ಆಲ್ಪ್ಸ್‌ ಪರ್ವತ ಶ್ರೇಣಿ ಮತ್ತು ಜಿನೇವಾ ಸರೋವರ

ಸ್ವಿಸ್ (Switzerland)ಗೇ
ಬಿಗಿ ಬೆಂಗಾವಲಾಗಿರುವ
‘ಆಲ್ಪ್ಸ್’ ಪರ್ವತ ಶ್ರೇಣಿಗಳು
ಆಕಾಶದ ಏಕಾಂತದೊಳಗೆ
ತನ್ನ ಹಿಮದೊಡಲು ಹರವಿಕೊಂಡು
ಪಿಸು ಮಾತಾಡುತ್ತ ಮುತ್ತಿಸುತ್ತಿದೆ.
ಮುತ್ತಿನ ಜೇನು ರಸ ತುಂಬಿಕೊಳ್ಳುತ್ತಿರುವ
‘ಜಿನೇವಾ ಸರೋವರ’
ಬಿಸಿಲು ಕಣ್ಣು ಮುಚ್ಚಾಲೆಯಲಿ
ಫಳ ಫಳ ಹೊಳೆಯುವ ತನ್ನ
ಸ್ಫಟಿಕ ಹಿಮ
ಪಾತವಾಗದಂತೆ
ಸೂರ್ಯನಿಗೆ ಆಹುತಿಯಾಗದಂತೆ
ಒಂದಕ್ಕಿಂತ ಒಂದು ಶ್ರೇಣಿಗಳು
ರಮಣೀಯ ಕಣ್ಣುಮುಚ್ಚಾಲೆಯಾಡಿ
ಮರೆಸುವಂತಿದ್ದರೂ….
ಕೊನೆಗೆ ದಣಿದ ದೇಹ
ಆಯತಪ್ಪಿ ಗಿರಕಿ ಹೊಡೆಯುತ್ತ
ಕೊಳ್ಳಗಳೊಳಗೆ ಜಾರುತ್ತ
ತನ್ನ ಬಿಸಿ ಉಸಿರಿನಲ್ಲಿ
ತಾನೇ ಕರಗಿ
ಸದ್ದಿಲ್ಲದೆ ಸರೋವರ ಸೇರಿ
ನೀಲಕಾಂತೆಯಾಗಿ ವಿಶ್ರಮಿಸುವುದು.
(‘ಜಿನೇವಾ’ ಮಾರ್ಗವಾಗಿ ‘ರೋಮ್’ಗೆ ಹೊರಟಾಗ ವಿಮಾನದಿಂದ ಕಾಣಿಸುವ ಆಲ್ಫ್ಸ್‌ ಪರ್ವತಶ್ರೇಣಿಗಳು ಮತ್ತು ಜಿನೇವಾ ಸರೋವರದ ದೃಶ್ಯ ಮನಮೋಹಕವಾದುದು.)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಣ್ಣಿಮೆಯ ಚಂದ್ರಮನು
Next post ಲಿಂಗಮ್ಮನ ವಚನಗಳು – ೧೩

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…