Home / ಕವನ / ಕವಿತೆ / ಅದರ ಪಾಡಿಗೆ

ಅದರ ಪಾಡಿಗೆ

ಕನಸಿಗನ ಕನವರಿಕೆ ಕವನ ಅಲ್ಲಲ್ಲಿ
ವಾಕ್ಯ ಮುರಿದ ವ್ಯಾಕರಣ ತನಗೆ ತಾನೇ
ಬದ್ಧ ಉಳಿದಂತೆ ಎಲ್ಲವೂ ಅಸಂಬದ್ಧ
ಕಾರ್ಯವ ಹುಡುಕುವುದು ಕಾರಣ

ಮಧ್ಯರಾತ್ರಿ ಮಲಗಿದ ಧರಿತ್ರಿ ವಿಸ್ಮಯ
ತುಂಬಿದ ಜನನಿಬಿಡ ಸಂಜ್ಞೆ ಬಿಂಬಿಸುವ
ಹಾಗೆ ದಿಂಬಿನ ಮೇಲೆ ಬಿಂಬ ಮಗ್ಗುಲು
ಬದಲಿಸಿದ ಉದ್ಧತ ಪ್ರಜ್ಞೆ

ಕದವಿಕ್ಕಿ ಬೀಗದ ಕೈ ಬಿಸಾಕಿದ ಪದಗಳ
ನಡುವೆ ಅಂತರ ಬಹಳ ದಾಟಿದವನೂ
ನಾನೆ ಕುಸಿದವನೂ ನಾನೆ
ದಿಡ್ಡಿ ಬಾಗಿಲ ಹತ್ತಿರ

ಆಲಸಿಗ ಕೈಗೊಂಡ ಸುದೀರ್ಘ
ಯಾನ ಯಾವುದೇ ಪೂರ್ವಸಿದ್ಧತೆ ವಿನಾ
ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ ಎಲ್ಲಿ
ರುವೆನೆಂಬುದನೆ ಮರೆತವನ

ಕೆಲವರು ನದಿ ದಾಟಿ ಹೋದರು
ಕೆಲವರು ಸೂರ್ಯಾಸ್ತ ನೋಡುತ್ತ
ನಿಂತರು ಕೆಲವರು ಗ್ರಾಮಾಂತರಗಳಲ್ಲಿ
ಕರಗಿದರು ಕೆಲವರು ಎದ್ದು ಹೋದರೂ

ಇದ್ದಲ್ಲಿ ಇದ್ದರು ಎಲ್ಲ ವೈರುಧ್ಯಗಳೂ
ಸರಿಗಮ ಒಂದೇ ಸಾಲಿನಲ್ಲಿ ಬೆಂಕಿ ಮತ್ತು
ಹಿಮ ಕಾಡಿನಲ್ಲಿ ವ್ಯಾಘ್ರ ಬಯಲಲ್ಲಿ ದನ
ಮಧ್ಯಾಹ್ನ ಟಾರಿನ ಪರಿಮಳ ಸಂಜೆ ಮಲ್ಲಿಗೆಯ

ಘಮಘಮ ಇರುಳೆಲ್ಲಾ ಎಚ್ಚರವಿದ್ದ
ಗೂಬೆ ಹಗಲು ತೂಗುವುದು ನಿದ್ದೆ
ಮಳೆಗೆ ಕಾಯುವ ಅಣಬೆಯ ಅತಿಸೂಕ್ಷ್ಮ ಬಿತ್ತು
ಬೇಸಿಗೆಯೆಲ್ಲಾ ಬಣಬೆಯೊಳಗಿತ್ತು

ಮನೆಯನೊಂದ ಕಟ್ಟಿಸಲೇನು ಮೋಡದ
ಕೆಳಗೆ ಮಳೆನೀರು ಯಾವ ಲೆಕ್ಕ ಬೇಸಿಗೆಯ
ಸೆಕೆ ಯಾವ ಲೆಕ್ಕ ಮೋಡವದರ ನಾಡಿಗೆ
ಮನೆ ಅದರ ಪಾಡಿಗೆ-ಎನ್ನುವುದೊಂದು
ಹಳೇ ಪದ್ಯ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...