Home / ಕವನ / ಕವಿತೆ / ಪ್ರೀತಿಗೆ ಗಡಿಯುಂಟೆ

ಪ್ರೀತಿಗೆ ಗಡಿಯುಂಟೆ

ಇನ್ನೆಷ್ಟು ದಿನ ಬಿತ್ತುತ್ತಾರೆ ಅವರು
ಪಾಕಿಸ್ತಾನದಲಿ ಭಾರತ ವಿರೋಧಿ ಬೀಜಗಳನ್ನು
ಇನ್ನೆಷ್ಟು ದಿನ ಬಿತ್ತುತ್ತಾರೆ ಇವರು
ಭಾರತದಲ್ಲಿ ಪಾಕಿಸ್ತಾನ ವಿರೋಧಿ ಬೀಜಗಳನ್ನು
ಅಲ್ಲಿ ಬಾಂಬ್ ಸ್ಫೋಟಿಸಿದ್ದಕ್ಕೆ
ಇವರು ಇಲ್ಲಿ ಅಭಿನಂದಿಸುತ್ತಾರೆ.
ಇಲ್ಲಿ ಬಾಂಬ್ ಸ್ಫೋಟಿಸಿದ್ದಕ್ಕೆ
ಅವರು ಅಲ್ಲಿ ಅಭಿನಂದಿಸುತ್ತಾರೆ.
ಇನ್ನೆಷ್ಟುದಿನ ಈ ಕಣ್ಣಮುಚ್ಚಾಲೆಯಾಟ
ಹಿರೋಶೀಮಾ ನಾಗಾಸಾಕಿಗಳ ದುರಂತ
ಕಲಿಸಲಿಲ್ಲವೇ ನಮಗಿನ್ನೂ ಪಾಠ?

ನಮ್ಮನಾಳುವ ಓ! ದೊರೆಯೇ ನಿಲ್ಲಿಸಿಬಿಡು
ನಿನ್ನ ಮದ್ದಿನ ಕಾರ್ಖಾನೆಯನ್ನು
ಇನ್ನೆಷ್ಟು ದಿನ ತಯಾರಿಸುತ್ತಿರಬೇಕು ನಾವು
ಮದ್ದು, ಗುಂಡು, ಬಾಂಬು, ಮಿಸಯಿಲ್ಲು
ಇನ್ನೆಷ್ಟು ದಿನ ಹರಿಯುತ್ತಿರಬೇಕು ಹೇಳು
ನಿರಪರಾಧಿ ಬಾಂಧವರ ರಕ್ತ?
ಅದಕ್ಕೆ… ನಿಲ್ಲಿಸಿಬಿಡು ದೊರೆಯೇ
ನಿನ್ನ ಮುದ್ದಿನ ಕಾರ್ಖಾನೆಯನ್ನು.

ಸಾಕು ಮಾಡು ಮದ್ದು ಗುಂಡಿನ ಘಾಟು
ಜೀವ ವಿರೋಧಿಗಳ ಥಾಟು
ಜೀವಂತ ಝಾಗಝಾಗಿಸುವ ನಗರಗಳ
ಮೇಲೆ ಬೆಂಕಿ ಮಳೆ ಸುರಿದದ್ದು ಸಾಕು
ಸಾಕು… ಅಧಿಕಾರದ ಅಹಮ್ಮಿನಲ್ಲಿ
ಒಡ ಹುಟ್ಟಿದವರ ಸುಟ್ಟಿದ್ದು.

ಹಾರುವ ಹಕ್ಕಿಗೆ ಗಡಿಗಳ ನಿರ್ಬಂಧವೆ?
ಸುಮಧುರ ಸಂಗೀತಕೆ ವಿಭಾಜಕ ರೇಖೆಗಳೇ
ತಣ್ಣಗೆ ಬೀಸುವ ತಂಗಾಳಿಗೆ ಗಿಡಗಳ ತಡೆಯೇ?
ನೆರಳು ಬಿಸಿಲಿಗೆ, ಸೂರ್ಯ ಚಂದ್ರರಿಗೆ
ತಡೆದು ನಿಲ್ಲಿಸುವ ಗಡಿಗಳುಂಟೆ
ಹುಡುಕಬಹುದೆ ಒಬ್ಬ ಪಾಕಿಸ್ತಾನಿಯನ್ನು
ನುಸ್ರತ್‌ ಫತೇ ಅಲಿಯವರ ಗಾಯನದಲಿ.
ಹುಡುಕಬಹುದೆ ಒಬ್ಬ ಹಿಂದುಸ್ತಾನಿಯನು
ಲತಾಮಂಗೇಶ್ಕರಳ ಸುಮಧುರ ಕಂಠದಲ್ಲಿ
ಹೇಳು ಪ್ರಭುವೇ! ಪ್ರೀತಿಗೆ ಗಡಿಗಳುಂಟೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...