Home / ಕವನ / ಕವಿತೆ / ದಾರಿಯಾವುದಯ್ಯಾ ಮುಂದೆ?

ದಾರಿಯಾವುದಯ್ಯಾ ಮುಂದೆ?

ಆಕಾಶವೇ ನೀಲಿ
ಪರದೆ
ಹಿಂದೆ

ಖಾಲಿ ಕುರ್ಚಿಗಳ
ಸಾಲು
ಮುಂದೆ

ಭಾಷಣದ ವಸ್ತು
‘ದಾರಿಯಾವುದಯ್ಯಾ ಮುಂದೆ?’
ಭಾಷಣಕಾರ:
ಶ್ರೀಮಂತ
ದಲಿತ ಕವಿ!

ರಾಜಕಾರಣಿಯೊಬ್ಬ
‘ಸಾಹಿತ್ಯವೆಲ್ಲಾ ಬೂಸ’ ಎಂದು ಕರೆದದ್ದು
ನೆನಪಿತ್ತು
ಕೇಳುತ್ತ ಕುಳಿತೆ

‘ಕಾವ್ಯವೆಂದರೆ?’
ಹೊಟ್ಟೆಯ ಸಿಟ್ಟು ರಟ್ಟೆಗೆ
ಹಸಿದ ಹೊಟ್ಟೆ ಹಿಟ್ಟಿಗೆ
ಸೀಟು ನೋಟು ಹಟ್ಟಿಗೆ…’
ಅಂತೆ ಕಂತೆಗಳ ಸಂತೆ
ಯಲಿ

ದಲಿತರ ನೋವು
ನಿರಾಸೆ
ಸಿಟ್ಟು-ಸೆಡವು
ಕಾವ್ಯವಾಗುವದು
ಹೇಗೆ?

ದೂರದಲಿ ರೈಲೊಂದು
ಸಿಳ್ಳೆ
ಹಾಕುತ್ತ ಹಾರಿ ಹೋಯಿತು

ಮಗ್ಗುಲು ಹೊರಳಿಸಿ
ಬಲಗಾಲ ಮೇಲೆ
ಎಡಗಾಲನಿಟ್ಟೆ
ತೊಟ್ಟ ಚಪ್ಪಲಿ
ಕೆಳಗೆ ಬಿಟ್ಟೆ

ಪಿಸುಗುಟ್ಟಿದನೊಬ್ಬ ಪಕ್ಕದಲಿ
‘ಏನು ಮಾತೋ;
ಕೂದ್ಲು ಸುಟ್ರೆ
ಇದ್ಲಲ್ಲ ಬೂದ್ಯಲ್ಲ ಎಲ್ಲಾ ತೌಡು’

ವೇದಿಕೆಯ ಮೇಲೆ
ಹೂದಾನಿ
ಅದರೊಳಗೆ ನಗುವ ಕಾಗದ
ದ ಹೂಗಳು

ಕರಿಯನೊಬ್ಬ ಆಕಳಿಸಿದ
ಕಾಣಲಿಲ್ಲ
ಬ್ರಹ್ಮಾಂಡ

ಮುಂಗಾರು ಮಳೆ
ಯಂತೆ ಭಾಷಣ
ಭೋರ್ಗರೆದ ಚಪ್ಪಾಳೆ

ಮೇಲೊಂದಿಷ್ಟು
ಬಿಸಿ ಕಾಫಿ
ಜನ
ಕೈ ಕುಲುಕಿ ಹಲ್ಕಿರಿದರು

ಎದ್ದು
ಕುಂಡಿ ಜಾಡಿಸಿಕೊಂಡೆ
ಚಪ್ಪಲಿಗಳು
ಮಾತಾಡಿಕೊಂಡು ನಕ್ಕವು
ನೀನು ಬಲ
ನಾನು ಎಡ

ದಾರಿ ಯಾವುದಯ್ಯಾ ಮುಂದೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...