Home / ಕವನ / ಕವಿತೆ / ಕ್ಯಾಟ್‌ವಾಕ್ ಹುಡುಗಿ (Model Girl)

ಕ್ಯಾಟ್‌ವಾಕ್ ಹುಡುಗಿ (Model Girl)

ಹೊಟ್ಟೆಪಾಡು ನೋಡಿ
ಅಗೊಮ್ಮೆ ಈಗೊಮ್ಮೆ ಬೆಕ್ಕಿನ ಹೆಜ್ಜೆ
ಇಡಬೇಕಾದ ಪ್ರಸಂಗ
ಹದಿನೆಂಟರ ಸುಂದರಿ
ನಗು ಮಾತು ಅಷ್ಟಕ್ಕಷ್ಟೇ
ಕುಹಕಿಗಳು ಇದು ಸೈಕಿಕ್ ಇರಬೇಕಂದದಷ್ಟೆ.
ಯಾರಿಗೂ ಗೊತ್ತಿಲ್ಲ ಅವಳು ಯಾರು!

ರಾಜಕುಮಾರಿ ಗಂಭೀರವದನೆ
ಮದವೇರಿದ ಕಣ್ಣುಗಳಿಗೆ
ಮಧು ತುಂಬಿಟ್ಟ ಗಾಜು ಹೂಜೆ
ತಿಳು ಸೊಂಟ ನೀಲಿ ಕಣ್ಣು
ಬಿರಿದ ತುಟಿ ತುಂಬೆಲ್ಲ ಕೃತಕನಗು
ಅರೆಬೆತ್ತಲಿನ ಕ್ಯಾಟ್‌ವಾಕ್ ಹುಡುಗಿ
ಯಾರಿಗೂ ಗೊತ್ತಿಲ್ಲ ಅವಳು ಯಾರು!

ಹೆಸರು ವಿಳಾಸ ಕೇಳಿದಷ್ಟು
ಫೋನ್ ಇಲ್ಲ, ಈ ಊರಿನವಳೇ ಅಲ್ಲ-
ನೂರೆಂಟು ನೆಪ ಹೇಳಿ
ಒಳಗೊಳಗೇ ಕೊರಗಿ
ಕಣ್ಣು ತುಂಬಿಕೊಳ್ಳುವ ಹುಡುಗಿ
ಯಾರಿಗೂ ಗೊತ್ತಿಲ್ಲ ಅವಳು ಯಾರು!

ಬಟ್ಟೆ ಬರೆ ಚಿನ್ನಾಭರಣ
ಮಿಕ್ಸಿ, ಸೋಪು ಓಪೇರಾಗಳಿಗೆ
ಪಾರದರ್ಶಕ ಬಟ್ಟೆಯ ನಾಜೂಕಿನ
ಕ್ಯಾಟ್‌ವಾಕ್ ಹುಡುಗಿ ಮಾಡೆಲ್‌ಗರ್ಲ್
‘ಸುಜಿ’ ಅಷ್ಟೇ ಪರಿಚಯ.
“ಸೌಂದರ್ಯ ಸ್ಪರ್ಧೆಯ ಸುಂದರಿ
ಮಿಸ್ ಬೆಂಗಳೂರ”
ಕಿರೀಟು ಧರಿಸಿದ್ದು ಕೇವಲ ಕಿರುನಗೆ
ಒಳಗೊಳಗೆ ಅವಳೆದೆಗೆ ಹರಿತಚೂರಿ
ಯಾರಿಗೂ ಗೊತ್ತಿಲ್ಲ ಅವಳು ಯಾರು! ಎಲ್ಲಿಯವಳು.

ಪತ್ರಿಕೆಯ ಮುಖಪುಟಕೆ ಗ್ರಾಸು ‘ಸುಜಿ’
ವಿವರ ಹುಡುಕುವ ತಡಪಡಿಕೆ ಟಿ.ವಿ. ಪೇಪರದವರಿಗೆ –
ಮೂಲಕಥೆ ಹೊರಗೆಡವಲು ಆತಂಕ
ವೇಶ್ಯೆಯ ಮಗಳೆನ್ನುವ ಹಿಂಸೆಗೆ
ನೇಣು ಹಾಕಿಕೊಂಡ ‘ಸುಜಿ’
ಸೂಳಿಗೇರಿಗೆಲ್ಲ ಆಶ್ಚರ್ಯ.

ಮರುದಿನ ಮುಖಫುಟಕೆ
ನೇಣು ಚಿತ್ರ, ಮೇಲೆ ತಲೆಬರಹ
“ಅವಳು ಯಾರು ಆಗಿಯೇ ಉಳಿಸಬಹುದಿತ್ತು”
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...