ಎದೆ ತಂತಿ ಮಿಡಿದಾಗ

ಎದೆ ತಂತಿ ಮಿಡಿದಾಗ ಸಿಡಿದ ತಾರಕೆಗಳನು
ಮಾಲೆಯಾಗಳವಡಿಸಿ, ಉಷೆಯ ಚೆಂಗೊರಳಿನಲಿ
ಹಾರವಾಗಿಡುವಾಸೆ ಮನವ ತುಂಬಿರಲಾನು
ಹಿಗ್ಗಿನಲಿ ಕೂಡಿಸಿದೆ ಅವನೆಲ್ಲ. ಇರುಳಿನಲಿ
ಬಚ್ಚಿಟ್ಟು, ಕಾಣದಿದ್ದಾ ಪೋರ, ರವಿಯೆದ್ದು,
ಕಿಚ್ಚಿನಲಿ ಅವುಗಳನು ನೂಕಿದನು. ಅವು ಓಡಿ
ಬಿರಿದ ತಾವರೆಯೆದೆಯ ಮೃದುತೆಯುಡಿಯಲಿ ಬಿದ್ದು
ನಿಂದಿಹುವು ಹನಿಯಾಗಿ, ನಗುತಿಹುದು ಜಗ ನೋಡಿ!

ಬಾಳಿನುಷೆ, ತಾರೆಗಳ ಕಾಣುವಾಸೆಯನುಳಿದು,
ಅವುಗಳೆದೆ ಸತ್ವವೀ ಮಂಜು ಹನಿಗಳ ಮುತ್ತು.
ಮಾಲೆಯನು ಕಂಡು, ನೀನೊಪ್ಪದೆಯೆ ಕಡು ಮುಳಿದು,
ತಾವರೆಯ ಕೀಳದಿರು. ಬಂದಂತೆ ಇಳಿಹೊತ್ತು,
ಈ ಮಂಜು ಮುಗಿಲಿನಲಿ ತಾರೆಯಾಗರಳುವುದು
ಎಂದು ಒಲವನು ನೀಡು, ಎದೆಯುಳಿವಿಗದೆ ಹಿರಿದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರೋಪ – ೧೬
Next post ಚಲನೆ

ಸಣ್ಣ ಕತೆ

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…