ಆಧುನಿಕತೆ

ನನ್ನಪ್ಪ ದುಡಿಮೆಗಾರ
ಹೆಣಗಾಡಿ ಕೊಂಡ ಗದ್ದೆಗಳ
ಮತ್ತೆ ಹದಮಾಡಿ ಹಸನುಗೈದ
ಅಸಲಿಗೆ ಈಗ ಅಲ್ಲಿ
ಗದ್ದೆಗಳೇ ಇಲ್ಲ
ಬದಲಿಗೆ ತೋಟಗಳು ತಲೆ ಎತ್ತಿದೆ
ತೆಂಗು ಕಂಗು ವಾಣಿಜ್ಯ ಬೆಳೆಗಳು

ನನ್ನಣ್ಣನ ಜೊತೆಗೂಡಿ
ಎತ್ತರ ಜಿಗಿವಾಡುತ್ತಿದ್ದ
ಗದ್ದೆ ಹಾಳಿಗಳು
ಈಗ ಮಂಗಮಾಯ
ಗಿಡಗಳಿಗೆ ಬುಡಗಳಾಗಿ
ಅಪ್ಪ ಗದ್ದೆಯ ಬದುವಿಗೆ
ಅಂದು ಕಟ್ಟಿಸಿದ ಕಲ್ಲು ಮಣ್ಣಿನ
ಪಾಗಾರು ಇಂದಿಲ್ಲ – ಅಲ್ಲಿ
ಕಾಂಕ್ರೀಟು ಕಂಪೌಂಡು
ರೆಡಿಯಾಗಿದೆ

ನೀರು ಹಾಯಿಸಲು
ತೋಡಿದ ಬೆಲಗುಗಳು
ಅದೃಶ್ಯ-ಪರ್ಯಾಯಕ್ಕೆ
ಪ್ಲಾಸ್ಟಿಕ್ಕು ಪೈಪುಗಳು
ಮಣ್ಣಲ್ಲಿಯೇ ಅಡಗಿ
ಗಿಡಗಳಿಗೆ ಡ್ರಿಪ್ ಇರಿಗೇಷನ್‌ಸ್ಪ್ರಿಂಕಲರು

ನಮ್ಮ ಮನೆಯ ಕೊಟ್ಟಿಗೆಯಲ್ಲಿ
‘ಅಂಬಾ’ ದನಿ ನಿನದಿಸುತ್ತಿಲ್ಲ
ಮನೆ ಹಾಲ ರುಚಿ ಹೋಗಿ
ಬದಲಿಗೆ ಕಲಬೆರಕೆಯ
ಹಾಲಿನ ಪಾಕೀಟು
ಮನೆಬಾಗಿಲಿಗೆ ಬೆಳ್ಳಂಬೆಳಗ್ಗೆ

ನನ್ನಮ್ಮ ಎರಡು ರಟ್ಟೆ
ಬಳಸಿ ಮಸಾಲೆ ಅರೆಯುತ್ತಿದ್ದ
ರುಬ್ಬು ಕಲ್ಲು ಈಗಿಲ್ಲ
ಆ ಜಾಗದಲ್ಲಿ ರಾರಾಜಿಸುತ್ತಿದೆ
ಮಿಕ್ಸರು, ಗ್ರ್‍ಯಾಂಡರು

ನಮ್ಮ ಮನೆಯಲ್ಲೀಗ ವರ್ಷಾ ಒಂದಾವರ್ತಿ
ಮನೆ ಮುಂದಿನಂಗಳ ಹಸನು ಮಾಡಬೇಕಿಲ್ಲ
ಅದಕ್ಕೆ ಅಮ್ಮನ ಒರೆಗ ಕಲ್ಲುಗಳು
ಅಟ್ಟಕ್ಕೇರಿದೆ ಬಾಳಿಲ್ಲದೆ
ಹೊರತಿಗೆ, ಸಿಮೆಂಟು ನೆಲ
ಸಿರಿವಂತಿಗೆ ಸಾರುತ್ತಿದೆ

ಅಮ್ಮ ಅಂದು ಸೌದೆ ಅಟ್ಟಿ
ಅಡುಗೆ ಬೇಯಿಸುತ್ತಿದ್ದ ಮಣ್ಣಿನ
ಒಲೆಗಳು ಈಗಿಲ್ಲ
ಆ ಜಾಗದಲ್ಲಿ ಕಲ್ಲಿನ ಕಟ್ಟೆ
ಎದ್ದು ಗ್ಯಾಸ ಒಲೆ
ಸ್ಥಾಪನೆಯಾಗಿದೆ

ನಮ್ಮ ಮನೆಯಲ್ಲೀಗ
ಆಡಂಬರವಿದೆ, ಆದರೆ
ಹಿಂದಿನ ಆನಂದವಿಲ್ಲ
ಒಡಹುಟ್ಟಿದವರ ಸಂಬಂಧವಿದೆ
ಹಿಂದಿನ ಅನುಬಂಧವಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತನು ತುಂಬಿ ಮನ ತುಂಬಿ
Next post ಅಪ್ಪುವಿನ ರೈಲು

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…