ಸೂರ್ಯ ಸುಡಲಾರ

ಈ ಭೂಮಿಯ ಆವರಣದಲಿ
ನನ್ನ ನಿನ್ನ ಪಾದದ ಗುರುತುಗಳು
ದಾಖಲಾಗುವುದಿಲ್ಲ ಯಾವುದೂ
ಕಾರಣವಾಗುವುದಿಲ್ಲ. ಹಾಗೆ ತನ್ನನ್ನ ತಾನೆ
ಬದುಕು ಚಲಿಸುತ್ತದೆ ಬೇರೆಯವರ
ಹೆಜ್ಜೆಗಳ ಮೇಲೆ ಹೆಜ್ಜೆ ಊರುತ್ತ.

ದಾರಿ ಯಾವುದೆಂದು ಯಾರೂ
ತಿಳಿದಿರುವದಿಲ್ಲ ಮತ್ತೆ ಒಂದು ಹಾದಿಯ
ಮೇಲೆ ಕನಸಗುಳ ಮೆರವಣಿಗೆ
ಹೋಗುತ್ತದೆ ಅದರಲ್ಲಿ ಎಲ್ಲರೂ
ಪಾಲುದಾರರಾಗುವುದಿಲ್ಲ ಯಾಕೆಂದರೆ
ಮೌನ ಚಿಗುರು ಭಾಷೆ ಅವರಿವರ ಭಾವಗಳು.

ಕೆಲವೆಂದು ಒಪ್ಪಿಕೊಂಡು ಅವರಿವರು
ಬಿಸಿಲು ಬೆಳದಿಂಗಳಲ್ಲಿ ನಡುಗೆ ಶುರುವಿಟ್ಟಿಕೊಂಡಿದ್ದಾರೆ.
ಹೊಸ ಪ್ರಭೆ ಹೊಸ ರೂಪಗಳ ರೂಹುಗಳ ಹುಡುಕಾಟ
ಒಂದೊಂದು ಸಂತೆಯಲಿ ಒಂದೊಂದು ವ್ಯಾಪಾರ
ಸಂತನಾಗುವ ತವಕ ಸೂರ್ಯೋದಯದಿಂದ
ಹುಟ್ಟಿದ ಆಶೆ ಸೂರ್ಯಾಸ್ತದವರೆಗೆ ವಿಸ್ತರಣೆ.

ಅತ್ತ ಸರಿದ ಇತ್ತ ಮಿಡಿದ ಭಾವಗಳ
ಚಿಮ್ಮಿಸುವ ಲೋಕದ ಡೊಂಕು ಎಲ್ಲ
ತೇಲಿಬಿಟ್ಟ ದೋಣಿಗೆ ದಡಸೇರುವ ಆಶೆ
ಸೂರ್ಯ ಮಾತ್ರ ಸುಡಲಾರ ಭೂಮಿಯ
ಭೂಮಿ ಮಾತ್ರ ಸುತ್ತತ್ತದೆ ಸೂರ್ಯನನ್ನು
ಈ ಸಂಬಂಧದ ಪರಿಗೆ ನಾವು ಅಚ್ಚರಿಗೊಳ್ಳಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಡುಗಡಲು
Next post ಸೂರ್ಯಸ್ವಪ್ನ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys