ಪ್ರಾಚೀನ

ಮಣ್ಣಿನ ಮಡಿಕೆ ಕುಡಿಕೆ
ಕಲಾಯಿ ಇಲ್ಲದೇ ಅಟ್ಟಕ್ಕೇರಿದ
ಹಿತ್ತಾಳೆ ತಾಮ್ರದ ಪಾತ್ರೆ

ಮುತ್ತಜ್ಜ ಅಜ್ಜ ಅಪ್ಪ
ಮತ್ತಿನ್ಯಾರೋ ಮಲಗೆದ್ದ
ತೊಟ್ಟಿಲು ಉಯ್ಯಾಲೆ
ಭೂತಾಕಾರದ ಮಂಚ
ಮೂಲೆಯಲಿ ತೂಗುವ ಕಂದೀಲು,
ಮುಖ ಕಾಣದ ಕನ್ನಡಿ
ಪ್ರಾಚ್ಯ ವಸ್ತು ಸಂಗ್ರಹದ ಸರಕು
ತಲೆತಲಾಂತರದಿಂದ ಬಂದ ಮುರುಕು
ಉಪಯೋಗಕ್ಕೆ ಬರುವಂತಿಲ್ಲ
ಉಪಯೋಗಿಸದೇ ಇರುವಂತಿಲ್ಲ.

ಅಪ್ಪ? ಅಲ್ಲಲ್ಲ ಅಜ್ಜ? ಅಲ್ಲ
ಮುತ್ತಜ್ಜ ಅಥವ ಅವನಜ್ಜ ನೆಟ್ಟ ಆಲ
ದಪ್ಪ ಬಿಳಲುಗಳಾಗಿ ಭೂಮಿ ಕೊರೆದು
ಈಗ ಬೇರಾವುದೋ ಬಿಳಲಾವುದೋ
ಎಲ್ಲ ಅಯೋಮಯ

ಒಂದೊಂದು ವಸ್ತುವಿನೊಂದಿಗೂ
ಒಂದೊಂದು ಹಳೆಮುಖಗಳು
ತಳುಕು ಹಾಕಿಕೊಂಡು ಎಲ್ಲಾ
ಸಿಕ್ಕಷ್ಟಕ್ಕೇ ಸೀದು
ಕೈ ತೊಳೆಯೋಣವೆಂದರೆ
ಕಳೆದುಹೋದ ಆತ್ಮಗಳು
ಕಣ್ಮುಂದೆ ಸುಳಿದು
ವೈಭವದ ಗತ ಇತಿಹಾಸ ಸಾರುತ್ತಾ
ಗಿರ್‍ರನೆ ರಾಟವಾಳ ಸುತ್ತಿದಂತೆ
ಮನಮಂದಿರದಲ್ಲಿ ನೆನಪುಗಳ ಸರಮಾಲೆ
ಹಳೆಬೇರು ಕಿತ್ತರೆ? ಹೊಸಚಿಗುರು ನೆಟ್ಟರೆ?
ತುಮುಲಗಳ ಒಡಲೊಳಗೆ
ಹಳೆಪಳೆ ಮುರುಕುಗಳೊಳಗೆ
ನನ್ನದೇ ಪ್ರತಿರೂಪ
ಥಟ್ಟನೆ ಕಂಡಂತಾಗಿ,

ಬಹುಶಃ ಹಿರಿಯ ಆತ್ಮಗಳು ಆಲನೆಟ್ಟಿದ್ದು
ನೇಣಿಗಲ್ಲ ಉಯ್ಯಾಲೆ ಜೀಕಲು
ಬೇಕೆಂದರೆ ಎಲ್ಲಾ ಬೇಕು
ಬೇಡೆಂದರೆ ಏನೂ ಬೇಡ!

ನೆನ್ನೆಯವರಿಗೆ ರಸ,
ಇಂದಿಗೆ ಕಸ
ಇಂದಿನ ನಮ್ಮ ಹಾಸು
ನಾಳಿನವರಿಗೆ ಕಾಲೊರೆಸು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮೂರ ಹುಡುಗ
Next post ಅಂದು-ಇಂದು

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…