Home / ಕಥೆ / ಸಣ್ಣ ಕಥೆ / ರೈತರ ಬಂಡಾಯ

ರೈತರ ಬಂಡಾಯ

ಶ್ರೀರಂಗಪಟ್ಟಣವು ಕೈಸೇರಿದ ಮೇಲೆ ಒಡೆಯರ ರಾಜ್ಯವು ಕ್ರಮವಾಗಿ ಬಳೆಯಿತು; ರಾಜ್ಯವು ಹೆಚ್ಚಿದಂತೆ ವೆಚ್ಚವೂ ಹೆಚ್ಚಿತು. ರಾಜಒಡೆಯರು ಉಪಾಯದಿಂದ ನಿರ್ವಹಿಸುತ್ತಿದ್ದರು. ಕಂಠೀರವ ಒಡೆಯರು ಹಣದ ತೊಂದರೆ ಬಂದಾಗ ಒಂದು ಉಪಾಯವನ್ನು ಮಾಡಿದರು; ಧನಿಕರೆಂದು ಹೆಸರಾದವರನ್ನು ಹಿಡಿದು ಅವರಿಂದ ಹೆಚ್ಚಾದ ದ್ರವ್ಯವನ್ನು ತೆಗೆದುಕೊಳ್ಳುತ್ತಿದ್ದರು. ಅರಸರು ಬಲಿಷ್ಟರಾಗಿದ್ದುದರಿಂದ ಅವರ ವಿರೋಧವನ್ನು ಕಟ್ಟಿಕೊಳ್ಳುವುದಕ್ಕೆ ಅಂತಹವರು ಹೆದರುತ್ತಿದ್ದರು. ಚಿಕ್ಕದೇವರಾಜ ಒಡೆಯರಿಗೆ ರಾಜ-ಭಾರದಲ್ಲಿ ಬೊಕಸವನ್ನು ತುಂಬಬೇಕೆಂದು ಬಲವಾದ ಆಸೆಯಾಯಿತು.

ಕಾಲಕಳೆಯುತ್ತ ಈ ದೊರೆಗೆ ಹಣದ ಯೋಚನೆಯೇ ಬಹಳವಾಯಿತು. ರಾಜಾದಾಯ ಹೆಚ್ಚುವಂತೆ ಮೊದಲು ಈ ದೊರೆಗಳು ನೆಲಗಂದಾಯವನ್ನು ಹೆಚ್ಚಿಸಿದರು. ಆಗ ಕೆಲವು ರೈತರು “ಅರಮನೆಗೆ ಕೊಡತಕ್ಕ ಕಂದಾಯ, ವಾರದ ದವಸ ಮುಂತಾದುವನ್ನು ನಾವು ಕೊಡುವದಿಲ್ಲ. ಕಾಡಭೂಮಿಯನ್ನು ಬಸವಣ್ಣನು ಉಳುತ್ತಾನೆ. ದೇವೇಂದ್ರನು ಮಳೆಯನ್ನು ಕರೆಯುತ್ತಾನೆ, ನಾವು ಕಷ್ಟ ಪಟ್ಟು ಪೈರುಮಾಡಿ ನಿಮಗೇತಕ್ಕೆ ಕೊಡಬೇಕು” ಎನ್ನುತ್ತ ಕಂದಾಯವನ್ನು ಸಲ್ಲಿಸದೆ ದಂಗೆಯೇಳುವ ಯೋಚನೆಯಲ್ಲಿದ್ದರು. ಆಗ ಒಡೆಯರವರು ಮುಖ್ಯರಾದ ರೈತರನ್ನು ಹಿಡತರಿಸಿ ಶಿಕ್ಷೆಗೆ ಗುರಿ ಮಾಡಿಸಿದರು; ದಂಗೆಯು ಏಳುವುದಕ್ಕೆ ಮೊದಲೇ ಅಡಗಿ ಹೋಯಿತು.

ನೆಲಗಂದಾಯವೇ ಅಲ್ಲದೆ ಇತರ ಅನೇಕ ಮಾರ್ಗಗಳಲ್ಲಿ ಈ ದೊರೆಗಳು ಹಣವನ್ನು ಶೇಖರಮಾಡಿದರು. ನಿತ್ಯವೂ ೨೦೦೦ ವರಹಗಳು ನಾಮತೀರ್ಥದ ವೇಳೆಗೆ ಅರಮನೆಗೆ ಸಂದಾಯವಾಗತಕ್ಕದ್ದೆಂದು ಕಟ್ಟಳೆಮಾಡಿದ್ದರು; ಎಂದಾದರೂ ಹಣ ಬರುವುದು ಸಾವಕಾಶವಾದರೆ ದೊರೆಗಳು ರಾಮಾಯಣ ಪಾರಾಯಣದಲ್ಲಿಯೇ ಕಾಲ ಕಳೆದು ೨೦೦೦ ವರಹ ಬಂದ ಬಳಿಕ ಅವುಗಳನ್ನು ಖಾಸಾ ಬೊಕ್ಕಸಕ್ಕೆ ಕಳುಹಿಸಿ ಅನಂತರ ಆರೋಗಣೆಯನ್ನು ಒಪ್ಪಿಸಿಕೊಳ್ಳುತ್ತಿದ್ದರು.

ಇದರಿಂದ ಇವರಿಗೆ ನೆರೆನಾಡುಗಳಲ್ಲಿ ಲೋಭಿಗಳೆಂಬ ಹೆಸರು ಸಾಧಾರಣವಾಯಿತು. ಮಧುರೆಯ ರಾಜ್ಯದಲ್ಲಿ ಚಿಕ್ಕದೇವರಾಜ ಒಡೆಯರ ಹೆಸರನ್ನು ಹಂಗಿಸುವಂತಹ ಹಾಡುಗಳು ಜನರ ಬಾಯಿಗಳಲ್ಲಿ ಆಡುತ್ತಿದ್ದುವು; ಏಕೆಂದರೆ ಮಧುರೆಯಲ್ಲಿ ಅದೇ ಕಾಲದಲ್ಲಿ ಆಳುತ್ತಿದ್ದ ಮಂಗಮ್ಮನೆಂಬಾಕೆಯು ಅನೇಕ ಧರ್ಮ ಕಾರ್ಯಗಳನ್ನು ಮಾಡಿಸಿ ಔದಾರ್ಯಕ್ಕೆ ಪ್ರಸಿದ್ದಿಯಾಗಿದ್ದಳು. ಚಿಕ್ಕದೇವರಾಜ ಒಡೆಯರು ಹಣವನ್ನು ಸಂಪಾದನೆ ಮಾಡುವುದರಲ್ಲಿ ಇಂಗ್ಲೆಂಡಿನ ೭ನೆ ಹೆನ್ರಿಯಂತಿದ್ದರು. ಅವರಿಗೆ ಈ ರೀತಿ ಕೆಟ್ಟ ಹೆಸರು ಬಂದರೂ ಅವರು ಗಳಿಸಿದ ಹಣದಿಂದ ರಾಜ್ತವು ಭದ್ರವಾಯಿತು.
*****
[ವಂಶರತ್ನಾಕರ ಪುಟ ೧೨೧, ೧೨೪; ವಂಶಾವಳಿ ಪುಟ ೧೨೩, ೧೨೬; ಸತ್ಯನಾಥಯ್ಯರ್ರವರ ಮಧುರೆ ನಾಯಕರ ಚರಿತ್ರೆ ಮತ್ತು ಹೊಸ ಗೆಜಟಿಯರ್]

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...