Home / ಲೇಖನ / ಇತರೆ / ೧೮೬೬

೧೮೬೬

ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಹೊಸದೊಂದು ಭಯಂಕರ ಮಾಹಿತಿಯೊಂದನ್ನು ಹೊರಗಡೆವಿದ್ದು ಭವ್ಯ ಭಾರತದಲ್ಲಿಂದು- ಒಟ್ಟು ೧೮೬೬ ನೋಂದಾಯಿತ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆಂದು ಅಧಿಕೃತವಾಗಿ ಘೋಷಿಸಿರುವುದು.

ಕಳೆದ ವರ್ಷ ೨೦೧೪ ಮಾರ್ಚಿನಿಂದ ೨೦೧೫ರ ಜುಲೈವರೆಗೆ ಹೊಸ ಹೊಸ ೨೩೯ ರಾಜಕೀಯ ಪಕ್ಷಗಳೂ ನೋಂದಣಿ ಮಾಡಿಕೊಳ್ಳುವ ಮೂಲಕ ಒಟ್ಟು ಸಂಖ್ಯೆ ೧೮೬೬ ಕ್ಕೇರಿದೆ!

ಈ ಪೈಕಿ ೫೬ ಪಕ್ಷಗಳು ರಾಷ್ಟ್ರೀಯ ರಾಜ್ಯ ಮಟ್ಟದಲ್ಲಿ ಗುರ್ತಿಸಿಕೊಂಡವುಗಳು. ಆದರೆ ಉಳಿದುವುಗಳು ಮಾನ್ಯತೆ ಪಡೆದಿರದ ಆದರೆ ನೋಂದಾಯಿತ ಪಕ್ಷಗಳು ಎಂದು ಆಯೋಗ ಸ್ಪಷ್ಟಪಡಿಸಿದೆ.

೨೦೧೪ರ ಮಾರ್ಚ್ ೫ ರಂದು ಲೋಕಸಭಾ ಚುನಾವಣೆ ಪ್ರಕಟವಾದ ನಂತರ ೨೬ ಹೊಸ ಪಕ್ಷಗಳು ನೋಂದಣಿ ಮಾಡಿಕೊಳ್ಳುವ ಮೂಲಕ ೧೬೨೭ ನೋಂದಾಯಿತ ರಾಜಕೀಯ ಪಕ್ಷಗಳಾದವು ಎಂದು ಆಯೋಗ ಖಚಿತ ಪಡಿಸಿದೆ.

ಈಗಾಗಲೇ ನೋಂದಣಿಯಾದರೂ ಸಕ್ರಿಯವಲ್ಲದ ಈ ಪಕ್ಷಗಳು ಸ್ವಂತ ಚಿನ್ಹೆಯೊಂದಿಗೆ ಸರ್ಧಿಸುವಂತಿರಲಿಲ್ಲ. ಅಂತಹ ಆಶಯವೂ ಅವುಗಳಿಗಿರಲಿಲ್ಲ. ಹಾಗಾಗಿ ಆಯೋಗ ಬಿಡುಗಡೆ ಮಾಡಿದ ಸ್ವತಂತ್ರ ಚಿಹ್ನೆಯ ಪಟ್ಟಿಯಿಂದ ಯಾವುದಾದರೊಂದನ್ನು ಆಯ್ದುಕೊಂಡು ಅವು ಸ್ಪರ್ಧಿಸಬೇಕಿತ್ತು. ಆಯೋಗದಲ್ಲಿ ಅಂತಹ ೮೪ ಚಿನ್ಹೆಗಳು ಲಭ್ಯ ಎಂದೂ ಕುತೂಹಲಕಾರಿ ಅಂಶವನ್ನು ಚುನಾವಣಾ ಆಯೋಗ ವಿವರಿಸಿದೆ.

ಚಪ್ಪಲಿಗಳು, ಬಲೂನ್, ಕಪಾಟ, ಹವಾನಿಯಂತ್ರಕ, ತೆಂಗಿನಕಾಯಿ, ಕಿಟಕಿ, ನೆಲಹಾಸು, ಬಾಟಲಿ, ಬ್ರೆಡ್… ಇವೆಲ್ಲ ಆಯೋಗವು ಬಿಡುಗಡೆ ಮಾಡಿರುವ ಈ ಉಚಿತ ಚಿಹ್ನೆಗಳ ಪಟ್ಟಿಯಲ್ಲಿ ಕೆಲವಾಗಿರುತ್ತವೆಂದು ತಿಳಿಸಿರುವರು.

ರಾಜಕೀಯ ಪಕ್ಷವೊಂದು ರಾಜ್ಯ ಇಲ್ಲವೇ ರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು “ಮಾನ್ಯತೆ ಪಡೆದ” ಎಂದು ಗುರ್ತಿಸಿ ಕೊಳ್ಳಬೇಕಾದರೆ ಆಯೋಗವೇ ನಿಗದಿಪಡಿಸಿದ ಕೆಲವು ಮಾನದಂಡಗಳಿವೆ! ಸತತ ಐದು ವರ್ಷಗಳ ಕಾಲ ಅದು ಚಟುವಟಿಕೆಗಳಿಂದ ಕೂಡಿರಬೇಕು. ಇಲ್ಲವೇ ಚುನಾವಣೆಯಲ್ಲಿ ಯಾವುದೇ ವಿಧಾನಸಭಾ- ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಗೊಂಡ ಒಟ್ಟು ಮತಗಳಲ್ಲಿ ಕನಿಷ್ಠ ಶೇಕಡ ೪% ರಷ್ಟಾದರೂ ಮತಗಳನ್ನು ಗಳಿಸಲೇಬೇಕು.

ಈ ತನಕ ಬಿಜೆಪಿ – ಬಿ‌ಎಸ್‌ಪಿ- ಕಾಂಗ್ರೆಸ್, ಸಿಪಿ‌ಐ, ಸಿಪಿ‌ಎಂ, ಎನ್‌ಸಿಪಿಗಳು ರಾಷ್ಟ್ರೀಯ ಪಕ್ಷಗಳೆಂದು ಗುರ್ತಿಸಿಕೊಂಡಿದೆ. ಆದರೆ ದೇಶದಲ್ಲಿ ಒಟ್ಟು ೫೦ ಮಾನ್ಯತೆ ಪಡೆದ ಪಕ್ಷಗಳಿವೆಯೆಂದು ಚುನಾವಣೆ ಆಯೋಗವು ಖಚಿತಪಡಿಸಿದೆ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...