ಅಪ್ಪುವಿನ ರೈಲು

ಎಡೆಬಿಡದೆ ಸುತ್ತುವುದು ಅಪ್ಪುವಿನ ರೈಲು
ಹೈದರಾಬಾದಿನ ಬಯಲು
ಫಲಕ್‌ನುಮಾದಿಂದ ಬೋಲಾರಾಮಿಗೆ
ಯಾಕೆ ಏನೆಂಬ ಗೊಡವೆಯಿಲ್ಲದೆ
ಕರೆಯುವುದು ಮಂದಿಯನು ರಾತ್ರಿಹಗಲು
ಮಲಕ್‌ಪೇಟೆ ಕಾಚಿಗುಡ ಸೀತಾಫಲ ಮಂಡಿ
ಎಲ್ಲ ಕಡೆಗೂ ಇದೊಂದೇ ಬಂಡಿ
ಬೆಳಿಗ್ಗೆ ಮಧ್ಯಾಹ್ನ ಸಂಜೆ ಇಳಿಸಂಜೆ
ಕೂತಲ್ಲೆ ಕಣ್ಣಿಗೆ ನಿದ್ದೆ ಹತ್ತುವ ತನಕ
ನಿದ್ದೆಯಲ್ಲಿ ಹೊಸ ಹೊಸ ಕನಸು ಬೀಳುವ ತನಕ
ಯಾವಾಗ ಬಂದರು ಮಂದಿ ಅವರವರ ಮನೆಗೆ
ಒಬ್ಬೊಬ್ಬರ ಕೈಯಲ್ಲೂ ಒಂದೊಂದು ಮೂಟೆ
ಏನದರ ಒಳಗೆ ಎಲ್ಲ ರಹಸ್ಯ!

ಕೆಲವೊಮ್ಮೆ ಮಾತ್ರ ನಿಂತು ಬಿಡುವುದು
ಅಪ್ಪುವಿನ ರೈಲು ಅರ್ಧದಾರಿಯಲ್ಲಿ
ಅದರ ಕೊಳವೆಯಿಂದ ಹೋಗುವುದು ಹೊಗೆ
ಅಕಾಶಕ್ಕೆ ಹೋಗಿ ಆಗುವುದು ಮೋಡ
ಮಳೆಯಾಗಿ ಸುರಿದು ಕಪ್ಪೆಗಳ ಕರೆಯುವುದು
ಜನ ಮಾತ್ರ ಕಾಯುವುದಿಲ್ಲ. ಅವರು
ಎಲ್ಲೆಂದರಲ್ಲಿ–ಸಂಕದಲ್ಲಿ, ಬಯಲಲ್ಲಿ
ಭ್ರಮೆಗೊಂಡ ಇರುವೆಗಳಂತೆ
ಇಳಿದು ಚದರುವರು; ದಾರಿ ಬದಿಯ
ಎಮ್ಮೆಗಳು ಹಳ್ಳಕೊಳ್ಳಗಳಿಂದ ಎದ್ದು
ಇದು ಹೀಗೇಕೆಂದು ನೋಡುವುವು
ಅರ್ಥವಾಗದೆ ಹೊರಟುಹೋಗುವುವು

ಅಷ್ಟೂ ಹೊತ್ತು ನಿಂತಲ್ಲೆ ನಿಂತ ಅಪ್ಪುವಿನ ರೈಲು
ಇನ್ನೇನು ರಾತ್ರಿ ಇಲ್ಲೇ ತೆಗೆಯುವುದು ನಿದ್ದೆ
ಎಂದುಕೊಂಡರೆ ಥಟ್ಪನೆ ಹಾಹಾ ಎಂದು
ಅದರ ಗಾಲಿಗಳಿಗೆ ಜೀವ ಬಂದು
ಹೊರಟುಬಿಡುವುದು-ಅದೋ ಆಗ ಬರುವರು
ಇದು ತನಕ ಎಲ್ಲೂ ಕಾಣಿಸದ ಜನರು
ಎಲ್ಲಿ ಹೋಗಿದ್ದರು ಅವರು? ಮಸೀದಿಗೆ.
ದೇವರ ಗುಡಿಗೆ-ಇದು ಪ್ರಾರ್ಥನೆಯ ಸಮಯ!
ಅಪ್ಪುವಿಗೊ ಕುಳಿತಲ್ಲೆ ತೂಕಡಿಕೆ
ರೆಪ್ಪೆಗಳೆಡೆಯಿಂದ ಕಾಣಿಸುವುದೇನು?
ಓಹೊ ನೂರು ಮೆಟ್ಟಿಲ ಮಹಡಿ-ಅದರೊಳಗೆ
ಕುಣಿಯುವುದು ಒಂದು ಕರಡಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಧುನಿಕತೆ
Next post ಸೂರ್ಯೋದಯ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…