Home / ಕಥೆ / ಸಣ್ಣ ಕಥೆ / ರೈತರ ಬಂಡಾಯ

ರೈತರ ಬಂಡಾಯ

ಶ್ರೀರಂಗಪಟ್ಟಣವು ಕೈಸೇರಿದ ಮೇಲೆ ಒಡೆಯರ ರಾಜ್ಯವು ಕ್ರಮವಾಗಿ ಬಳೆಯಿತು; ರಾಜ್ಯವು ಹೆಚ್ಚಿದಂತೆ ವೆಚ್ಚವೂ ಹೆಚ್ಚಿತು. ರಾಜಒಡೆಯರು ಉಪಾಯದಿಂದ ನಿರ್ವಹಿಸುತ್ತಿದ್ದರು. ಕಂಠೀರವ ಒಡೆಯರು ಹಣದ ತೊಂದರೆ ಬಂದಾಗ ಒಂದು ಉಪಾಯವನ್ನು ಮಾಡಿದರು; ಧನಿಕರೆಂದು ಹೆಸರಾದವರನ್ನು ಹಿಡಿದು ಅವರಿಂದ ಹೆಚ್ಚಾದ ದ್ರವ್ಯವನ್ನು ತೆಗೆದುಕೊಳ್ಳುತ್ತಿದ್ದರು. ಅರಸರು ಬಲಿಷ್ಟರಾಗಿದ್ದುದರಿಂದ ಅವರ ವಿರೋಧವನ್ನು ಕಟ್ಟಿಕೊಳ್ಳುವುದಕ್ಕೆ ಅಂತಹವರು ಹೆದರುತ್ತಿದ್ದರು. ಚಿಕ್ಕದೇವರಾಜ ಒಡೆಯರಿಗೆ ರಾಜ-ಭಾರದಲ್ಲಿ ಬೊಕಸವನ್ನು ತುಂಬಬೇಕೆಂದು ಬಲವಾದ ಆಸೆಯಾಯಿತು.

ಕಾಲಕಳೆಯುತ್ತ ಈ ದೊರೆಗೆ ಹಣದ ಯೋಚನೆಯೇ ಬಹಳವಾಯಿತು. ರಾಜಾದಾಯ ಹೆಚ್ಚುವಂತೆ ಮೊದಲು ಈ ದೊರೆಗಳು ನೆಲಗಂದಾಯವನ್ನು ಹೆಚ್ಚಿಸಿದರು. ಆಗ ಕೆಲವು ರೈತರು “ಅರಮನೆಗೆ ಕೊಡತಕ್ಕ ಕಂದಾಯ, ವಾರದ ದವಸ ಮುಂತಾದುವನ್ನು ನಾವು ಕೊಡುವದಿಲ್ಲ. ಕಾಡಭೂಮಿಯನ್ನು ಬಸವಣ್ಣನು ಉಳುತ್ತಾನೆ. ದೇವೇಂದ್ರನು ಮಳೆಯನ್ನು ಕರೆಯುತ್ತಾನೆ, ನಾವು ಕಷ್ಟ ಪಟ್ಟು ಪೈರುಮಾಡಿ ನಿಮಗೇತಕ್ಕೆ ಕೊಡಬೇಕು” ಎನ್ನುತ್ತ ಕಂದಾಯವನ್ನು ಸಲ್ಲಿಸದೆ ದಂಗೆಯೇಳುವ ಯೋಚನೆಯಲ್ಲಿದ್ದರು. ಆಗ ಒಡೆಯರವರು ಮುಖ್ಯರಾದ ರೈತರನ್ನು ಹಿಡತರಿಸಿ ಶಿಕ್ಷೆಗೆ ಗುರಿ ಮಾಡಿಸಿದರು; ದಂಗೆಯು ಏಳುವುದಕ್ಕೆ ಮೊದಲೇ ಅಡಗಿ ಹೋಯಿತು.

ನೆಲಗಂದಾಯವೇ ಅಲ್ಲದೆ ಇತರ ಅನೇಕ ಮಾರ್ಗಗಳಲ್ಲಿ ಈ ದೊರೆಗಳು ಹಣವನ್ನು ಶೇಖರಮಾಡಿದರು. ನಿತ್ಯವೂ ೨೦೦೦ ವರಹಗಳು ನಾಮತೀರ್ಥದ ವೇಳೆಗೆ ಅರಮನೆಗೆ ಸಂದಾಯವಾಗತಕ್ಕದ್ದೆಂದು ಕಟ್ಟಳೆಮಾಡಿದ್ದರು; ಎಂದಾದರೂ ಹಣ ಬರುವುದು ಸಾವಕಾಶವಾದರೆ ದೊರೆಗಳು ರಾಮಾಯಣ ಪಾರಾಯಣದಲ್ಲಿಯೇ ಕಾಲ ಕಳೆದು ೨೦೦೦ ವರಹ ಬಂದ ಬಳಿಕ ಅವುಗಳನ್ನು ಖಾಸಾ ಬೊಕ್ಕಸಕ್ಕೆ ಕಳುಹಿಸಿ ಅನಂತರ ಆರೋಗಣೆಯನ್ನು ಒಪ್ಪಿಸಿಕೊಳ್ಳುತ್ತಿದ್ದರು.

ಇದರಿಂದ ಇವರಿಗೆ ನೆರೆನಾಡುಗಳಲ್ಲಿ ಲೋಭಿಗಳೆಂಬ ಹೆಸರು ಸಾಧಾರಣವಾಯಿತು. ಮಧುರೆಯ ರಾಜ್ಯದಲ್ಲಿ ಚಿಕ್ಕದೇವರಾಜ ಒಡೆಯರ ಹೆಸರನ್ನು ಹಂಗಿಸುವಂತಹ ಹಾಡುಗಳು ಜನರ ಬಾಯಿಗಳಲ್ಲಿ ಆಡುತ್ತಿದ್ದುವು; ಏಕೆಂದರೆ ಮಧುರೆಯಲ್ಲಿ ಅದೇ ಕಾಲದಲ್ಲಿ ಆಳುತ್ತಿದ್ದ ಮಂಗಮ್ಮನೆಂಬಾಕೆಯು ಅನೇಕ ಧರ್ಮ ಕಾರ್ಯಗಳನ್ನು ಮಾಡಿಸಿ ಔದಾರ್ಯಕ್ಕೆ ಪ್ರಸಿದ್ದಿಯಾಗಿದ್ದಳು. ಚಿಕ್ಕದೇವರಾಜ ಒಡೆಯರು ಹಣವನ್ನು ಸಂಪಾದನೆ ಮಾಡುವುದರಲ್ಲಿ ಇಂಗ್ಲೆಂಡಿನ ೭ನೆ ಹೆನ್ರಿಯಂತಿದ್ದರು. ಅವರಿಗೆ ಈ ರೀತಿ ಕೆಟ್ಟ ಹೆಸರು ಬಂದರೂ ಅವರು ಗಳಿಸಿದ ಹಣದಿಂದ ರಾಜ್ತವು ಭದ್ರವಾಯಿತು.
*****
[ವಂಶರತ್ನಾಕರ ಪುಟ ೧೨೧, ೧೨೪; ವಂಶಾವಳಿ ಪುಟ ೧೨೩, ೧೨೬; ಸತ್ಯನಾಥಯ್ಯರ್ರವರ ಮಧುರೆ ನಾಯಕರ ಚರಿತ್ರೆ ಮತ್ತು ಹೊಸ ಗೆಜಟಿಯರ್]

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...