Home / ಕವನ / ಕವಿತೆ / ಸೂರ್ಯ ಸುಡಲಾರ

ಸೂರ್ಯ ಸುಡಲಾರ

ಈ ಭೂಮಿಯ ಆವರಣದಲಿ
ನನ್ನ ನಿನ್ನ ಪಾದದ ಗುರುತುಗಳು
ದಾಖಲಾಗುವುದಿಲ್ಲ ಯಾವುದೂ
ಕಾರಣವಾಗುವುದಿಲ್ಲ. ಹಾಗೆ ತನ್ನನ್ನ ತಾನೆ
ಬದುಕು ಚಲಿಸುತ್ತದೆ ಬೇರೆಯವರ
ಹೆಜ್ಜೆಗಳ ಮೇಲೆ ಹೆಜ್ಜೆ ಊರುತ್ತ.

ದಾರಿ ಯಾವುದೆಂದು ಯಾರೂ
ತಿಳಿದಿರುವದಿಲ್ಲ ಮತ್ತೆ ಒಂದು ಹಾದಿಯ
ಮೇಲೆ ಕನಸಗುಳ ಮೆರವಣಿಗೆ
ಹೋಗುತ್ತದೆ ಅದರಲ್ಲಿ ಎಲ್ಲರೂ
ಪಾಲುದಾರರಾಗುವುದಿಲ್ಲ ಯಾಕೆಂದರೆ
ಮೌನ ಚಿಗುರು ಭಾಷೆ ಅವರಿವರ ಭಾವಗಳು.

ಕೆಲವೆಂದು ಒಪ್ಪಿಕೊಂಡು ಅವರಿವರು
ಬಿಸಿಲು ಬೆಳದಿಂಗಳಲ್ಲಿ ನಡುಗೆ ಶುರುವಿಟ್ಟಿಕೊಂಡಿದ್ದಾರೆ.
ಹೊಸ ಪ್ರಭೆ ಹೊಸ ರೂಪಗಳ ರೂಹುಗಳ ಹುಡುಕಾಟ
ಒಂದೊಂದು ಸಂತೆಯಲಿ ಒಂದೊಂದು ವ್ಯಾಪಾರ
ಸಂತನಾಗುವ ತವಕ ಸೂರ್ಯೋದಯದಿಂದ
ಹುಟ್ಟಿದ ಆಶೆ ಸೂರ್ಯಾಸ್ತದವರೆಗೆ ವಿಸ್ತರಣೆ.

ಅತ್ತ ಸರಿದ ಇತ್ತ ಮಿಡಿದ ಭಾವಗಳ
ಚಿಮ್ಮಿಸುವ ಲೋಕದ ಡೊಂಕು ಎಲ್ಲ
ತೇಲಿಬಿಟ್ಟ ದೋಣಿಗೆ ದಡಸೇರುವ ಆಶೆ
ಸೂರ್ಯ ಮಾತ್ರ ಸುಡಲಾರ ಭೂಮಿಯ
ಭೂಮಿ ಮಾತ್ರ ಸುತ್ತತ್ತದೆ ಸೂರ್ಯನನ್ನು
ಈ ಸಂಬಂಧದ ಪರಿಗೆ ನಾವು ಅಚ್ಚರಿಗೊಳ್ಳಬೇಕಾಗಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...