ತನು ತುಂಬಿ ಮನ ತುಂಬಿ

ತನು ತುಂಬಿ ಮನ ತುಂಬಿ
ಭಾವ ತುಂಬಿ ರಾಗ ತುಂಬಿ
ತುಂಬಿತೋ ಭಕ್ತಿ ಎಂಬ ಕೊಡವು||

ಗಂಗೆ ತುಂಬಿ ಯಮುನೆ ತುಂಬಿ
ತುಂಗೆ ತುಂಬಿ ಭದ್ರೆ ತುಂಬಿ
ತುಂಬಿತೋ ಅತ್ತೆ ನಾದಿನಿಯರ ಪ್ರೇಮದ ಕೊಡವು ||

ಬಣ್ಣ ತುಂಬಿ ಬಿಂಕ ತುಂಬಿ
ಬೆಡಗು ತುಂಬಿ ಬಿನ್ನಾಣ ತುಂಬಿ
ತುಂಬಿತೋ ಅಕ್ಕ ತಂಗಿಯರ ಕೊಡವು ||

ಸುಂಕ ತುಂಬಿ ನ್ಯಾಯ ತುಂಬಿ
ಧರ್ಮ ತುಂಬಿ ಕರ್ಮ ತುಂಬಿ
ತುಂಬಿತೋ ಮಾವ ಅಳಿಯರ ಒಲುಮೆಯ ಕೊಡವು ||

ನವರಸ ತುಂಬಿ ಶೃಂಗರ ತುಂಬಿ
ನಾದ ತುಂಬಿ ನೀನಾದ ತುಂಬಿ
ತುಂಬಿತೋ ಪಂಚಾಗ್ನಿಯೆಂಬ ಕೊಡವು ||

ಜಾಣನೆಂಬ ಜಾಗೃತಿ ತುಂಬಿ
ಮಾನವೆಂಬ ಮಾನ್ಯತೆ ತುಂಬಿ
ತುಂಬಿತೋ ಸಂಸಾರವೆಂಬ ಕೊಡವು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವನೇ ಬಂದ
Next post ಆಧುನಿಕತೆ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…