Home / ಕವನ / ಕವಿತೆ / ಪ್ರೀತಿಗೆ ಗಡಿಯುಂಟೆ

ಪ್ರೀತಿಗೆ ಗಡಿಯುಂಟೆ

ಇನ್ನೆಷ್ಟು ದಿನ ಬಿತ್ತುತ್ತಾರೆ ಅವರು
ಪಾಕಿಸ್ತಾನದಲಿ ಭಾರತ ವಿರೋಧಿ ಬೀಜಗಳನ್ನು
ಇನ್ನೆಷ್ಟು ದಿನ ಬಿತ್ತುತ್ತಾರೆ ಇವರು
ಭಾರತದಲ್ಲಿ ಪಾಕಿಸ್ತಾನ ವಿರೋಧಿ ಬೀಜಗಳನ್ನು
ಅಲ್ಲಿ ಬಾಂಬ್ ಸ್ಫೋಟಿಸಿದ್ದಕ್ಕೆ
ಇವರು ಇಲ್ಲಿ ಅಭಿನಂದಿಸುತ್ತಾರೆ.
ಇಲ್ಲಿ ಬಾಂಬ್ ಸ್ಫೋಟಿಸಿದ್ದಕ್ಕೆ
ಅವರು ಅಲ್ಲಿ ಅಭಿನಂದಿಸುತ್ತಾರೆ.
ಇನ್ನೆಷ್ಟುದಿನ ಈ ಕಣ್ಣಮುಚ್ಚಾಲೆಯಾಟ
ಹಿರೋಶೀಮಾ ನಾಗಾಸಾಕಿಗಳ ದುರಂತ
ಕಲಿಸಲಿಲ್ಲವೇ ನಮಗಿನ್ನೂ ಪಾಠ?

ನಮ್ಮನಾಳುವ ಓ! ದೊರೆಯೇ ನಿಲ್ಲಿಸಿಬಿಡು
ನಿನ್ನ ಮದ್ದಿನ ಕಾರ್ಖಾನೆಯನ್ನು
ಇನ್ನೆಷ್ಟು ದಿನ ತಯಾರಿಸುತ್ತಿರಬೇಕು ನಾವು
ಮದ್ದು, ಗುಂಡು, ಬಾಂಬು, ಮಿಸಯಿಲ್ಲು
ಇನ್ನೆಷ್ಟು ದಿನ ಹರಿಯುತ್ತಿರಬೇಕು ಹೇಳು
ನಿರಪರಾಧಿ ಬಾಂಧವರ ರಕ್ತ?
ಅದಕ್ಕೆ… ನಿಲ್ಲಿಸಿಬಿಡು ದೊರೆಯೇ
ನಿನ್ನ ಮುದ್ದಿನ ಕಾರ್ಖಾನೆಯನ್ನು.

ಸಾಕು ಮಾಡು ಮದ್ದು ಗುಂಡಿನ ಘಾಟು
ಜೀವ ವಿರೋಧಿಗಳ ಥಾಟು
ಜೀವಂತ ಝಾಗಝಾಗಿಸುವ ನಗರಗಳ
ಮೇಲೆ ಬೆಂಕಿ ಮಳೆ ಸುರಿದದ್ದು ಸಾಕು
ಸಾಕು… ಅಧಿಕಾರದ ಅಹಮ್ಮಿನಲ್ಲಿ
ಒಡ ಹುಟ್ಟಿದವರ ಸುಟ್ಟಿದ್ದು.

ಹಾರುವ ಹಕ್ಕಿಗೆ ಗಡಿಗಳ ನಿರ್ಬಂಧವೆ?
ಸುಮಧುರ ಸಂಗೀತಕೆ ವಿಭಾಜಕ ರೇಖೆಗಳೇ
ತಣ್ಣಗೆ ಬೀಸುವ ತಂಗಾಳಿಗೆ ಗಿಡಗಳ ತಡೆಯೇ?
ನೆರಳು ಬಿಸಿಲಿಗೆ, ಸೂರ್ಯ ಚಂದ್ರರಿಗೆ
ತಡೆದು ನಿಲ್ಲಿಸುವ ಗಡಿಗಳುಂಟೆ
ಹುಡುಕಬಹುದೆ ಒಬ್ಬ ಪಾಕಿಸ್ತಾನಿಯನ್ನು
ನುಸ್ರತ್‌ ಫತೇ ಅಲಿಯವರ ಗಾಯನದಲಿ.
ಹುಡುಕಬಹುದೆ ಒಬ್ಬ ಹಿಂದುಸ್ತಾನಿಯನು
ಲತಾಮಂಗೇಶ್ಕರಳ ಸುಮಧುರ ಕಂಠದಲ್ಲಿ
ಹೇಳು ಪ್ರಭುವೇ! ಪ್ರೀತಿಗೆ ಗಡಿಗಳುಂಟೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...