ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು

ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು

ಸಾಮಾನ್ಯವಾಗಿ ಎಲ್ಲರೂ ತಿಂಡಿ ತಿಂದ ಮೇಲೆ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಈ ಅಭ್ಯಾಸವು ಒಂದು ರೂಢಿಯಾಗಿಯೇ ಮಾರ್ಪಟ್ಟಿದೆ. ಕೆಲವರಂತೂ ತಿಂಡಿ ತಿನ್ನುತ್ತಲೇ ಟೀಯನ್ನೋ ಕಾಫಿಯನ್ನೋ ಕುಡಿಯುತ್ತಲೇ ತಿಂದು ಮುಗಿಸುತ್ತಾರೆ. ಈ ರೂಢಿಯಿಂದಾಗಿ ಆರೋಗ್ಯದ ಮೇಲೆ ಅನೇಕ ವ್ಯತೀರೀಕ ಪರಿಣಾಮವುಂಟಾಗುತ್ತದೆ, ಎಂದು ಸಂಶೋಧಕರು ಹೇಳುತ್ತಾರೆ.

ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಾಗ ರಕ್ತಹೀನತೆ ಉಂಟಾಗುತ್ತದೆ. ಶೇ. ೫೦ ರಷ್ಟು ಜನಕ್ಕೆ ಈ ರಕ್ತಹೀನತೆ ಕಂಡು ಬಂದಿದೆ. ನಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಕಬ್ಬಿಣದ ಅಂಶ ಇದ್ದರೂ ಜೀರ್ಣನಾಳ (ಕರುಳುಗಳು) ಈ ಕಬ್ಬಿಣದ ಅಂಶವನ್ನು ಸಮರ್ಪಕವಾಗಿ ಹೀರಿಕೊಳ್ಳುವುದಿಲ್ಲ. ಈ ಹೀರಿಕೊಳ್ಳುವಲ್ಲಿ ಅಡ್ಡಿಪಡಿಸುವ ಅಂಶವೇ ನಾವು ಕಾಫಿ ಟೀಗಳನ್ನು ತಿಂಡಿಯ ನಂತರ ನಡುವೆ ಕುಡಿಯುತ್ತ ಹೋಗುವುದರಿಂದ ಆಗುತ್ತದೆ. ಈ ಟೀ ಕಾಫಿಯಲ್ಲಿರುವ ‘ಟ್ಯಾನಿನ್’ ಎಂಬ ಪದಾರ್ಥವು ಕಬ್ಬಿಣಾಂಶದ ಹೀರುವಿಕೆಯನ್ನು ತಡೆಗಟ್ಟುತ್ತದೆ. ದಕ್ಷಿಣ ಭಾರತೀಯರು ಸೇವಿಸುವ ಯಾವುದೇ ತಿಂಡಿಯಿಂದ ಕರಳು ೦.೪ ಮಿ.ಗ್ರಾಂ. ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ. ರಕ್ತಹೀನತೆಯನ್ನು ಪ್ರತಿಬಂಧಿಸಲು ಪ್ರತಿಯೊಬ್ಬರಿಗೆ ನಿತ್ಯ ಒಂದು ಮಿ.ಗ್ರಾಂ. ಕಬ್ಬಿಣಾಂಶದ ಅಗತ್ಯವಿದೆ. ಈ ಲೆಕ್ಕಾಚಾರದಂತೆ ನಮಗೆ ನಮ್ಮ ನಿತ್ಯದ ತಿಂಡಿಯಿಂದಲೇ ಸಾಕಷ್ಟು ಕಬ್ಬಿಣಾಂಶದ ದೊರಕುತ್ತದೆ. ಕಾಫಿ, ಟೀಯಲ್ಲಿ ಇರುವ ‘ಟ್ಯಾನಿನ್’ ಎಂಬ ಪದಾರ್ಥ ಕಬ್ಬಿಣಾಂಶದ ಹೀರುವಿಕೆಗೆ ತೊಡರುಗಾಲು ಹಾಕುತ್ತದೆ. ಹೀಗಾಗಿ ತಿಂಡಿ ತಿಂದ ತಕ್ಷಣ ಕಾಫಿ ಕುಡಿದರೆ ಕರಳು ಕೇವಲ ೦.೨ ಮಿ.ಗ್ರಾಂ. ಕಬ್ಬಿಣಾಂಶವನ್ನು ಹೀರಲು ಶಕ್ಯವಾಗುತ್ತದೆ. ಟೀ ಕುಡಿದರೆ ಕಬ್ಬಿಣಾಂಶದ ಹೀರುವಿಕೆಯ ಪ್ರಮಾಣ ೦.೧ ಮಿ.ಗ್ರಾಂ ಗೆ ಇಳಿಯುತ್ತದೆ. ಏಕೆಂದರೆ ಟೀಯಲ್ಲಿ ಕಾಫಿಯಲ್ಲಿರುವುದಕ್ಕಿಂತ ಹೆಚ್ಚು ಟ್ಯಾನಿನ್ ಇರುತ್ತದೆ.

ವೈಜ್ಞಾನಿಕ ವಾಸ್ತವತೆ ಹೀಗಿರುವಾಗ ತಿಂಡಿತಿಂದ ತಕ್ಷಣ, ನಡುನಡುವೆ ಕಾಫಿ, ಟೀ ಕುಡಿಯುವುದು ಒಳ್ಳೆಯದಲ್ಲ. ಹಾಗೆಂದ ಮಾತ್ರಕ್ಕೆ ತಿಂಡಿಯನ್ನೇನು ಬಿಡುವ ಅಗತ್ಯವಿಲ್ಲ. ಅದೇ ವಿಜ್ಞಾನಿಗಳು ಹೇಳುವ ಪ್ರಕಾರ ತಿಂಡಿ ತಿಂದ ಮೇಲೆ ಕಾಫಿ, ಟೀ ಕುಡಿಯದಿದ್ದರೆ ಸಮಾಧಾನವೆ ಇರುವುದಿಲ್ಲ ಎನ್ನುವವರಿಗೆ ಒಂದು ಮಾರ್ಗೋಪಾಯ ಹೇಳಿದ್ದಾರೆ. ಅಂದರೆ ತಿಂಡಿ ತಿಂದ ಅರ್ಧಗಂಟೆಯ ನಂತರ ಕಾಫಿ ಟೀ ಕುಡಿದರೆ ಕರುಳುಗಳ ಮೇಲೆ ‘ಟ್ಯಾನಿನ್’ ಪ್ರಭಾವ ಬೀರಲಾರದು; ಎಂದು ಹೇಳಿದ್ದಾರೆ. ಇದೇ ವಿಜ್ಞಾನಿಗಳು ಕಬ್ಬಿಣದ ಅಂಶವನ್ನು ವೃದ್ದಿಸುವ ‘ಸಿ’ ಜೀವಸತ್ವವುಳ್ಳ ಮೋಸುಂಬೆ, ನಿಂಬೆ, ಇತರ ಪೇಯಗಳನ್ನು ತಿಂಡಿ ತಿಂದ ನಂತರ ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ, ವರ್ಧಿಸುತ್ತದೆ, ಎಂಬುವುದನ್ನು ಕಂಡು ಹಿಡಿದಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೋಕಾಚಾರವನು ಲೆಕ್ಕಚಾರಗೊಳಿಸಲುಂಟೇ ?
Next post ಹಿಂದೂ ದೇಶ ದೊಡ್ಡದು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys