ಮಳೆ

ನೀಲ ವ್ಯೋಮ ಶಾಮವಾಗಿ; ಮುತ್ತು ಕಾಳು ಉದುರಿ ಜಾರಿ
ಹಸಿದು ಮೌನವಾದ ಜಗಕೆ ಮಾತು ಕಲಿಸಿತು
ಗಗನ ಭೇರಿ ಧ್ವನಿಯ ಮಾಡಿ; ಮುಗಿಲು ಮುತ್ತಿ ಮಿಂಚುಕಾರಿ
ಸಲಿಲ ಸೋಂಪು ವೀಣೆ ಮಿಡಿಯಿತು

ರವಿಯ ಉರಿಯ ಬೆವರ ಭಾರ ನೆಲವ ಹಗುರು ಮಾಡಿತು
ಹಸಿ ಚಿಮ್ಮಿ ಹರ್ಷ ಹೊಮ್ಮಿ ಹೋಂಪುಳಿ ಮಾಡಿತು
ಸೃಷ್ಟಿ ಸವಿಯು ವೃಷ್ಟಿ ಕರೆಗೆ ಕೈಯ ಬೀಸಿತು
ಗಾಳಿ ಓಡಿ ಜಗದೊಳಾಡಿ ಈಜು ಬಿದ್ದಿತು

ವರ್ಷಕಾಲ ಕೊಳಲ ಗಾನ ಹರ್ಷಕಂಠ ಕೂಗಿತು
ರವಿಯು ಬಾಡಿ; ಸಂಜೆ ಮೂಡಿ; ಎಲ್ಲಿಗೋ ಓಡಿ
ಮಿಂಚು ಮಿನುಗು, ನಾದ ಗುಡುಗು, ಹನಿಯು ಕುಣಿಯಿತು
ಕಾಡು ನಾಡು ಗಗನಬೀಡು ಸಗ್ಗವನೇ ಮಾಡಿತು

ಲತೆಯು ಉಬ್ಬಿ ತರುವ ತಬ್ಬಿ ಹೂವು ಕಾಯಿ ಸುರಿಸಿತು
ಮುಗಿಲದಾನ ಹಸಿರು ಶಾಲು ಸೃಷ್ಟಿ ಎಲ್ಲ ಹೊಚ್ಚಿತು
ಬೀಜ ಒಡೆದು, ಕುಡಿಗೆ ನೆಗೆದು ಚಲ್ವ ಚಿಗುರು ಕಂಡಿತು
ವಿಶ್ವವೆಲ್ಲ ನಲಿದು ನಿಂತು ಯೌವನವು ಹೊಮ್ಮಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಗರಣ
Next post ಅವನೇ ಬಂದ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys