ಸೂರ್ಯ ಹೊರಳಿದ ಕಿಟಕಿಯಲಿ ಅವನ ಆಕೃತಿ ಸರಿದು ಕೌ ನೆರಳು ನೆನಪಿನ ಬೆರಳುಗಳು ಮೀಟಿ ನಡುವೆ ಅರಳಿದೆ ಜೀವ ವಿಕಾಸ ಕಾಪಿಡುವ ಕೈಗಳು ಬಿಗಿದಪ್ಪಿವೆ ನೀಲಬಾನು ಒಂದುಗೂಡಿದ ಘನ ಎಲ್ಲಾ ನದಿಗಳು ಹರಿದು ಸೇರಿವೆ ಕಡಲು ಚಿಮ್ಮಿವೆ ಜಗದಗಲ ತೆರೆಗಳ ಹೊಸ ಹಾಡು ...

ಎದೆ ತಂತಿ ಮಿಡಿದಾಗ ಸಿಡಿದ ತಾರಕೆಗಳನು ಮಾಲೆಯಾಗಳವಡಿಸಿ, ಉಷೆಯ ಚೆಂಗೊರಳಿನಲಿ ಹಾರವಾಗಿಡುವಾಸೆ ಮನವ ತುಂಬಿರಲಾನು ಹಿಗ್ಗಿನಲಿ ಕೂಡಿಸಿದೆ ಅವನೆಲ್ಲ. ಇರುಳಿನಲಿ ಬಚ್ಚಿಟ್ಟು, ಕಾಣದಿದ್ದಾ ಪೋರ, ರವಿಯೆದ್ದು, ಕಿಚ್ಚಿನಲಿ ಅವುಗಳನು ನೂಕಿದನು. ಅವು ಓ...

ಅಧ್ಯಾಯ ೩೧ ನಿರಂಜನ್ ರೇ ಗೊಳ್ಳನೆ ನಕ್ಕರು. ಅವರ ಪಕ್ಕದಲ್ಲಿದ್ದ ಪ್ರೊಫೆಸರ್ ಪದ್ಮಾವತಿಯ ಕದಪು ಕೆಂಪಾಯಿತು. ಪ್ರೊಫೆಸರ್ ಪಾಣಿಗ್ರಾಹಿ ಬಿಚ್ಚುಬಾಯಿ ಜೋಕು ಹೇಳಿದ್ದರು. ರೇ ನಕ್ಕಾಗ ಇಡೀ ದೇಹ ಕುಲುಕುತ್ತದೆ. ಮುಖದ ಮೇಲಿನ ನರಗಳು ಸೆಟೆಯುತ್ತವೆ. ಅ...

ಬೆಳಿಗೆ ಜಾವದಿ ಸೂರ್ಯೋದಯ ವೀಕ್ಷಿಸಿ ಮನ ಸೂರೆಗೊಂಡಿದೆ ಪ್ರಕೃತಿ ಆನಂದದಿ ಕರುಣೆಯ ಸುಂದರ ಸುಗಂಧದಿ ಗಾಳಿ ಬೀಸುತ್ತಿದೆ. ತನು ಎಲ್ಲಿಲ್ಲದ ಸಂತಸ ಕಂಡಿದೆ ಗಾಳಿ ಸೇವಿಸುತ್ತ ನಾ ಹೊರಟ್ಟಿದೆ ದೂರದಿ ಬೆಟ್ಟವ ನಾ ಹತ್ತಿದೆ ಮೇಲೆರುತ್ತಲೇ ಮನ ಹರ್ಷದಿ ಕ...

