ಸ್ಥಿತ್ಯಂತರ

ಮೊದಮೊದಲೆಲ್ಲ ಈ ಮೋಡಗಳೊಳಗೆ
ಬರೀ ಕಾವಿಧರಿಸಿ ಕಮಂಡಲ ಹಿಡಿದು
ಋಷಿ ಮುನಿಗಳ ಸಮೂಹವೇ ಬಂದಂತಾಗಿ
ಭೂ ಲೋಕದವರಿಗೆ ನೀರು ಸಿಂಪಡಿಸಿ
ಸತ್ತವರನು ಉಳಿಸಿ ಆಶೀರ್ವದಿಸುವವರು ಕಾಣಿಸುತ್ತಿದ್ದರು-

ನಂತರ ನಂತರ ಬುದ್ಧ, ಗಾಂಧಿ, ಹೀಗೆ ಹೀಗೆ-
ತತ್ವ ಚಿಂತನೆಗಳ ಹೊತ್ತಿಗೆಗಳ ಹಿಡಿದು
ಸಮಾಜೋದ್ಧಾರ ಮಾನವೀಯತೆಯ ಬೀಜಗಳ
ಮಂತ್ರ ಉಚ್ಚರಿಸುತ, ಎಚ್ಚರಿಸುತ
ಬರುವುದಾ ನೋಡತೊಡಗಿದೆ.

ಈಗೀಗ ಈ ಮೋಡಗಳೊಳಗೆ
ಕೋಟು, ಟೈ ಧರಿಸಿದ ಜಾಗತೀಕರಣದ ಜನ
ಕೈಯಲಿ ನೊರೆ ತುಂಬಿದ ಗ್ಲಾಸು ಹಿಡಿದು
ಹೆಣ್ಣುಗಳ ಸೊಂಟ ಬಳಸಿ ಆಯುಧಗಳ ಮಾರಾಟ ಮಾಡುತ
ನಾಟಕೀಯತೆಯ ಮೋಡಿ ಬೆರೆಸಿ
ಜಗತ್ತನ್ನೇ ಕಬಳಿಸಿ ತೀರುವೆನೆನ್ನುವ
ಹುನ್ನಾರದ ಹುಡಿ ಸಿಂಪಡಿಸುವುದ ಕಾಣುತಿರುವೆ.

ಕಮಂಡಲದ ಪವಿತ್ರ ಪ್ರೋಕ್ಷಣೆಗೂ-
ನೊರೆತುಂಬಿದ ಹಳದಿ ಗ್ಲಾಸಿಗೂ-
ಚಿಂತನೆಗಳ ಹೊತ್ತಿಗೆಗೂ-
ಮೋಡಗಳು ಒಮ್ಮೊಮ್ಮೆ ಬೆದರಿ
ಮಿಂಚು, ಗುಡುಗು, ಸಿಡಿಲುಗಳಾಗಿ ಏನೇನೋ ಮಾತನಾಡುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ
Next post ವೃಂದಗಾನ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…