ಕಾಲ

ಬೆಳಕಿನನುರಣದ…. ನಿತ್ಯ
ಸರದಿಯೊಳಗೆ…. ದಿನಗಳರಳುತಿವೆ
ಜೀವಂತ…. ಧಾವಂತ…. ನಿಯತಿಗಾಗಿ
ನಿದ್ದೆ ಕಳೆದೆದ್ದವರ ಬದುಕಿಗಾಗಿ
ಅವರವರು ತೆರೆದಿಟ್ಟ…. ಬಾಳ ಬಂಡಿಗಾಗಿ
ಸ್ಪುರಣೆಗಳೆಲ್ಲದರ ಪರಿವೆಯಿರದೆ
ಜಗದ ಜಂಗಮತೆಯ ಚಂಚಲ
ಧೃವ ಜ್ಯೋತಿಯಲ್ಲಿ….
ಕತ್ತಲೂ ಕವಿಯುತ್ತಲೇ
ಇರುತ್ತದೆ…. ಹಗಲ
ಪುನರನುರಣಕಾಗಿ….
ನಿಶಾಚಾರ…. ಉಷಾಚರಿಗಳ
ಪಾಡು-ಹಾಡಿನ ಪರಿವೆ ಪರಿಧಿಯಾಚೆ
ಎದ್ದರೂ ಮಲಗಿದಂತಿರುವ
ಮಲಗಿದಲ್ಲಿಯೇ
ಬೆಳಕನ್ನು ಜರಿಯುವವರನ್ನು
ಕಾಲವೇ ಹಣಿಯುತ್ತದೆ
ಅಗ್ಗಿಷ್ಟಿಕೆಯ ಕುಂಡದಲ್ಲಿ
ನಿದ್ರೆಯರಿವು-ಪರಿವುಗಳಿರದೆ
ಬೆಳಕಿನಲಿ ಸಾಗುವವರಿಗೆ
ಕಾಲವೇ ಮಣಿಯುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆರೆ
Next post ಸ್ಥಿತ್ಯಂತರ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…