Home / ಲೇಖನ / ವಿಜ್ಞಾನ / ಬಿಸಿಯಾಗುತ್ತಿರುವ ಭೂಮಿ !!

ಬಿಸಿಯಾಗುತ್ತಿರುವ ಭೂಮಿ !!

ಜಗತ್ತಿನಾದ್ಯಂತ ಇತ್ತೀಚೆಗೆ ಪರಿಸರಮಾಲಿನ್ಯ ಶಬ್ಧ ಮಾಲಿನ್ಯ, ಭೂಮಿಯನ್ನು ಕೊರೆಯುವುದು, ಸ್ಫೋಟಗೊಳಸುವುದು ಇದೇ ಮೊದಲಾದ ಕಾರಣಗಳಿಂದಾಗಿ ಭೂಮಿ ನಿಧಾನವಾಗಿ ಬಿಸಿಯಾಗುತ್ತಲಿದೆ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ಭೂಮಿ ಬಿಸಿಯಾದಾಗ ಸ್ವಾಭಾವಿಕವಾಗಿ ಹಲವಾರು ಬಗೆಯ ರೋಗಗಳು ಉಗ್ರರೂಪತಾಳುತ್ತಲಿವೆ ಎಂದು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ವ್ಯಾಪಕವಾಗಿ ರೌದ್ರ ರೂಪತಾಳಿದ್ದ ಮಲೇರಿಯಾ ಕಾಯಿಲೆಯ ನಿರ್‍ನಾಮದ ಸೂಚನೆ ಸಿಕ್ಕಿತ್ತು ಆದರೆ ಡಿ.ಡಿ.ಟಿಯ ಬಳಕೆ ಆರಂಭ ಗೊಂಡಾಗಿನಿಂದ ಸೊಳ್ಳೆಗಳು ಕಡಿಮೆಯಾಗುತ್ತ ಬರುತ್ತವೆ ಎಂದು ಭಾವಿಸಲಾಗಿತ್ತು.

ಆದರೆ ಈಗ ಮಲೇರಿಯಾ, ಡೆಂಗೆಜ್ವರ ಮುಂತಾದ ಕಾಯಿಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಪೀಡಿಸುತ್ತಿವೆ. ಈ ರೀತಿ ಏರುತ್ತಿರುವ ರೋಗಗಳಿಗೂ ಭೂಮಿಯ ಉಷ್ಣತೆಗೂ ಸಂಬಂಧ ಇರುವುದನ್ನು ವಿಜ್ಞಾನಿಗಳು ಕಂಡುಕೊಂಡರು. ಇದೇ ಸಂದರ್‍ಭದಲ್ಲಿ ಜಗತ್ತಿನ ಎಲ್ಲದೇಶಗಳು ಪರಿಸರ ಮಲಿನತೆಯನ್ನು ನಿಯಂತ್ರಿಸಿ ಭೂಮಿಯ ಉಷ್ಣತೆಯ ಏರಿಕೆಯನ್ನು ತಡೆಗಟ್ಟಬೇಕೆಂದೂ ಇಲ್ಲದಿದ್ದಾರೆ ಜಗತ್ತು ಹಲವಾರು ರೋಗಗಳಿಗೆ ಸುಲಭವಾಗಿ ಗುರಿಯಾಗಬಹುದೆಂದೂ ಎಚ್ಚರಿಸಿದರು. ಅಮೇರಿಕಾದ ಸಾರ್ವಜನಿಕ ಆರೋಗ್ಯ ಒಕ್ಕೂಟದ ಅಧ್ಯಕ್ಷ ಡಾ|| ಬ್ಯಾರಿಲೇವಿ ನಾವು, ಮುಂದೆ ಆಗಬಹುದಾದ ಗಂಡಾಂತರದ ಸಾಧ್ಯತೆಗಳನ್ನು ಸೂಚಿಸುತ್ತಿಲ್ಲ. ನಾವು ನಿಲ್ಲಿಸಬಹುದಾಗಿದ್ದ ರೋಗಗಳಿಂದಾಗಿಯೇ ಈಗ ಸಾವಿರಾರು ಜನಗಳು ಸಾಯುತ್ತಿದ್ದಾರೆ. ಈ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ತಾಳಬಹುದೆಂದು, ಎಚ್ಚರಿಸಿದ್ದರು.

