ಚಲನೆ

ಸೂರ್ಯ ಹೊರಳಿದ ಕಿಟಕಿಯಲಿ
ಅವನ ಆಕೃತಿ ಸರಿದು ಕೌ ನೆರಳು
ನೆನಪಿನ ಬೆರಳುಗಳು ಮೀಟಿ
ನಡುವೆ ಅರಳಿದೆ ಜೀವ ವಿಕಾಸ

ಕಾಪಿಡುವ ಕೈಗಳು ಬಿಗಿದಪ್ಪಿವೆ
ನೀಲಬಾನು ಒಂದುಗೂಡಿದ ಘನ
ಎಲ್ಲಾ ನದಿಗಳು ಹರಿದು ಸೇರಿವೆ
ಕಡಲು ಚಿಮ್ಮಿವೆ ಜಗದಗಲ ತೆರೆಗಳ

ಹೊಸ ಹಾಡು ಹೊಸ ರಾಗ
ಹೊರ ಹೊಮ್ಮಿದ ಹಕ್ಕೀ ಚಿಕ್ಕೀ ಹಾಡು
ಅಡಿಗಳಿಗೆ ಚಿಮ್ಮಿದೆ ನಿರಾಂತಕ ಹಸಿರು
ರಾಗಗಳ ಮಾಲಿಕೆ ಹೊತ್ತ ತಾಯಿ ಭೈರವಿ.

ಮಳೆ ಹೊಯ್ಯುತಿದೆ ಭೂಮಿ ತೊಯ್ಯುತಿದೆ
ಬಯಲ ತುಂಬ ಭದ್ರ ಕನಸುಗಳು
ಬೀಜಗಳು ಹರಡಿ ಜಾಡು ಹಿಡಿದ ನಡುಗೆ
ಪಂಚಭೂತಗಳ ಜೀವ ಮಿಸುಕಾಡಿದೆ.

ಯಾವ ಬಣ್ಣ ವಾಸನೆ ರುಚಿ ಇಲ್ಲ
ಸಾವಿನ ಮನೆಯ ನೆರಳಿಗೆ
ಬೆಳಕಿನ ಸವಾರಿ ಸೂರ್ಯ ಸವಾಲು
ಹುಟ್ಟಿಗೆ ದಾಖಲೆ ಇಟ್ಟವರಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎದೆ ತಂತಿ ಮಿಡಿದಾಗ
Next post ತೆಂಗು

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

cheap jordans|wholesale air max|wholesale jordans|wholesale jewelry|wholesale jerseys