Home / ಕವನ / ಕವಿತೆ / ಪ್ರೀತಿಗೆ ಗಡಿಯುಂಟೆ

ಪ್ರೀತಿಗೆ ಗಡಿಯುಂಟೆ

ಇನ್ನೆಷ್ಟು ದಿನ ಬಿತ್ತುತ್ತಾರೆ ಅವರು
ಪಾಕಿಸ್ತಾನದಲಿ ಭಾರತ ವಿರೋಧಿ ಬೀಜಗಳನ್ನು
ಇನ್ನೆಷ್ಟು ದಿನ ಬಿತ್ತುತ್ತಾರೆ ಇವರು
ಭಾರತದಲ್ಲಿ ಪಾಕಿಸ್ತಾನ ವಿರೋಧಿ ಬೀಜಗಳನ್ನು
ಅಲ್ಲಿ ಬಾಂಬ್ ಸ್ಫೋಟಿಸಿದ್ದಕ್ಕೆ
ಇವರು ಇಲ್ಲಿ ಅಭಿನಂದಿಸುತ್ತಾರೆ.
ಇಲ್ಲಿ ಬಾಂಬ್ ಸ್ಫೋಟಿಸಿದ್ದಕ್ಕೆ
ಅವರು ಅಲ್ಲಿ ಅಭಿನಂದಿಸುತ್ತಾರೆ.
ಇನ್ನೆಷ್ಟುದಿನ ಈ ಕಣ್ಣಮುಚ್ಚಾಲೆಯಾಟ
ಹಿರೋಶೀಮಾ ನಾಗಾಸಾಕಿಗಳ ದುರಂತ
ಕಲಿಸಲಿಲ್ಲವೇ ನಮಗಿನ್ನೂ ಪಾಠ?

ನಮ್ಮನಾಳುವ ಓ! ದೊರೆಯೇ ನಿಲ್ಲಿಸಿಬಿಡು
ನಿನ್ನ ಮದ್ದಿನ ಕಾರ್ಖಾನೆಯನ್ನು
ಇನ್ನೆಷ್ಟು ದಿನ ತಯಾರಿಸುತ್ತಿರಬೇಕು ನಾವು
ಮದ್ದು, ಗುಂಡು, ಬಾಂಬು, ಮಿಸಯಿಲ್ಲು
ಇನ್ನೆಷ್ಟು ದಿನ ಹರಿಯುತ್ತಿರಬೇಕು ಹೇಳು
ನಿರಪರಾಧಿ ಬಾಂಧವರ ರಕ್ತ?
ಅದಕ್ಕೆ… ನಿಲ್ಲಿಸಿಬಿಡು ದೊರೆಯೇ
ನಿನ್ನ ಮುದ್ದಿನ ಕಾರ್ಖಾನೆಯನ್ನು.

ಸಾಕು ಮಾಡು ಮದ್ದು ಗುಂಡಿನ ಘಾಟು
ಜೀವ ವಿರೋಧಿಗಳ ಥಾಟು
ಜೀವಂತ ಝಾಗಝಾಗಿಸುವ ನಗರಗಳ
ಮೇಲೆ ಬೆಂಕಿ ಮಳೆ ಸುರಿದದ್ದು ಸಾಕು
ಸಾಕು… ಅಧಿಕಾರದ ಅಹಮ್ಮಿನಲ್ಲಿ
ಒಡ ಹುಟ್ಟಿದವರ ಸುಟ್ಟಿದ್ದು.

ಹಾರುವ ಹಕ್ಕಿಗೆ ಗಡಿಗಳ ನಿರ್ಬಂಧವೆ?
ಸುಮಧುರ ಸಂಗೀತಕೆ ವಿಭಾಜಕ ರೇಖೆಗಳೇ
ತಣ್ಣಗೆ ಬೀಸುವ ತಂಗಾಳಿಗೆ ಗಿಡಗಳ ತಡೆಯೇ?
ನೆರಳು ಬಿಸಿಲಿಗೆ, ಸೂರ್ಯ ಚಂದ್ರರಿಗೆ
ತಡೆದು ನಿಲ್ಲಿಸುವ ಗಡಿಗಳುಂಟೆ
ಹುಡುಕಬಹುದೆ ಒಬ್ಬ ಪಾಕಿಸ್ತಾನಿಯನ್ನು
ನುಸ್ರತ್‌ ಫತೇ ಅಲಿಯವರ ಗಾಯನದಲಿ.
ಹುಡುಕಬಹುದೆ ಒಬ್ಬ ಹಿಂದುಸ್ತಾನಿಯನು
ಲತಾಮಂಗೇಶ್ಕರಳ ಸುಮಧುರ ಕಂಠದಲ್ಲಿ
ಹೇಳು ಪ್ರಭುವೇ! ಪ್ರೀತಿಗೆ ಗಡಿಗಳುಂಟೆ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...