ಕ್ಯಾಟ್‌ವಾಕ್ ಹುಡುಗಿ (Model Girl)

ಹೊಟ್ಟೆಪಾಡು ನೋಡಿ
ಅಗೊಮ್ಮೆ ಈಗೊಮ್ಮೆ ಬೆಕ್ಕಿನ ಹೆಜ್ಜೆ
ಇಡಬೇಕಾದ ಪ್ರಸಂಗ
ಹದಿನೆಂಟರ ಸುಂದರಿ
ನಗು ಮಾತು ಅಷ್ಟಕ್ಕಷ್ಟೇ
ಕುಹಕಿಗಳು ಇದು ಸೈಕಿಕ್ ಇರಬೇಕಂದದಷ್ಟೆ.
ಯಾರಿಗೂ ಗೊತ್ತಿಲ್ಲ ಅವಳು ಯಾರು!

ರಾಜಕುಮಾರಿ ಗಂಭೀರವದನೆ
ಮದವೇರಿದ ಕಣ್ಣುಗಳಿಗೆ
ಮಧು ತುಂಬಿಟ್ಟ ಗಾಜು ಹೂಜೆ
ತಿಳು ಸೊಂಟ ನೀಲಿ ಕಣ್ಣು
ಬಿರಿದ ತುಟಿ ತುಂಬೆಲ್ಲ ಕೃತಕನಗು
ಅರೆಬೆತ್ತಲಿನ ಕ್ಯಾಟ್‌ವಾಕ್ ಹುಡುಗಿ
ಯಾರಿಗೂ ಗೊತ್ತಿಲ್ಲ ಅವಳು ಯಾರು!

ಹೆಸರು ವಿಳಾಸ ಕೇಳಿದಷ್ಟು
ಫೋನ್ ಇಲ್ಲ, ಈ ಊರಿನವಳೇ ಅಲ್ಲ-
ನೂರೆಂಟು ನೆಪ ಹೇಳಿ
ಒಳಗೊಳಗೇ ಕೊರಗಿ
ಕಣ್ಣು ತುಂಬಿಕೊಳ್ಳುವ ಹುಡುಗಿ
ಯಾರಿಗೂ ಗೊತ್ತಿಲ್ಲ ಅವಳು ಯಾರು!

ಬಟ್ಟೆ ಬರೆ ಚಿನ್ನಾಭರಣ
ಮಿಕ್ಸಿ, ಸೋಪು ಓಪೇರಾಗಳಿಗೆ
ಪಾರದರ್ಶಕ ಬಟ್ಟೆಯ ನಾಜೂಕಿನ
ಕ್ಯಾಟ್‌ವಾಕ್ ಹುಡುಗಿ ಮಾಡೆಲ್‌ಗರ್ಲ್
‘ಸುಜಿ’ ಅಷ್ಟೇ ಪರಿಚಯ.
“ಸೌಂದರ್ಯ ಸ್ಪರ್ಧೆಯ ಸುಂದರಿ
ಮಿಸ್ ಬೆಂಗಳೂರ”
ಕಿರೀಟು ಧರಿಸಿದ್ದು ಕೇವಲ ಕಿರುನಗೆ
ಒಳಗೊಳಗೆ ಅವಳೆದೆಗೆ ಹರಿತಚೂರಿ
ಯಾರಿಗೂ ಗೊತ್ತಿಲ್ಲ ಅವಳು ಯಾರು! ಎಲ್ಲಿಯವಳು.

ಪತ್ರಿಕೆಯ ಮುಖಪುಟಕೆ ಗ್ರಾಸು ‘ಸುಜಿ’
ವಿವರ ಹುಡುಕುವ ತಡಪಡಿಕೆ ಟಿ.ವಿ. ಪೇಪರದವರಿಗೆ –
ಮೂಲಕಥೆ ಹೊರಗೆಡವಲು ಆತಂಕ
ವೇಶ್ಯೆಯ ಮಗಳೆನ್ನುವ ಹಿಂಸೆಗೆ
ನೇಣು ಹಾಕಿಕೊಂಡ ‘ಸುಜಿ’
ಸೂಳಿಗೇರಿಗೆಲ್ಲ ಆಶ್ಚರ್ಯ.

ಮರುದಿನ ಮುಖಫುಟಕೆ
ನೇಣು ಚಿತ್ರ, ಮೇಲೆ ತಲೆಬರಹ
“ಅವಳು ಯಾರು ಆಗಿಯೇ ಉಳಿಸಬಹುದಿತ್ತು”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾರಿಯಾವುದಯ್ಯಾ ಮುಂದೆ?
Next post ಬಾಳು

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…