Home / ಕವನ / ಕವಿತೆ / ಆಧುನಿಕತೆ

ಆಧುನಿಕತೆ

ನನ್ನಪ್ಪ ದುಡಿಮೆಗಾರ
ಹೆಣಗಾಡಿ ಕೊಂಡ ಗದ್ದೆಗಳ
ಮತ್ತೆ ಹದಮಾಡಿ ಹಸನುಗೈದ
ಅಸಲಿಗೆ ಈಗ ಅಲ್ಲಿ
ಗದ್ದೆಗಳೇ ಇಲ್ಲ
ಬದಲಿಗೆ ತೋಟಗಳು ತಲೆ ಎತ್ತಿದೆ
ತೆಂಗು ಕಂಗು ವಾಣಿಜ್ಯ ಬೆಳೆಗಳು

ನನ್ನಣ್ಣನ ಜೊತೆಗೂಡಿ
ಎತ್ತರ ಜಿಗಿವಾಡುತ್ತಿದ್ದ
ಗದ್ದೆ ಹಾಳಿಗಳು
ಈಗ ಮಂಗಮಾಯ
ಗಿಡಗಳಿಗೆ ಬುಡಗಳಾಗಿ
ಅಪ್ಪ ಗದ್ದೆಯ ಬದುವಿಗೆ
ಅಂದು ಕಟ್ಟಿಸಿದ ಕಲ್ಲು ಮಣ್ಣಿನ
ಪಾಗಾರು ಇಂದಿಲ್ಲ – ಅಲ್ಲಿ
ಕಾಂಕ್ರೀಟು ಕಂಪೌಂಡು
ರೆಡಿಯಾಗಿದೆ

ನೀರು ಹಾಯಿಸಲು
ತೋಡಿದ ಬೆಲಗುಗಳು
ಅದೃಶ್ಯ-ಪರ್ಯಾಯಕ್ಕೆ
ಪ್ಲಾಸ್ಟಿಕ್ಕು ಪೈಪುಗಳು
ಮಣ್ಣಲ್ಲಿಯೇ ಅಡಗಿ
ಗಿಡಗಳಿಗೆ ಡ್ರಿಪ್ ಇರಿಗೇಷನ್‌ಸ್ಪ್ರಿಂಕಲರು

ನಮ್ಮ ಮನೆಯ ಕೊಟ್ಟಿಗೆಯಲ್ಲಿ
‘ಅಂಬಾ’ ದನಿ ನಿನದಿಸುತ್ತಿಲ್ಲ
ಮನೆ ಹಾಲ ರುಚಿ ಹೋಗಿ
ಬದಲಿಗೆ ಕಲಬೆರಕೆಯ
ಹಾಲಿನ ಪಾಕೀಟು
ಮನೆಬಾಗಿಲಿಗೆ ಬೆಳ್ಳಂಬೆಳಗ್ಗೆ

ನನ್ನಮ್ಮ ಎರಡು ರಟ್ಟೆ
ಬಳಸಿ ಮಸಾಲೆ ಅರೆಯುತ್ತಿದ್ದ
ರುಬ್ಬು ಕಲ್ಲು ಈಗಿಲ್ಲ
ಆ ಜಾಗದಲ್ಲಿ ರಾರಾಜಿಸುತ್ತಿದೆ
ಮಿಕ್ಸರು, ಗ್ರ್‍ಯಾಂಡರು

ನಮ್ಮ ಮನೆಯಲ್ಲೀಗ ವರ್ಷಾ ಒಂದಾವರ್ತಿ
ಮನೆ ಮುಂದಿನಂಗಳ ಹಸನು ಮಾಡಬೇಕಿಲ್ಲ
ಅದಕ್ಕೆ ಅಮ್ಮನ ಒರೆಗ ಕಲ್ಲುಗಳು
ಅಟ್ಟಕ್ಕೇರಿದೆ ಬಾಳಿಲ್ಲದೆ
ಹೊರತಿಗೆ, ಸಿಮೆಂಟು ನೆಲ
ಸಿರಿವಂತಿಗೆ ಸಾರುತ್ತಿದೆ

ಅಮ್ಮ ಅಂದು ಸೌದೆ ಅಟ್ಟಿ
ಅಡುಗೆ ಬೇಯಿಸುತ್ತಿದ್ದ ಮಣ್ಣಿನ
ಒಲೆಗಳು ಈಗಿಲ್ಲ
ಆ ಜಾಗದಲ್ಲಿ ಕಲ್ಲಿನ ಕಟ್ಟೆ
ಎದ್ದು ಗ್ಯಾಸ ಒಲೆ
ಸ್ಥಾಪನೆಯಾಗಿದೆ

ನಮ್ಮ ಮನೆಯಲ್ಲೀಗ
ಆಡಂಬರವಿದೆ, ಆದರೆ
ಹಿಂದಿನ ಆನಂದವಿಲ್ಲ
ಒಡಹುಟ್ಟಿದವರ ಸಂಬಂಧವಿದೆ
ಹಿಂದಿನ ಅನುಬಂಧವಿಲ್ಲ.
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...