Home / ಕವನ / ಕವಿತೆ / ಕ್ಯಾಟ್‌ವಾಕ್ ಹುಡುಗಿ (Model Girl)

ಕ್ಯಾಟ್‌ವಾಕ್ ಹುಡುಗಿ (Model Girl)

ಹೊಟ್ಟೆಪಾಡು ನೋಡಿ
ಅಗೊಮ್ಮೆ ಈಗೊಮ್ಮೆ ಬೆಕ್ಕಿನ ಹೆಜ್ಜೆ
ಇಡಬೇಕಾದ ಪ್ರಸಂಗ
ಹದಿನೆಂಟರ ಸುಂದರಿ
ನಗು ಮಾತು ಅಷ್ಟಕ್ಕಷ್ಟೇ
ಕುಹಕಿಗಳು ಇದು ಸೈಕಿಕ್ ಇರಬೇಕಂದದಷ್ಟೆ.
ಯಾರಿಗೂ ಗೊತ್ತಿಲ್ಲ ಅವಳು ಯಾರು!

ರಾಜಕುಮಾರಿ ಗಂಭೀರವದನೆ
ಮದವೇರಿದ ಕಣ್ಣುಗಳಿಗೆ
ಮಧು ತುಂಬಿಟ್ಟ ಗಾಜು ಹೂಜೆ
ತಿಳು ಸೊಂಟ ನೀಲಿ ಕಣ್ಣು
ಬಿರಿದ ತುಟಿ ತುಂಬೆಲ್ಲ ಕೃತಕನಗು
ಅರೆಬೆತ್ತಲಿನ ಕ್ಯಾಟ್‌ವಾಕ್ ಹುಡುಗಿ
ಯಾರಿಗೂ ಗೊತ್ತಿಲ್ಲ ಅವಳು ಯಾರು!

ಹೆಸರು ವಿಳಾಸ ಕೇಳಿದಷ್ಟು
ಫೋನ್ ಇಲ್ಲ, ಈ ಊರಿನವಳೇ ಅಲ್ಲ-
ನೂರೆಂಟು ನೆಪ ಹೇಳಿ
ಒಳಗೊಳಗೇ ಕೊರಗಿ
ಕಣ್ಣು ತುಂಬಿಕೊಳ್ಳುವ ಹುಡುಗಿ
ಯಾರಿಗೂ ಗೊತ್ತಿಲ್ಲ ಅವಳು ಯಾರು!

ಬಟ್ಟೆ ಬರೆ ಚಿನ್ನಾಭರಣ
ಮಿಕ್ಸಿ, ಸೋಪು ಓಪೇರಾಗಳಿಗೆ
ಪಾರದರ್ಶಕ ಬಟ್ಟೆಯ ನಾಜೂಕಿನ
ಕ್ಯಾಟ್‌ವಾಕ್ ಹುಡುಗಿ ಮಾಡೆಲ್‌ಗರ್ಲ್
‘ಸುಜಿ’ ಅಷ್ಟೇ ಪರಿಚಯ.
“ಸೌಂದರ್ಯ ಸ್ಪರ್ಧೆಯ ಸುಂದರಿ
ಮಿಸ್ ಬೆಂಗಳೂರ”
ಕಿರೀಟು ಧರಿಸಿದ್ದು ಕೇವಲ ಕಿರುನಗೆ
ಒಳಗೊಳಗೆ ಅವಳೆದೆಗೆ ಹರಿತಚೂರಿ
ಯಾರಿಗೂ ಗೊತ್ತಿಲ್ಲ ಅವಳು ಯಾರು! ಎಲ್ಲಿಯವಳು.

ಪತ್ರಿಕೆಯ ಮುಖಪುಟಕೆ ಗ್ರಾಸು ‘ಸುಜಿ’
ವಿವರ ಹುಡುಕುವ ತಡಪಡಿಕೆ ಟಿ.ವಿ. ಪೇಪರದವರಿಗೆ –
ಮೂಲಕಥೆ ಹೊರಗೆಡವಲು ಆತಂಕ
ವೇಶ್ಯೆಯ ಮಗಳೆನ್ನುವ ಹಿಂಸೆಗೆ
ನೇಣು ಹಾಕಿಕೊಂಡ ‘ಸುಜಿ’
ಸೂಳಿಗೇರಿಗೆಲ್ಲ ಆಶ್ಚರ್ಯ.

ಮರುದಿನ ಮುಖಫುಟಕೆ
ನೇಣು ಚಿತ್ರ, ಮೇಲೆ ತಲೆಬರಹ
“ಅವಳು ಯಾರು ಆಗಿಯೇ ಉಳಿಸಬಹುದಿತ್ತು”
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...