Home / ಕವನ / ಕವಿತೆ / ಅಪ್ಪುವಿನ ರೈಲು

ಅಪ್ಪುವಿನ ರೈಲು

ಎಡೆಬಿಡದೆ ಸುತ್ತುವುದು ಅಪ್ಪುವಿನ ರೈಲು
ಹೈದರಾಬಾದಿನ ಬಯಲು
ಫಲಕ್‌ನುಮಾದಿಂದ ಬೋಲಾರಾಮಿಗೆ
ಯಾಕೆ ಏನೆಂಬ ಗೊಡವೆಯಿಲ್ಲದೆ
ಕರೆಯುವುದು ಮಂದಿಯನು ರಾತ್ರಿಹಗಲು
ಮಲಕ್‌ಪೇಟೆ ಕಾಚಿಗುಡ ಸೀತಾಫಲ ಮಂಡಿ
ಎಲ್ಲ ಕಡೆಗೂ ಇದೊಂದೇ ಬಂಡಿ
ಬೆಳಿಗ್ಗೆ ಮಧ್ಯಾಹ್ನ ಸಂಜೆ ಇಳಿಸಂಜೆ
ಕೂತಲ್ಲೆ ಕಣ್ಣಿಗೆ ನಿದ್ದೆ ಹತ್ತುವ ತನಕ
ನಿದ್ದೆಯಲ್ಲಿ ಹೊಸ ಹೊಸ ಕನಸು ಬೀಳುವ ತನಕ
ಯಾವಾಗ ಬಂದರು ಮಂದಿ ಅವರವರ ಮನೆಗೆ
ಒಬ್ಬೊಬ್ಬರ ಕೈಯಲ್ಲೂ ಒಂದೊಂದು ಮೂಟೆ
ಏನದರ ಒಳಗೆ ಎಲ್ಲ ರಹಸ್ಯ!

ಕೆಲವೊಮ್ಮೆ ಮಾತ್ರ ನಿಂತು ಬಿಡುವುದು
ಅಪ್ಪುವಿನ ರೈಲು ಅರ್ಧದಾರಿಯಲ್ಲಿ
ಅದರ ಕೊಳವೆಯಿಂದ ಹೋಗುವುದು ಹೊಗೆ
ಅಕಾಶಕ್ಕೆ ಹೋಗಿ ಆಗುವುದು ಮೋಡ
ಮಳೆಯಾಗಿ ಸುರಿದು ಕಪ್ಪೆಗಳ ಕರೆಯುವುದು
ಜನ ಮಾತ್ರ ಕಾಯುವುದಿಲ್ಲ. ಅವರು
ಎಲ್ಲೆಂದರಲ್ಲಿ–ಸಂಕದಲ್ಲಿ, ಬಯಲಲ್ಲಿ
ಭ್ರಮೆಗೊಂಡ ಇರುವೆಗಳಂತೆ
ಇಳಿದು ಚದರುವರು; ದಾರಿ ಬದಿಯ
ಎಮ್ಮೆಗಳು ಹಳ್ಳಕೊಳ್ಳಗಳಿಂದ ಎದ್ದು
ಇದು ಹೀಗೇಕೆಂದು ನೋಡುವುವು
ಅರ್ಥವಾಗದೆ ಹೊರಟುಹೋಗುವುವು

ಅಷ್ಟೂ ಹೊತ್ತು ನಿಂತಲ್ಲೆ ನಿಂತ ಅಪ್ಪುವಿನ ರೈಲು
ಇನ್ನೇನು ರಾತ್ರಿ ಇಲ್ಲೇ ತೆಗೆಯುವುದು ನಿದ್ದೆ
ಎಂದುಕೊಂಡರೆ ಥಟ್ಪನೆ ಹಾಹಾ ಎಂದು
ಅದರ ಗಾಲಿಗಳಿಗೆ ಜೀವ ಬಂದು
ಹೊರಟುಬಿಡುವುದು-ಅದೋ ಆಗ ಬರುವರು
ಇದು ತನಕ ಎಲ್ಲೂ ಕಾಣಿಸದ ಜನರು
ಎಲ್ಲಿ ಹೋಗಿದ್ದರು ಅವರು? ಮಸೀದಿಗೆ.
ದೇವರ ಗುಡಿಗೆ-ಇದು ಪ್ರಾರ್ಥನೆಯ ಸಮಯ!
ಅಪ್ಪುವಿಗೊ ಕುಳಿತಲ್ಲೆ ತೂಕಡಿಕೆ
ರೆಪ್ಪೆಗಳೆಡೆಯಿಂದ ಕಾಣಿಸುವುದೇನು?
ಓಹೊ ನೂರು ಮೆಟ್ಟಿಲ ಮಹಡಿ-ಅದರೊಳಗೆ
ಕುಣಿಯುವುದು ಒಂದು ಕರಡಿ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...