Home / ಕವನ / ಕವಿತೆ / ಅದರ ಪಾಡಿಗೆ

ಅದರ ಪಾಡಿಗೆ

ಕನಸಿಗನ ಕನವರಿಕೆ ಕವನ ಅಲ್ಲಲ್ಲಿ
ವಾಕ್ಯ ಮುರಿದ ವ್ಯಾಕರಣ ತನಗೆ ತಾನೇ
ಬದ್ಧ ಉಳಿದಂತೆ ಎಲ್ಲವೂ ಅಸಂಬದ್ಧ
ಕಾರ್ಯವ ಹುಡುಕುವುದು ಕಾರಣ

ಮಧ್ಯರಾತ್ರಿ ಮಲಗಿದ ಧರಿತ್ರಿ ವಿಸ್ಮಯ
ತುಂಬಿದ ಜನನಿಬಿಡ ಸಂಜ್ಞೆ ಬಿಂಬಿಸುವ
ಹಾಗೆ ದಿಂಬಿನ ಮೇಲೆ ಬಿಂಬ ಮಗ್ಗುಲು
ಬದಲಿಸಿದ ಉದ್ಧತ ಪ್ರಜ್ಞೆ

ಕದವಿಕ್ಕಿ ಬೀಗದ ಕೈ ಬಿಸಾಕಿದ ಪದಗಳ
ನಡುವೆ ಅಂತರ ಬಹಳ ದಾಟಿದವನೂ
ನಾನೆ ಕುಸಿದವನೂ ನಾನೆ
ದಿಡ್ಡಿ ಬಾಗಿಲ ಹತ್ತಿರ

ಆಲಸಿಗ ಕೈಗೊಂಡ ಸುದೀರ್ಘ
ಯಾನ ಯಾವುದೇ ಪೂರ್ವಸಿದ್ಧತೆ ವಿನಾ
ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ ಎಲ್ಲಿ
ರುವೆನೆಂಬುದನೆ ಮರೆತವನ

ಕೆಲವರು ನದಿ ದಾಟಿ ಹೋದರು
ಕೆಲವರು ಸೂರ್ಯಾಸ್ತ ನೋಡುತ್ತ
ನಿಂತರು ಕೆಲವರು ಗ್ರಾಮಾಂತರಗಳಲ್ಲಿ
ಕರಗಿದರು ಕೆಲವರು ಎದ್ದು ಹೋದರೂ

ಇದ್ದಲ್ಲಿ ಇದ್ದರು ಎಲ್ಲ ವೈರುಧ್ಯಗಳೂ
ಸರಿಗಮ ಒಂದೇ ಸಾಲಿನಲ್ಲಿ ಬೆಂಕಿ ಮತ್ತು
ಹಿಮ ಕಾಡಿನಲ್ಲಿ ವ್ಯಾಘ್ರ ಬಯಲಲ್ಲಿ ದನ
ಮಧ್ಯಾಹ್ನ ಟಾರಿನ ಪರಿಮಳ ಸಂಜೆ ಮಲ್ಲಿಗೆಯ

ಘಮಘಮ ಇರುಳೆಲ್ಲಾ ಎಚ್ಚರವಿದ್ದ
ಗೂಬೆ ಹಗಲು ತೂಗುವುದು ನಿದ್ದೆ
ಮಳೆಗೆ ಕಾಯುವ ಅಣಬೆಯ ಅತಿಸೂಕ್ಷ್ಮ ಬಿತ್ತು
ಬೇಸಿಗೆಯೆಲ್ಲಾ ಬಣಬೆಯೊಳಗಿತ್ತು

ಮನೆಯನೊಂದ ಕಟ್ಟಿಸಲೇನು ಮೋಡದ
ಕೆಳಗೆ ಮಳೆನೀರು ಯಾವ ಲೆಕ್ಕ ಬೇಸಿಗೆಯ
ಸೆಕೆ ಯಾವ ಲೆಕ್ಕ ಮೋಡವದರ ನಾಡಿಗೆ
ಮನೆ ಅದರ ಪಾಡಿಗೆ-ಎನ್ನುವುದೊಂದು
ಹಳೇ ಪದ್ಯ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್