ಜಾರತ ಕರ್ಮವು ತೀರಿದ ಬಳಿಕ

ಜಾರತ ಕರ್ಮವು ತೀರಿದ ಬಳಿಕ
ಆರಿಲ್ಲದೋಯಿತು ಐಸುರ ಕೊಳಕ          ||ಪ||

ಮಾರನೋಮಿಗೆ ಕೂಡಿ ಬಂದಿತು
ಆರಿಗ್ಹೇಳಲಿ ತೀರಲರಿಯದು
ಮೂರು ಪುರವನು ನಾಶಮಾಡಿತು
ಘೋರತರದಲಾವಿಯ ಹಬ್ಬ              ||೧||

ಶುದ್ದಚಂದ್ರನ ಕಿರಣವು ಸೋಂಕಿ
ಎದ್ದು ಭೂಮಿಗೆ ಗುದ್ದಲಿ ಹಾಕಿ
ಸದ್ಯಕಿದು ವೇದಾಂತ ಶಾಸ್ತ್ರದ
ಮಧ್ಯದಲಿ ಹುಡಿಕ್ಯಾಡಿ ನೋಡಿಕೋ
ಬುದ್ಧಿವಂತರಿಗೆ ತಿಳಿಯತಕ್ಕದ್ದು
ಚೋದ್ಯವಾದಕ್ಷರ ಪದದಲಿ            ||೨||

ಪಾಪಾತ್ಮರಿಗೆ ಫಕೀರನು ಖೋಡಿ
ಕೆಂಪು ಕರದು ಹಸಿರು ಹಾಕಿ ಲಾಡಿ
ರೂಪ ತಪ್ಪಿಸಿಕೊಂಡು ಲೋಕದಿ
ಮನಿ ಮನಿಯ ತಿರಕೊಂಡು ತಿಂದರೆ
ಈ ಪದವಿ ಹ್ಯಾಂಗ ಸಿಕ್ಕೀತೋ
ಭೂಪ ಶಿಶುನಾಳಧೀಶ ಸಾರಿದ           ||೩||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕ ಪಯಣದಲ್ಲೊಂದು ಆಕಸ್ಮಿಕ
Next post ವಚನ ಸಂಪತ್ತು

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys