ಚಲನೆ

ಸೂರ್ಯ ಹೊರಳಿದ ಕಿಟಕಿಯಲಿ
ಅವನ ಆಕೃತಿ ಸರಿದು ಕೌ ನೆರಳು
ನೆನಪಿನ ಬೆರಳುಗಳು ಮೀಟಿ
ನಡುವೆ ಅರಳಿದೆ ಜೀವ ವಿಕಾಸ

ಕಾಪಿಡುವ ಕೈಗಳು ಬಿಗಿದಪ್ಪಿವೆ
ನೀಲಬಾನು ಒಂದುಗೂಡಿದ ಘನ
ಎಲ್ಲಾ ನದಿಗಳು ಹರಿದು ಸೇರಿವೆ
ಕಡಲು ಚಿಮ್ಮಿವೆ ಜಗದಗಲ ತೆರೆಗಳ

ಹೊಸ ಹಾಡು ಹೊಸ ರಾಗ
ಹೊರ ಹೊಮ್ಮಿದ ಹಕ್ಕೀ ಚಿಕ್ಕೀ ಹಾಡು
ಅಡಿಗಳಿಗೆ ಚಿಮ್ಮಿದೆ ನಿರಾಂತಕ ಹಸಿರು
ರಾಗಗಳ ಮಾಲಿಕೆ ಹೊತ್ತ ತಾಯಿ ಭೈರವಿ.

ಮಳೆ ಹೊಯ್ಯುತಿದೆ ಭೂಮಿ ತೊಯ್ಯುತಿದೆ
ಬಯಲ ತುಂಬ ಭದ್ರ ಕನಸುಗಳು
ಬೀಜಗಳು ಹರಡಿ ಜಾಡು ಹಿಡಿದ ನಡುಗೆ
ಪಂಚಭೂತಗಳ ಜೀವ ಮಿಸುಕಾಡಿದೆ.

ಯಾವ ಬಣ್ಣ ವಾಸನೆ ರುಚಿ ಇಲ್ಲ
ಸಾವಿನ ಮನೆಯ ನೆರಳಿಗೆ
ಬೆಳಕಿನ ಸವಾರಿ ಸೂರ್ಯ ಸವಾಲು
ಹುಟ್ಟಿಗೆ ದಾಖಲೆ ಇಟ್ಟವರಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎದೆ ತಂತಿ ಮಿಡಿದಾಗ
Next post ತೆಂಗು

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…