ಎಲ್ಲೆಡೆ ಸಲ್ಲುವುದು ಒಳಿತು

ಪ್ರಿಯ ಸಖಿ,
ಅಲ್ಲಾಗಲಿ ಅಥವಾ ಇಲ್ಲಾಗಲಿ
ಸಲ್ಲದೆನ್ನಬೇಡ
ಒಳಿತು
ಎಲ್ಲೂ ಒಂದೇ ನೋಡ
ಸೆಣಸು ನಿಸು ಒಳ್ಮನಸು ಪತಾಕೆ
ಬೀಳದಂತೆ ಜೋಕೆ !
ಕವಿ ಗೋಪಾಲಕೃಷ್ಣ ಅಡಿಗರ ‘ಅಲ್ಲಾಗಲಿ’ ಎಂಬ ಕವನದ ಈ ಸಾಲುಗಳನ್ನು ಓದಿದೆಯಾ ಸಖಿ? ಎಲ್ಲ ಕೆಡಕುಗಳನ್ನು ನೋಡಿ ನೋಡಿ ತಲ್ಲಣಿಸುತ್ತಿದ್ದ ಎದೆಗೆ ಕೊಂಚ ತಂಪಾಯಿತೆ? ಒಳಿತು ಇಲ್ಲಿ ಇಲ್ಲವೇ ಇಲ್ಲ ಎಂದು ಪರಿತಪಿಸಿ ಕೊರಗಬೇಡ ಎಲ್ಲೆಡೆಯೂ ಒಳಿತು ಇದ್ದೇ ಇದೆ. ಒಳಮನಸ್ಸಿನಲ್ಲೇ ಕೆಟ್ಟದ್ದರೊಂದಿಗೆ ಸೆಣಸು. ಒಳಿತಿನ ಪತಾಕೆ ಕೆಳಜಾರಿ ಬೀಳದಂತೆ ಜೋಪಾನವಾಗಿ ನಿಲ್ಲಿಸು ಎಂದು ಹಿತನುಡಿಗಳನ್ನಾಡಿದ್ದಾರೆ ಕವಿ.

ನಮ್ಮ ಎಲ್ಲ ಒಳಿತು ಕೆಡುಕಿನ ಮೂಲ ನಮ್ಮೊಳಗೇ ಇದೆ. ಅದನ್ನು ಆ ದಿಕ್ಕುಗಳಲ್ಲಿ ನಡೆಸುವವರೂ ನಾವೇ. ಒಳಿತಿನೆಡೆಗೇ ನಾವು ನಡೆಯುತ್ತೇವೆ ಎಂದು ಮನದಲ್ಲಿ ದೃಢವಾಗಿ ನಿಶ್ಚಯಿಸಿದರೆ, ಅದನ್ನು ಮೀರುವ ಧೈರ್ಯ ಬಹುಶಃ ನಮಗೂ ಬರಬಾರದು! ಪದ್ಯವನ್ನು ಮುಂದುವರೆಸುತ್ತಾ ಕವಿ,
ಒಳಮನ ದೇವರ ಮನೆ ಮಣಿಯಲ್ಲಿ
ಇದೆ ಇಂದಿಗೂ ಆ ದೀಪದ ಮಲ್ಲಿ
ಎಣ್ಣೆ ತೀರಿ ಕರಟಿದರೂ ಬತ್ತಿ
ಒತ್ತಿ ತುಳಿದರೂ ತಮಸ್ಸು ಮುತ್ತಿ
ಹೂಡಿದೆ ಕತ್ತಲ ಕೊಡೆ ರಣ
ಈ ಚಿತ್ಕಣ ಘನ ಚಿರಂತನ
ನೋಡಿ ಬೀಗು, ಸಂದೇಹನೀಗು
ಸಾಷ್ಟಾಂಗ ಬಾಗು ಅದಕೆ
ಒಲವಿನ ಹನಿಮಣಿ ಕೊಡುಕೈಗಾಣಿಕೆ
ಎರೆಯೊ ನಿನ್ನ ಎದೆಯೊರತೆ
ಬೆಳಕಿಗೆ ಬಾರದಂತೆ ಕೊರತೆ!
ಎನ್ನುತ್ತಾರೆ ಒಳಮನಸ್ಸಿನ ದೇವರಮನೆಯಲ್ಲಿ ಎಣ್ಣೆ ತೀರಿ, ಬತ್ತಿ ಕರಟಿದ ಹಣತೆ ಇದೆ. ತುಂಬಿರುವ ಕತ್ತಲಿನೊಡನೆ ನಿರಂತರವಾಗಿ ಯುದ್ಧ ಸಾರಿದೆ ಮನಸ್ಸು. ಮನದಲ್ಲಿ ಸದಾ ಒಳಿತು ಕೆಡುಕಿನ ಕುರಿತು ವಿವೇಚನೆ ನಡೆದೇ ಇದೆ. ಅದನ್ನು ನೋಡಿ ಹೆಮ್ಮೆ ಪಡು. ಕತ್ತಲ ಮೇಲೆ ಬೆಳಕು ಗೆಲುವು ಸಾಧಿಸೇ ಸಾಧಿಸುತ್ತದೆ ಸಂದೇಹ ಬೇಡೆನ್ನುತ್ತಾ ಧೈರ್ಯ ತುಂಬುತ್ತಾರೆ ಕವಿ.

ಬೆಳಕನ್ನು ಶಾಶ್ವತವಾಗಿ ನುಂಗಿಬಿಡಲು ಕತ್ತಲು ಶತಪ್ರಯತ್ನ ಮಾಡಿದರೂ ಕತ್ತಲಿನ ಅರಿವಿಗೇ ಬರದಂತೆ ಮೆಲ್ಲ ಮೆಲ್ಲಗೆ ಬೆಳಕು ಪಸರಿಸಿ ಕತ್ತಲನ್ನು ಹೊಡೆದೋಡಿಸಿ ಬಿಡುತ್ತವಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಎಲ್ಲಕ್ಕಿಂತ ಮೊದಲು
Next post ಕಾಲನಾಗಗಳೊಡಲು ಜಗದ ಮನ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…