Home / ಲೇಖನ / ವಿಜ್ಞಾನ / ಮೈಕ್ರೋವೇವ್ ಒಲೆಗಳ ಬಳಕೆಯಿಂದ ಹುಶಾರಾಗಿರಿ

ಮೈಕ್ರೋವೇವ್ ಒಲೆಗಳ ಬಳಕೆಯಿಂದ ಹುಶಾರಾಗಿರಿ

ಪೂರ್‍ವ ಕಾಲದಲ್ಲಿ ಅಡುಗೆಮನೆಯಲ್ಲಿ ಅಡುಗೆಮಾಡಲು ಸೌದೆ, ನಂತರ ಸೀಮೆ ಎಣ್ಣೆ, ಗ್ಯಾಸ್, ಸ್ಟೌವ್ ಬಂದವು. ಈದೀಗ ಆಧುನಿಕ ಅಡುಗೆ ಮನೆಯಲ್ಲಿ ಗ್ಯಾಸ್ ಒಲೆಯ ಬಹುಭಾಗವನ್ನು ವಿದ್ಯುತ್‌ಚಾಲಿತ ಮೈಕ್ರೋವೇವ್ ಒಲೆಗಳನ್ನು ಅಡುಗೆಮಾಡಲು ಬಳೆಸಲಾಗುತ್ತದೆ. ನೋಡಲು ಆಕರ್ಷಕವಾಗಿರುವ ಹಾಗೂ ಸುಲಭವಾಗಿ ಬಳಸಬಹುದಾದ ಮೈಕ್ರೋವೇವ್ ಒಲೆಗಳ ಬಳಕೆಯಿಂದಾಗಿ ತರಕಾರಿ, ಕಾಯಿಪಲ್ಯಗಳಲ್ಲಿರುವ ಮತ್ತು ಧವಸ ಧಾನ್ಯಗಳಲ್ಲಿರುವ ಆಯಂಟಿ ಆಕ್ಸಿಡೆಂಟ್‌ಗಳನ್ನು (ಇವು ನಮ್ಮದೇಹಕ್ಕೆ ಅವಶ್ಯಕವಾದ ವಸ್ತುಗಳು) ನಾಶಮಾಡುತ್ತವೆ ಎಂದು ಸ್ಪೇನ್ ದೇಶದ ವಿಜ್ಞಾನಿ ಡಾ|| ಕ್ರಿಸ್ಟನ್ ಗಾರ್‍ಸಿಯಾ ಅಭಿಪ್ರಾಯ ಪಡುತ್ತಾರೆ. ಮೈಕ್ರೋವೇವ್ ಒಲೆಗಳಲ್ಲಿ ಸೂಕ್ಷ್ಮ ಕಿರಣಗಳು ಅತಿಯಾದ ಶಾಖವನ್ನು ಉಂಟು ಮಾಡಿ ಅವು ತ್ವರಿತಗತಿಯಲ್ಲಿ ಆಹಾರ ಪದಾರ್ಥಗಳನ್ನು ಬೇಯಿಸುತ್ತವೆ ಅಥವಾ ಬಿಸಿಯನ್ನಾಗಿ ಇಡುತ್ತವೆ. ಈ ಕಾರಣದಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಉದ್ಯೋಗದಲ್ಲಿರುವ ದಂಪತಿಗಳು ಆಹಾರಪದಾರ್ಥಗಳ ಬೇಯಿಸುವಿಕೆಗೆ ದುಬಾರಿಯಾದ ಈ ಮೈಕ್ರೋವೇವ್ ಓವನ್‌ಗಳ ಆಕರ್ಷಣೆಗೆ ಒಳಗಾಗುತ್ತಾರೆ. ತರಕಾರಿಗಳಲ್ಲಿ ಅಯಂಟಿ ಆಕ್ಸಿಡೆಂಟ್ಗಳು ಪ್ಲೆವಿನಾಯ್ಡ್ಸ್ , ಕೆರೊಟಿನಾಯ್ಡ್ಸ್ ಮುಂತಾದ ವಸ್ತುಗಳಿದ್ದು ಅವು ನಮ್ಮದೇಹದ ಆರೋಗ್ಯದ ದೃಷ್ಟಿಯಿಂದ ಅತಿಪ್ರಮುಖವಾದ ಪಾತ್ರ ವಹಿಸುತ್ತವೆ. ನಮ್ಮ ದೇಹದಲ್ಲಿ ಕೆಲವೊಂದು ಕ್ರಿಯೆಗಳಿಂದ ಉಂಟಾಗುವ ಫ್ರಿರೆಡಿಕಲ್ಸ್ ಎಂಬ ವಸ್ತುಗಳು ಕ್ಯಾನ್ಸ್‌ರ್ ಮುಂತಾದ ಕಾಯಿಲೆಗಳನ್ನು ಉಂಟುಮಾಡುತ್ತದೆ. ಚರ್ಮದ ಮೇಲೆ ನಿರಿಗೆಗಳ (ಗುಳ್ಳೆಗಳು) ಉಂಟಾಗುವುದು ಕೂಡ ಈ ಫ್ರಿರೆಡಿಕಲ್ಸ್‌ಗಳಿಂದಲೇ (ಅಂದರೆ ದೇಹವು ಹೆಚ್ಚಿ ವಯಸ್ಸಾದಂತೆ ಕಾಣುವುದು) ತರಕಾರಿಗಳಲ್ಲಿ ಯಥೆಚ್ಛೆವಾಗಿರುವ ಅಯಂಟಿ ಆಕ್ಸಿಡೆಂಟ್ಗಳು. ಈ ಪ್ರಿರೆಡಿಕಲ್ಸ್‌ಗಳನ್ನು ನಾಶಮಾಡಿ ದೇಹದ ಆರೋಗ್ಯದ ಸಮತೋಲನವನ್ನು ಕಾಪಾಡುತ್ತವೆ. ತರಕಾರಿಗಳನ್ನು ಮೈಕ್ರೋ ವೇವ್ ಓವನ್‌ಗಳಲ್ಲಿ ಬೇಯಿಸುವುದರಿಂದ ಅದರಲ್ಲಿ ಉಂಟಾಗುವ ಅತಿಯಾದ ಉಷ್ಣತೆಯಿಂದಾಗಿ ಆಂಟಿ ಆಕ್ಸಿಡಂಟ್‌ಗಳು ಬಹುತೇಕವಾಗಿ ನಾಶವಾಗುತ್ತವೆ. ಪ್ರಶರ್‌ಕುಕ್ಕರ್ ಅಥವಾ ಹವೆಯಲ್ಲಿ ಮಿತವಾಗಿ ಬೇಯಿಸುವುದರಿಂದ ಅಯಂಟಿ ಆಕ್ಸಿಡಂಟ್‌ಗಳು ಯಾವುದೇ ತೆರನಾಗಿ ನಾಶವಾಗದೇ ಹಾಗೆಯೇ ಉಳಿಯುತ್ತವೆ. ಹೀಗಾಗಿ ಹಬೆಯಲ್ಲಿ ಮಿತವಾಗಿ ಬೇಯಿಸಿದ ತರಕಾರಿಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದ ಅಯಂಟಿ ಆಕ್ಸಿಡೆಂಟ್‌ಗಳ ಹೀರಿಕೊಳ್ಳುವಿಕೆ ಉಂಟಾಗಿ ದೇಹದ ಆರೋಗ್ಯ ಕಾಪಾಡಿಕೊಳ್ಳುತ್ತದೆ.

ಅದಕ್ಕಾಗಿ ವೇಗವಾಗಿ ಓಡುವ ತಂತ್ರಜ್ಞಾನ ಮತ್ತು ಮೈಕ್ರೋ ವ್ಯವಸ್ಥೆಗಳಿಗೆ ಅಂತರಂಗವನ್ನು ಅರಿಯದೇ ಮಾರು ಹೋಗಬಾರದು. ಬೇಗನೆ ಮತ್ತು ಸ್ವಯಂ ಚಾಲಿತವೆಂದು ಬಗೆದು ಹಣಸುರಿದು ಕೊಂಡು ತಂದ ಇಂಥಹ ಮೈಕ್ರೋ ವ್ಯವಸ್ಥೆಗಳ ಬಗೆಗೆ ಆದಷ್ಟು ಅಧ್ಯಯನ ಮಾಡಿ ಉಪಯೋಗಿಸುವುದು ಒಳ್ಳೆಯದು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...