ಆಧುನಿಕತೆ

ನನ್ನಪ್ಪ ದುಡಿಮೆಗಾರ
ಹೆಣಗಾಡಿ ಕೊಂಡ ಗದ್ದೆಗಳ
ಮತ್ತೆ ಹದಮಾಡಿ ಹಸನುಗೈದ
ಅಸಲಿಗೆ ಈಗ ಅಲ್ಲಿ
ಗದ್ದೆಗಳೇ ಇಲ್ಲ
ಬದಲಿಗೆ ತೋಟಗಳು ತಲೆ ಎತ್ತಿದೆ
ತೆಂಗು ಕಂಗು ವಾಣಿಜ್ಯ ಬೆಳೆಗಳು

ನನ್ನಣ್ಣನ ಜೊತೆಗೂಡಿ
ಎತ್ತರ ಜಿಗಿವಾಡುತ್ತಿದ್ದ
ಗದ್ದೆ ಹಾಳಿಗಳು
ಈಗ ಮಂಗಮಾಯ
ಗಿಡಗಳಿಗೆ ಬುಡಗಳಾಗಿ
ಅಪ್ಪ ಗದ್ದೆಯ ಬದುವಿಗೆ
ಅಂದು ಕಟ್ಟಿಸಿದ ಕಲ್ಲು ಮಣ್ಣಿನ
ಪಾಗಾರು ಇಂದಿಲ್ಲ – ಅಲ್ಲಿ
ಕಾಂಕ್ರೀಟು ಕಂಪೌಂಡು
ರೆಡಿಯಾಗಿದೆ

ನೀರು ಹಾಯಿಸಲು
ತೋಡಿದ ಬೆಲಗುಗಳು
ಅದೃಶ್ಯ-ಪರ್ಯಾಯಕ್ಕೆ
ಪ್ಲಾಸ್ಟಿಕ್ಕು ಪೈಪುಗಳು
ಮಣ್ಣಲ್ಲಿಯೇ ಅಡಗಿ
ಗಿಡಗಳಿಗೆ ಡ್ರಿಪ್ ಇರಿಗೇಷನ್‌ಸ್ಪ್ರಿಂಕಲರು

ನಮ್ಮ ಮನೆಯ ಕೊಟ್ಟಿಗೆಯಲ್ಲಿ
‘ಅಂಬಾ’ ದನಿ ನಿನದಿಸುತ್ತಿಲ್ಲ
ಮನೆ ಹಾಲ ರುಚಿ ಹೋಗಿ
ಬದಲಿಗೆ ಕಲಬೆರಕೆಯ
ಹಾಲಿನ ಪಾಕೀಟು
ಮನೆಬಾಗಿಲಿಗೆ ಬೆಳ್ಳಂಬೆಳಗ್ಗೆ

ನನ್ನಮ್ಮ ಎರಡು ರಟ್ಟೆ
ಬಳಸಿ ಮಸಾಲೆ ಅರೆಯುತ್ತಿದ್ದ
ರುಬ್ಬು ಕಲ್ಲು ಈಗಿಲ್ಲ
ಆ ಜಾಗದಲ್ಲಿ ರಾರಾಜಿಸುತ್ತಿದೆ
ಮಿಕ್ಸರು, ಗ್ರ್‍ಯಾಂಡರು

ನಮ್ಮ ಮನೆಯಲ್ಲೀಗ ವರ್ಷಾ ಒಂದಾವರ್ತಿ
ಮನೆ ಮುಂದಿನಂಗಳ ಹಸನು ಮಾಡಬೇಕಿಲ್ಲ
ಅದಕ್ಕೆ ಅಮ್ಮನ ಒರೆಗ ಕಲ್ಲುಗಳು
ಅಟ್ಟಕ್ಕೇರಿದೆ ಬಾಳಿಲ್ಲದೆ
ಹೊರತಿಗೆ, ಸಿಮೆಂಟು ನೆಲ
ಸಿರಿವಂತಿಗೆ ಸಾರುತ್ತಿದೆ

ಅಮ್ಮ ಅಂದು ಸೌದೆ ಅಟ್ಟಿ
ಅಡುಗೆ ಬೇಯಿಸುತ್ತಿದ್ದ ಮಣ್ಣಿನ
ಒಲೆಗಳು ಈಗಿಲ್ಲ
ಆ ಜಾಗದಲ್ಲಿ ಕಲ್ಲಿನ ಕಟ್ಟೆ
ಎದ್ದು ಗ್ಯಾಸ ಒಲೆ
ಸ್ಥಾಪನೆಯಾಗಿದೆ

ನಮ್ಮ ಮನೆಯಲ್ಲೀಗ
ಆಡಂಬರವಿದೆ, ಆದರೆ
ಹಿಂದಿನ ಆನಂದವಿಲ್ಲ
ಒಡಹುಟ್ಟಿದವರ ಸಂಬಂಧವಿದೆ
ಹಿಂದಿನ ಅನುಬಂಧವಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತನು ತುಂಬಿ ಮನ ತುಂಬಿ
Next post ಅಪ್ಪುವಿನ ರೈಲು

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys