿ ಹ್ಯಾಂಗ ಸಿಕ್ಕೀತೋ
ಭೂಪ ಶಿಶುನಾಳಧೀಶ ಸಾರಿದ           ||೩||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕ ಪಯಣದಲ್ಲೊಂದು ಆಕಸ್ಮಿಕ
Next post ವಚನ ಸಂಪತ್ತು

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…