ಮಳೆ

ನೀಲ ವ್ಯೋಮ ಶಾಮವಾಗಿ; ಮುತ್ತು ಕಾಳು ಉದುರಿ ಜಾರಿ
ಹಸಿದು ಮೌನವಾದ ಜಗಕೆ ಮಾತು ಕಲಿಸಿತು
ಗಗನ ಭೇರಿ ಧ್ವನಿಯ ಮಾಡಿ; ಮುಗಿಲು ಮುತ್ತಿ ಮಿಂಚುಕಾರಿ
ಸಲಿಲ ಸೋಂಪು ವೀಣೆ ಮಿಡಿಯಿತು

ರವಿಯ ಉರಿಯ ಬೆವರ ಭಾರ ನೆಲವ ಹಗುರು ಮಾಡಿತು
ಹಸಿ ಚಿಮ್ಮಿ ಹರ್ಷ ಹೊಮ್ಮಿ ಹೋಂಪುಳಿ ಮಾಡಿತು
ಸೃಷ್ಟಿ ಸವಿಯು ವೃಷ್ಟಿ ಕರೆಗೆ ಕೈಯ ಬೀಸಿತು
ಗಾಳಿ ಓಡಿ ಜಗದೊಳಾಡಿ ಈಜು ಬಿದ್ದಿತು

ವರ್ಷಕಾಲ ಕೊಳಲ ಗಾನ ಹರ್ಷಕಂಠ ಕೂಗಿತು
ರವಿಯು ಬಾಡಿ; ಸಂಜೆ ಮೂಡಿ; ಎಲ್ಲಿಗೋ ಓಡಿ
ಮಿಂಚು ಮಿನುಗು, ನಾದ ಗುಡುಗು, ಹನಿಯು ಕುಣಿಯಿತು
ಕಾಡು ನಾಡು ಗಗನಬೀಡು ಸಗ್ಗವನೇ ಮಾಡಿತು

ಲತೆಯು ಉಬ್ಬಿ ತರುವ ತಬ್ಬಿ ಹೂವು ಕಾಯಿ ಸುರಿಸಿತು
ಮುಗಿಲದಾನ ಹಸಿರು ಶಾಲು ಸೃಷ್ಟಿ ಎಲ್ಲ ಹೊಚ್ಚಿತು
ಬೀಜ ಒಡೆದು, ಕುಡಿಗೆ ನೆಗೆದು ಚಲ್ವ ಚಿಗುರು ಕಂಡಿತು
ವಿಶ್ವವೆಲ್ಲ ನಲಿದು ನಿಂತು ಯೌವನವು ಹೊಮ್ಮಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಗರಣ
Next post ಅವನೇ ಬಂದ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಜಂಬದ ಕೋಳಿ

    ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…