Home / ಕವನ / ಕವಿತೆ / ಅದರ ಪಾಡಿಗೆ

ಅದರ ಪಾಡಿಗೆ

ಕನಸಿಗನ ಕನವರಿಕೆ ಕವನ ಅಲ್ಲಲ್ಲಿ
ವಾಕ್ಯ ಮುರಿದ ವ್ಯಾಕರಣ ತನಗೆ ತಾನೇ
ಬದ್ಧ ಉಳಿದಂತೆ ಎಲ್ಲವೂ ಅಸಂಬದ್ಧ
ಕಾರ್ಯವ ಹುಡುಕುವುದು ಕಾರಣ

ಮಧ್ಯರಾತ್ರಿ ಮಲಗಿದ ಧರಿತ್ರಿ ವಿಸ್ಮಯ
ತುಂಬಿದ ಜನನಿಬಿಡ ಸಂಜ್ಞೆ ಬಿಂಬಿಸುವ
ಹಾಗೆ ದಿಂಬಿನ ಮೇಲೆ ಬಿಂಬ ಮಗ್ಗುಲು
ಬದಲಿಸಿದ ಉದ್ಧತ ಪ್ರಜ್ಞೆ

ಕದವಿಕ್ಕಿ ಬೀಗದ ಕೈ ಬಿಸಾಕಿದ ಪದಗಳ
ನಡುವೆ ಅಂತರ ಬಹಳ ದಾಟಿದವನೂ
ನಾನೆ ಕುಸಿದವನೂ ನಾನೆ
ದಿಡ್ಡಿ ಬಾಗಿಲ ಹತ್ತಿರ

ಆಲಸಿಗ ಕೈಗೊಂಡ ಸುದೀರ್ಘ
ಯಾನ ಯಾವುದೇ ಪೂರ್ವಸಿದ್ಧತೆ ವಿನಾ
ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ ಎಲ್ಲಿ
ರುವೆನೆಂಬುದನೆ ಮರೆತವನ

ಕೆಲವರು ನದಿ ದಾಟಿ ಹೋದರು
ಕೆಲವರು ಸೂರ್ಯಾಸ್ತ ನೋಡುತ್ತ
ನಿಂತರು ಕೆಲವರು ಗ್ರಾಮಾಂತರಗಳಲ್ಲಿ
ಕರಗಿದರು ಕೆಲವರು ಎದ್ದು ಹೋದರೂ

ಇದ್ದಲ್ಲಿ ಇದ್ದರು ಎಲ್ಲ ವೈರುಧ್ಯಗಳೂ
ಸರಿಗಮ ಒಂದೇ ಸಾಲಿನಲ್ಲಿ ಬೆಂಕಿ ಮತ್ತು
ಹಿಮ ಕಾಡಿನಲ್ಲಿ ವ್ಯಾಘ್ರ ಬಯಲಲ್ಲಿ ದನ
ಮಧ್ಯಾಹ್ನ ಟಾರಿನ ಪರಿಮಳ ಸಂಜೆ ಮಲ್ಲಿಗೆಯ

ಘಮಘಮ ಇರುಳೆಲ್ಲಾ ಎಚ್ಚರವಿದ್ದ
ಗೂಬೆ ಹಗಲು ತೂಗುವುದು ನಿದ್ದೆ
ಮಳೆಗೆ ಕಾಯುವ ಅಣಬೆಯ ಅತಿಸೂಕ್ಷ್ಮ ಬಿತ್ತು
ಬೇಸಿಗೆಯೆಲ್ಲಾ ಬಣಬೆಯೊಳಗಿತ್ತು

ಮನೆಯನೊಂದ ಕಟ್ಟಿಸಲೇನು ಮೋಡದ
ಕೆಳಗೆ ಮಳೆನೀರು ಯಾವ ಲೆಕ್ಕ ಬೇಸಿಗೆಯ
ಸೆಕೆ ಯಾವ ಲೆಕ್ಕ ಮೋಡವದರ ನಾಡಿಗೆ
ಮನೆ ಅದರ ಪಾಡಿಗೆ-ಎನ್ನುವುದೊಂದು
ಹಳೇ ಪದ್ಯ
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...