Home / ಕವನ / ಕವಿತೆ / ದಾರಿಯಾವುದಯ್ಯಾ ಮುಂದೆ?

ದಾರಿಯಾವುದಯ್ಯಾ ಮುಂದೆ?

ಆಕಾಶವೇ ನೀಲಿ
ಪರದೆ
ಹಿಂದೆ

ಖಾಲಿ ಕುರ್ಚಿಗಳ
ಸಾಲು
ಮುಂದೆ

ಭಾಷಣದ ವಸ್ತು
‘ದಾರಿಯಾವುದಯ್ಯಾ ಮುಂದೆ?’
ಭಾಷಣಕಾರ:
ಶ್ರೀಮಂತ
ದಲಿತ ಕವಿ!

ರಾಜಕಾರಣಿಯೊಬ್ಬ
‘ಸಾಹಿತ್ಯವೆಲ್ಲಾ ಬೂಸ’ ಎಂದು ಕರೆದದ್ದು
ನೆನಪಿತ್ತು
ಕೇಳುತ್ತ ಕುಳಿತೆ

‘ಕಾವ್ಯವೆಂದರೆ?’
ಹೊಟ್ಟೆಯ ಸಿಟ್ಟು ರಟ್ಟೆಗೆ
ಹಸಿದ ಹೊಟ್ಟೆ ಹಿಟ್ಟಿಗೆ
ಸೀಟು ನೋಟು ಹಟ್ಟಿಗೆ…’
ಅಂತೆ ಕಂತೆಗಳ ಸಂತೆ
ಯಲಿ

ದಲಿತರ ನೋವು
ನಿರಾಸೆ
ಸಿಟ್ಟು-ಸೆಡವು
ಕಾವ್ಯವಾಗುವದು
ಹೇಗೆ?

ದೂರದಲಿ ರೈಲೊಂದು
ಸಿಳ್ಳೆ
ಹಾಕುತ್ತ ಹಾರಿ ಹೋಯಿತು

ಮಗ್ಗುಲು ಹೊರಳಿಸಿ
ಬಲಗಾಲ ಮೇಲೆ
ಎಡಗಾಲನಿಟ್ಟೆ
ತೊಟ್ಟ ಚಪ್ಪಲಿ
ಕೆಳಗೆ ಬಿಟ್ಟೆ

ಪಿಸುಗುಟ್ಟಿದನೊಬ್ಬ ಪಕ್ಕದಲಿ
‘ಏನು ಮಾತೋ;
ಕೂದ್ಲು ಸುಟ್ರೆ
ಇದ್ಲಲ್ಲ ಬೂದ್ಯಲ್ಲ ಎಲ್ಲಾ ತೌಡು’

ವೇದಿಕೆಯ ಮೇಲೆ
ಹೂದಾನಿ
ಅದರೊಳಗೆ ನಗುವ ಕಾಗದ
ದ ಹೂಗಳು

ಕರಿಯನೊಬ್ಬ ಆಕಳಿಸಿದ
ಕಾಣಲಿಲ್ಲ
ಬ್ರಹ್ಮಾಂಡ

ಮುಂಗಾರು ಮಳೆ
ಯಂತೆ ಭಾಷಣ
ಭೋರ್ಗರೆದ ಚಪ್ಪಾಳೆ

ಮೇಲೊಂದಿಷ್ಟು
ಬಿಸಿ ಕಾಫಿ
ಜನ
ಕೈ ಕುಲುಕಿ ಹಲ್ಕಿರಿದರು

ಎದ್ದು
ಕುಂಡಿ ಜಾಡಿಸಿಕೊಂಡೆ
ಚಪ್ಪಲಿಗಳು
ಮಾತಾಡಿಕೊಂಡು ನಕ್ಕವು
ನೀನು ಬಲ
ನಾನು ಎಡ

ದಾರಿ ಯಾವುದಯ್ಯಾ ಮುಂದೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...