ಎಡೆಬಿಡದೆ ಸುತ್ತುವುದು ಅಪ್ಪುವಿನ ರೈಲು ಹೈದರಾಬಾದಿನ ಬಯಲು ಫಲಕ್‌ನುಮಾದಿಂದ ಬೋಲಾರಾಮಿಗೆ ಯಾಕೆ ಏನೆಂಬ ಗೊಡವೆಯಿಲ್ಲದೆ ಕರೆಯುವುದು ಮಂದಿಯನು ರಾತ್ರಿಹಗಲು ಮಲಕ್‌ಪೇಟೆ ಕಾಚಿಗುಡ ಸೀತಾಫಲ ಮಂಡಿ ಎಲ್ಲ ಕಡೆಗೂ ಇದೊಂದೇ ಬಂಡಿ ಬೆಳಿಗ್ಗೆ ಮಧ್ಯಾಹ್ನ ಸ...

ನನ್ನಪ್ಪ ದುಡಿಮೆಗಾರ ಹೆಣಗಾಡಿ ಕೊಂಡ ಗದ್ದೆಗಳ ಮತ್ತೆ ಹದಮಾಡಿ ಹಸನುಗೈದ ಅಸಲಿಗೆ ಈಗ ಅಲ್ಲಿ ಗದ್ದೆಗಳೇ ಇಲ್ಲ ಬದಲಿಗೆ ತೋಟಗಳು ತಲೆ ಎತ್ತಿದೆ ತೆಂಗು ಕಂಗು ವಾಣಿಜ್ಯ ಬೆಳೆಗಳು ನನ್ನಣ್ಣನ ಜೊತೆಗೂಡಿ ಎತ್ತರ ಜಿಗಿವಾಡುತ್ತಿದ್ದ ಗದ್ದೆ ಹಾಳಿಗಳು ಈಗ ...

ತನು ತುಂಬಿ ಮನ ತುಂಬಿ ಭಾವ ತುಂಬಿ ರಾಗ ತುಂಬಿ ತುಂಬಿತೋ ಭಕ್ತಿ ಎಂಬ ಕೊಡವು|| ಗಂಗೆ ತುಂಬಿ ಯಮುನೆ ತುಂಬಿ ತುಂಗೆ ತುಂಬಿ ಭದ್ರೆ ತುಂಬಿ ತುಂಬಿತೋ ಅತ್ತೆ ನಾದಿನಿಯರ ಪ್ರೇಮದ ಕೊಡವು || ಬಣ್ಣ ತುಂಬಿ ಬಿಂಕ ತುಂಬಿ ಬೆಡಗು ತುಂಬಿ ಬಿನ್ನಾಣ ತುಂಬಿ ತ...

ದಿನವೂ ಬಂದು ಬಿಂಕ ಬಿನ್ನಾಣ ಮಾಡಿ ಹೋಗುವ ಈ ಹವಳದ ಕಣ್ಣಿನ ಪಾರಿವಾಳ ಅವನ ಚೀಟಿಯನ್ನು ಕಾಲಿಗೆ ಕಟ್ಟಿಕೊಂಡು ಬರಬಹುದೆಂದು ಕಾದಿದ್ದೆ, ಆದರೆ ಚೀಟಿ ಬರಲಿಲ್ಲ, ಸದ್ಯ ಅವನೇ ಬಂದುಬಿಟ್ಟ. *****...

ನೀಲ ವ್ಯೋಮ ಶಾಮವಾಗಿ; ಮುತ್ತು ಕಾಳು ಉದುರಿ ಜಾರಿ ಹಸಿದು ಮೌನವಾದ ಜಗಕೆ ಮಾತು ಕಲಿಸಿತು ಗಗನ ಭೇರಿ ಧ್ವನಿಯ ಮಾಡಿ; ಮುಗಿಲು ಮುತ್ತಿ ಮಿಂಚುಕಾರಿ ಸಲಿಲ ಸೋಂಪು ವೀಣೆ ಮಿಡಿಯಿತು ರವಿಯ ಉರಿಯ ಬೆವರ ಭಾರ ನೆಲವ ಹಗುರು ಮಾಡಿತು ಹಸಿ ಚಿಮ್ಮಿ ಹರ್ಷ ಹೊಮ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...