ತನು ತುಂಬಿ ಮನ ತುಂಬಿ

ತನು ತುಂಬಿ ಮನ ತುಂಬಿ
ಭಾವ ತುಂಬಿ ರಾಗ ತುಂಬಿ
ತುಂಬಿತೋ ಭಕ್ತಿ ಎಂಬ ಕೊಡವು||

ಗಂಗೆ ತುಂಬಿ ಯಮುನೆ ತುಂಬಿ
ತುಂಗೆ ತುಂಬಿ ಭದ್ರೆ ತುಂಬಿ
ತುಂಬಿತೋ ಅತ್ತೆ ನಾದಿನಿಯರ ಪ್ರೇಮದ ಕೊಡವು ||

ಬಣ್ಣ ತುಂಬಿ ಬಿಂಕ ತುಂಬಿ
ಬೆಡಗು ತುಂಬಿ ಬಿನ್ನಾಣ ತುಂಬಿ
ತುಂಬಿತೋ ಅಕ್ಕ ತಂಗಿಯರ ಕೊಡವು ||

ಸುಂಕ ತುಂಬಿ ನ್ಯಾಯ ತುಂಬಿ
ಧರ್ಮ ತುಂಬಿ ಕರ್ಮ ತುಂಬಿ
ತುಂಬಿತೋ ಮಾವ ಅಳಿಯರ ಒಲುಮೆಯ ಕೊಡವು ||

ನವರಸ ತುಂಬಿ ಶೃಂಗರ ತುಂಬಿ
ನಾದ ತುಂಬಿ ನೀನಾದ ತುಂಬಿ
ತುಂಬಿತೋ ಪಂಚಾಗ್ನಿಯೆಂಬ ಕೊಡವು ||

ಜಾಣನೆಂಬ ಜಾಗೃತಿ ತುಂಬಿ
ಮಾನವೆಂಬ ಮಾನ್ಯತೆ ತುಂಬಿ
ತುಂಬಿತೋ ಸಂಸಾರವೆಂಬ ಕೊಡವು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವನೇ ಬಂದ
Next post ಆಧುನಿಕತೆ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…