ಅನೇಕ ಬಗೆಯಾಗಿ ಹೊಗೆಯನ್ನು ಹೊರಹಾಕುತ್ತಿರುವುದರಿಂದಾಗಿ ರಾಸಾಯನಿಕಗಳನ್ನು ಹೊರಬಿಡುತ್ತಿರುವುದರಿಂದಾಗಿ ವಿಷಾನೀಲಗಳನ್ನು ಬಿಡುತ್ತಿರುವುದರಿಂದಾಗಿ ಆಳವಾದ ಗಣಿಗಳನ್ನು ತೊಡಿ ಸ್ಫೋಟಿಸುವುದರಿಂದಾಗಿ ಭೂಮಿಯ ಸುತ್ತ ಉಷ್ಟತೆಯು ಆವರಿಸಿಕೊಳುತ್ತಾ ಹೋಗುತ್ತಿದೆ. ಅಂತರ್ಜಲ ಬತ್ತಿ ಬರಡಾಗಿ ತಾಪ ಮಾನಕ್ಕೆ ಕಾರಣವಾಗುತ್ತಲಿದೆ. ಒಂದು ಶತಮಾನದಲ್ಲಿ ಭೂಮಿಯ ಉಷ್ಣತೆಯು ಒಂದರಿಂದ ಈಗೀಗ ಎರಡು ಡಿಗ್ರಿ ಸೆಲ್ಸಿಯಸ್‌ಗಳಷ್ಟು ಏರುವ ಹಾಗೂ ಈ ಕಾರಣಗಳಿಂದ ಕಡಲಿನ ಮಟ್ಟವು ೧೫ ಸೆಂ.ಮಿ ಗಳಿಂದ ಒಂದು ಮೀಟರ್‌ಗಳಷ್ಟು ಏರುವ ಅಪಾಯವಿದೆ. ಇಡೀ ಜಗತ್ತೇ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ವಿದ್ಯುತ್ ಉತ್ಪಾದನೆ, ಅಡುಗೆ ಮಾಡುವುದು, ವಾಹನಗಳಿಗೆ ಇಂಧನ ಮುಂತಾದ ಕಾರಣಗಳಿಂದಾಗಿ ಅತೀವ ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳು ಸೌದೆ ಮತ್ತು ಕಲ್ಲಿದ್ದಲು ಸುಟ್ಟು ಹೋಗುತ್ತವೆ. ದೇಶ ದೇಶಗಳ ಆರ್ಥಿಕ ಅಭಿವೃದ್ಧಿಯೇ ಈ ರೀತಿಯ ಇಂಧನ ಬಳಕೆಯ ಮೇಲೆ ಆಧಾರಿತವಾಗಿರುವುದರಿಂದ ಇಂತಹ ಇಂಧನ ಬಳಕೆಯನ್ನು ಕಡಿಮೆಗೊಳಿಸುವುದಾಗಲೀ, ನಿಯಂತ್ರಿಸುವುದಾಗಲೀ ಸಾಧವಿಲ್ಲವಾಗಿದೆ. ಕಡಿಮೆ ಇಂಧನ ಬಳಸಿ ಅಧಿಕ ಶಕ್ತಿ ಉತ್ಪಾದನೆಗೊಳಿಸುವ ಪರಿಸರದ (ಜೈವಿಕ) ಶಕ್ತಿಯಿಂದ ಶಕ್ತಿ ಪಡೆದು ಪರಿಸರವನ್ನು ಶುದ್ದವಾಗಿರಿಸಿಕೊಳ್ಳುವ ಆಲೊಚನೆಯನ್ನು ಮಾಡಬೇಕಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...