Home / ಲೇಖನ / ಇತರೆ / ೧೮೬೬

೧೮೬೬

ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಹೊಸದೊಂದು ಭಯಂಕರ ಮಾಹಿತಿಯೊಂದನ್ನು ಹೊರಗಡೆವಿದ್ದು ಭವ್ಯ ಭಾರತದಲ್ಲಿಂದು- ಒಟ್ಟು ೧೮೬೬ ನೋಂದಾಯಿತ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆಂದು ಅಧಿಕೃತವಾಗಿ ಘೋಷಿಸಿರುವುದು.

ಕಳೆದ ವರ್ಷ ೨೦೧೪ ಮಾರ್ಚಿನಿಂದ ೨೦೧೫ರ ಜುಲೈವರೆಗೆ ಹೊಸ ಹೊಸ ೨೩೯ ರಾಜಕೀಯ ಪಕ್ಷಗಳೂ ನೋಂದಣಿ ಮಾಡಿಕೊಳ್ಳುವ ಮೂಲಕ ಒಟ್ಟು ಸಂಖ್ಯೆ ೧೮೬೬ ಕ್ಕೇರಿದೆ!

ಈ ಪೈಕಿ ೫೬ ಪಕ್ಷಗಳು ರಾಷ್ಟ್ರೀಯ ರಾಜ್ಯ ಮಟ್ಟದಲ್ಲಿ ಗುರ್ತಿಸಿಕೊಂಡವುಗಳು. ಆದರೆ ಉಳಿದುವುಗಳು ಮಾನ್ಯತೆ ಪಡೆದಿರದ ಆದರೆ ನೋಂದಾಯಿತ ಪಕ್ಷಗಳು ಎಂದು ಆಯೋಗ ಸ್ಪಷ್ಟಪಡಿಸಿದೆ.

೨೦೧೪ರ ಮಾರ್ಚ್ ೫ ರಂದು ಲೋಕಸಭಾ ಚುನಾವಣೆ ಪ್ರಕಟವಾದ ನಂತರ ೨೬ ಹೊಸ ಪಕ್ಷಗಳು ನೋಂದಣಿ ಮಾಡಿಕೊಳ್ಳುವ ಮೂಲಕ ೧೬೨೭ ನೋಂದಾಯಿತ ರಾಜಕೀಯ ಪಕ್ಷಗಳಾದವು ಎಂದು ಆಯೋಗ ಖಚಿತ ಪಡಿಸಿದೆ.

ಈಗಾಗಲೇ ನೋಂದಣಿಯಾದರೂ ಸಕ್ರಿಯವಲ್ಲದ ಈ ಪಕ್ಷಗಳು ಸ್ವಂತ ಚಿನ್ಹೆಯೊಂದಿಗೆ ಸರ್ಧಿಸುವಂತಿರಲಿಲ್ಲ. ಅಂತಹ ಆಶಯವೂ ಅವುಗಳಿಗಿರಲಿಲ್ಲ. ಹಾಗಾಗಿ ಆಯೋಗ ಬಿಡುಗಡೆ ಮಾಡಿದ ಸ್ವತಂತ್ರ ಚಿಹ್ನೆಯ ಪಟ್ಟಿಯಿಂದ ಯಾವುದಾದರೊಂದನ್ನು ಆಯ್ದುಕೊಂಡು ಅವು ಸ್ಪರ್ಧಿಸಬೇಕಿತ್ತು. ಆಯೋಗದಲ್ಲಿ ಅಂತಹ ೮೪ ಚಿನ್ಹೆಗಳು ಲಭ್ಯ ಎಂದೂ ಕುತೂಹಲಕಾರಿ ಅಂಶವನ್ನು ಚುನಾವಣಾ ಆಯೋಗ ವಿವರಿಸಿದೆ.

ಚಪ್ಪಲಿಗಳು, ಬಲೂನ್, ಕಪಾಟ, ಹವಾನಿಯಂತ್ರಕ, ತೆಂಗಿನಕಾಯಿ, ಕಿಟಕಿ, ನೆಲಹಾಸು, ಬಾಟಲಿ, ಬ್ರೆಡ್… ಇವೆಲ್ಲ ಆಯೋಗವು ಬಿಡುಗಡೆ ಮಾಡಿರುವ ಈ ಉಚಿತ ಚಿಹ್ನೆಗಳ ಪಟ್ಟಿಯಲ್ಲಿ ಕೆಲವಾಗಿರುತ್ತವೆಂದು ತಿಳಿಸಿರುವರು.

ರಾಜಕೀಯ ಪಕ್ಷವೊಂದು ರಾಜ್ಯ ಇಲ್ಲವೇ ರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು “ಮಾನ್ಯತೆ ಪಡೆದ” ಎಂದು ಗುರ್ತಿಸಿ ಕೊಳ್ಳಬೇಕಾದರೆ ಆಯೋಗವೇ ನಿಗದಿಪಡಿಸಿದ ಕೆಲವು ಮಾನದಂಡಗಳಿವೆ! ಸತತ ಐದು ವರ್ಷಗಳ ಕಾಲ ಅದು ಚಟುವಟಿಕೆಗಳಿಂದ ಕೂಡಿರಬೇಕು. ಇಲ್ಲವೇ ಚುನಾವಣೆಯಲ್ಲಿ ಯಾವುದೇ ವಿಧಾನಸಭಾ- ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಗೊಂಡ ಒಟ್ಟು ಮತಗಳಲ್ಲಿ ಕನಿಷ್ಠ ಶೇಕಡ ೪% ರಷ್ಟಾದರೂ ಮತಗಳನ್ನು ಗಳಿಸಲೇಬೇಕು.

ಈ ತನಕ ಬಿಜೆಪಿ – ಬಿ‌ಎಸ್‌ಪಿ- ಕಾಂಗ್ರೆಸ್, ಸಿಪಿ‌ಐ, ಸಿಪಿ‌ಎಂ, ಎನ್‌ಸಿಪಿಗಳು ರಾಷ್ಟ್ರೀಯ ಪಕ್ಷಗಳೆಂದು ಗುರ್ತಿಸಿಕೊಂಡಿದೆ. ಆದರೆ ದೇಶದಲ್ಲಿ ಒಟ್ಟು ೫೦ ಮಾನ್ಯತೆ ಪಡೆದ ಪಕ್ಷಗಳಿವೆಯೆಂದು ಚುನಾವಣೆ ಆಯೋಗವು ಖಚಿತಪಡಿಸಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...