Home / ಲೇಖನ / ವಿಜ್ಞಾನ / ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು

ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು

ಸಾಮಾನ್ಯವಾಗಿ ಎಲ್ಲರೂ ತಿಂಡಿ ತಿಂದ ಮೇಲೆ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಈ ಅಭ್ಯಾಸವು ಒಂದು ರೂಢಿಯಾಗಿಯೇ ಮಾರ್ಪಟ್ಟಿದೆ. ಕೆಲವರಂತೂ ತಿಂಡಿ ತಿನ್ನುತ್ತಲೇ ಟೀಯನ್ನೋ ಕಾಫಿಯನ್ನೋ ಕುಡಿಯುತ್ತಲೇ ತಿಂದು ಮುಗಿಸುತ್ತಾರೆ. ಈ ರೂಢಿಯಿಂದಾಗಿ ಆರೋಗ್ಯದ ಮೇಲೆ ಅನೇಕ ವ್ಯತೀರೀಕ ಪರಿಣಾಮವುಂಟಾಗುತ್ತದೆ, ಎಂದು ಸಂಶೋಧಕರು ಹೇಳುತ್ತಾರೆ.

ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಾಗ ರಕ್ತಹೀನತೆ ಉಂಟಾಗುತ್ತದೆ. ಶೇ. ೫೦ ರಷ್ಟು ಜನಕ್ಕೆ ಈ ರಕ್ತಹೀನತೆ ಕಂಡು ಬಂದಿದೆ. ನಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಕಬ್ಬಿಣದ ಅಂಶ ಇದ್ದರೂ ಜೀರ್ಣನಾಳ (ಕರುಳುಗಳು) ಈ ಕಬ್ಬಿಣದ ಅಂಶವನ್ನು ಸಮರ್ಪಕವಾಗಿ ಹೀರಿಕೊಳ್ಳುವುದಿಲ್ಲ. ಈ ಹೀರಿಕೊಳ್ಳುವಲ್ಲಿ ಅಡ್ಡಿಪಡಿಸುವ ಅಂಶವೇ ನಾವು ಕಾಫಿ ಟೀಗಳನ್ನು ತಿಂಡಿಯ ನಂತರ ನಡುವೆ ಕುಡಿಯುತ್ತ ಹೋಗುವುದರಿಂದ ಆಗುತ್ತದೆ. ಈ ಟೀ ಕಾಫಿಯಲ್ಲಿರುವ ‘ಟ್ಯಾನಿನ್’ ಎಂಬ ಪದಾರ್ಥವು ಕಬ್ಬಿಣಾಂಶದ ಹೀರುವಿಕೆಯನ್ನು ತಡೆಗಟ್ಟುತ್ತದೆ. ದಕ್ಷಿಣ ಭಾರತೀಯರು ಸೇವಿಸುವ ಯಾವುದೇ ತಿಂಡಿಯಿಂದ ಕರಳು ೦.೪ ಮಿ.ಗ್ರಾಂ. ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ. ರಕ್ತಹೀನತೆಯನ್ನು ಪ್ರತಿಬಂಧಿಸಲು ಪ್ರತಿಯೊಬ್ಬರಿಗೆ ನಿತ್ಯ ಒಂದು ಮಿ.ಗ್ರಾಂ. ಕಬ್ಬಿಣಾಂಶದ ಅಗತ್ಯವಿದೆ. ಈ ಲೆಕ್ಕಾಚಾರದಂತೆ ನಮಗೆ ನಮ್ಮ ನಿತ್ಯದ ತಿಂಡಿಯಿಂದಲೇ ಸಾಕಷ್ಟು ಕಬ್ಬಿಣಾಂಶದ ದೊರಕುತ್ತದೆ. ಕಾಫಿ, ಟೀಯಲ್ಲಿ ಇರುವ ‘ಟ್ಯಾನಿನ್’ ಎಂಬ ಪದಾರ್ಥ ಕಬ್ಬಿಣಾಂಶದ ಹೀರುವಿಕೆಗೆ ತೊಡರುಗಾಲು ಹಾಕುತ್ತದೆ. ಹೀಗಾಗಿ ತಿಂಡಿ ತಿಂದ ತಕ್ಷಣ ಕಾಫಿ ಕುಡಿದರೆ ಕರಳು ಕೇವಲ ೦.೨ ಮಿ.ಗ್ರಾಂ. ಕಬ್ಬಿಣಾಂಶವನ್ನು ಹೀರಲು ಶಕ್ಯವಾಗುತ್ತದೆ. ಟೀ ಕುಡಿದರೆ ಕಬ್ಬಿಣಾಂಶದ ಹೀರುವಿಕೆಯ ಪ್ರಮಾಣ ೦.೧ ಮಿ.ಗ್ರಾಂ ಗೆ ಇಳಿಯುತ್ತದೆ. ಏಕೆಂದರೆ ಟೀಯಲ್ಲಿ ಕಾಫಿಯಲ್ಲಿರುವುದಕ್ಕಿಂತ ಹೆಚ್ಚು ಟ್ಯಾನಿನ್ ಇರುತ್ತದೆ.

ವೈಜ್ಞಾನಿಕ ವಾಸ್ತವತೆ ಹೀಗಿರುವಾಗ ತಿಂಡಿತಿಂದ ತಕ್ಷಣ, ನಡುನಡುವೆ ಕಾಫಿ, ಟೀ ಕುಡಿಯುವುದು ಒಳ್ಳೆಯದಲ್ಲ. ಹಾಗೆಂದ ಮಾತ್ರಕ್ಕೆ ತಿಂಡಿಯನ್ನೇನು ಬಿಡುವ ಅಗತ್ಯವಿಲ್ಲ. ಅದೇ ವಿಜ್ಞಾನಿಗಳು ಹೇಳುವ ಪ್ರಕಾರ ತಿಂಡಿ ತಿಂದ ಮೇಲೆ ಕಾಫಿ, ಟೀ ಕುಡಿಯದಿದ್ದರೆ ಸಮಾಧಾನವೆ ಇರುವುದಿಲ್ಲ ಎನ್ನುವವರಿಗೆ ಒಂದು ಮಾರ್ಗೋಪಾಯ ಹೇಳಿದ್ದಾರೆ. ಅಂದರೆ ತಿಂಡಿ ತಿಂದ ಅರ್ಧಗಂಟೆಯ ನಂತರ ಕಾಫಿ ಟೀ ಕುಡಿದರೆ ಕರುಳುಗಳ ಮೇಲೆ ‘ಟ್ಯಾನಿನ್’ ಪ್ರಭಾವ ಬೀರಲಾರದು; ಎಂದು ಹೇಳಿದ್ದಾರೆ. ಇದೇ ವಿಜ್ಞಾನಿಗಳು ಕಬ್ಬಿಣದ ಅಂಶವನ್ನು ವೃದ್ದಿಸುವ ‘ಸಿ’ ಜೀವಸತ್ವವುಳ್ಳ ಮೋಸುಂಬೆ, ನಿಂಬೆ, ಇತರ ಪೇಯಗಳನ್ನು ತಿಂಡಿ ತಿಂದ ನಂತರ ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ, ವರ್ಧಿಸುತ್ತದೆ, ಎಂಬುವುದನ್ನು ಕಂಡು ಹಿಡಿದಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...