ಪ್ರಾಚೀನ

ಮಣ್ಣಿನ ಮಡಿಕೆ ಕುಡಿಕೆ
ಕಲಾಯಿ ಇಲ್ಲದೇ ಅಟ್ಟಕ್ಕೇರಿದ
ಹಿತ್ತಾಳೆ ತಾಮ್ರದ ಪಾತ್ರೆ

ಮುತ್ತಜ್ಜ ಅಜ್ಜ ಅಪ್ಪ
ಮತ್ತಿನ್ಯಾರೋ ಮಲಗೆದ್ದ
ತೊಟ್ಟಿಲು ಉಯ್ಯಾಲೆ
ಭೂತಾಕಾರದ ಮಂಚ
ಮೂಲೆಯಲಿ ತೂಗುವ ಕಂದೀಲು,
ಮುಖ ಕಾಣದ ಕನ್ನಡಿ
ಪ್ರಾಚ್ಯ ವಸ್ತು ಸಂಗ್ರಹದ ಸರಕು
ತಲೆತಲಾಂತರದಿಂದ ಬಂದ ಮುರುಕು
ಉಪಯೋಗಕ್ಕೆ ಬರುವಂತಿಲ್ಲ
ಉಪಯೋಗಿಸದೇ ಇರುವಂತಿಲ್ಲ.

ಅಪ್ಪ? ಅಲ್ಲಲ್ಲ ಅಜ್ಜ? ಅಲ್ಲ
ಮುತ್ತಜ್ಜ ಅಥವ ಅವನಜ್ಜ ನೆಟ್ಟ ಆಲ
ದಪ್ಪ ಬಿಳಲುಗಳಾಗಿ ಭೂಮಿ ಕೊರೆದು
ಈಗ ಬೇರಾವುದೋ ಬಿಳಲಾವುದೋ
ಎಲ್ಲ ಅಯೋಮಯ

ಒಂದೊಂದು ವಸ್ತುವಿನೊಂದಿಗೂ
ಒಂದೊಂದು ಹಳೆಮುಖಗಳು
ತಳುಕು ಹಾಕಿಕೊಂಡು ಎಲ್ಲಾ
ಸಿಕ್ಕಷ್ಟಕ್ಕೇ ಸೀದು
ಕೈ ತೊಳೆಯೋಣವೆಂದರೆ
ಕಳೆದುಹೋದ ಆತ್ಮಗಳು
ಕಣ್ಮುಂದೆ ಸುಳಿದು
ವೈಭವದ ಗತ ಇತಿಹಾಸ ಸಾರುತ್ತಾ
ಗಿರ್‍ರನೆ ರಾಟವಾಳ ಸುತ್ತಿದಂತೆ
ಮನಮಂದಿರದಲ್ಲಿ ನೆನಪುಗಳ ಸರಮಾಲೆ
ಹಳೆಬೇರು ಕಿತ್ತರೆ? ಹೊಸಚಿಗುರು ನೆಟ್ಟರೆ?
ತುಮುಲಗಳ ಒಡಲೊಳಗೆ
ಹಳೆಪಳೆ ಮುರುಕುಗಳೊಳಗೆ
ನನ್ನದೇ ಪ್ರತಿರೂಪ
ಥಟ್ಟನೆ ಕಂಡಂತಾಗಿ,

ಬಹುಶಃ ಹಿರಿಯ ಆತ್ಮಗಳು ಆಲನೆಟ್ಟಿದ್ದು
ನೇಣಿಗಲ್ಲ ಉಯ್ಯಾಲೆ ಜೀಕಲು
ಬೇಕೆಂದರೆ ಎಲ್ಲಾ ಬೇಕು
ಬೇಡೆಂದರೆ ಏನೂ ಬೇಡ!

ನೆನ್ನೆಯವರಿಗೆ ರಸ,
ಇಂದಿಗೆ ಕಸ
ಇಂದಿನ ನಮ್ಮ ಹಾಸು
ನಾಳಿನವರಿಗೆ ಕಾಲೊರೆಸು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮೂರ ಹುಡುಗ
Next post ಅಂದು-ಇಂದು

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಜಂಬದ ಕೋಳಿ

    ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…