ಕಾಲ

ಬೆಳಕಿನನುರಣದ…. ನಿತ್ಯ
ಸರದಿಯೊಳಗೆ…. ದಿನಗಳರಳುತಿವೆ
ಜೀವಂತ…. ಧಾವಂತ…. ನಿಯತಿಗಾಗಿ
ನಿದ್ದೆ ಕಳೆದೆದ್ದವರ ಬದುಕಿಗಾಗಿ
ಅವರವರು ತೆರೆದಿಟ್ಟ…. ಬಾಳ ಬಂಡಿಗಾಗಿ
ಸ್ಪುರಣೆಗಳೆಲ್ಲದರ ಪರಿವೆಯಿರದೆ
ಜಗದ ಜಂಗಮತೆಯ ಚಂಚಲ
ಧೃವ ಜ್ಯೋತಿಯಲ್ಲಿ….
ಕತ್ತಲೂ ಕವಿಯುತ್ತಲೇ
ಇರುತ್ತದೆ…. ಹಗಲ
ಪುನರನುರಣಕಾಗಿ….
ನಿಶಾಚಾರ…. ಉಷಾಚರಿಗಳ
ಪಾಡು-ಹಾಡಿನ ಪರಿವೆ ಪರಿಧಿಯಾಚೆ
ಎದ್ದರೂ ಮಲಗಿದಂತಿರುವ
ಮಲಗಿದಲ್ಲಿಯೇ
ಬೆಳಕನ್ನು ಜರಿಯುವವರನ್ನು
ಕಾಲವೇ ಹಣಿಯುತ್ತದೆ
ಅಗ್ಗಿಷ್ಟಿಕೆಯ ಕುಂಡದಲ್ಲಿ
ನಿದ್ರೆಯರಿವು-ಪರಿವುಗಳಿರದೆ
ಬೆಳಕಿನಲಿ ಸಾಗುವವರಿಗೆ
ಕಾಲವೇ ಮಣಿಯುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆರೆ
Next post ಸ್ಥಿತ್ಯಂತರ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…