Home / ಕಥೆ / ಸಣ್ಣ ಕಥೆ / ರೈತರ ಬಂಡಾಯ

ರೈತರ ಬಂಡಾಯ

ಶ್ರೀರಂಗಪಟ್ಟಣವು ಕೈಸೇರಿದ ಮೇಲೆ ಒಡೆಯರ ರಾಜ್ಯವು ಕ್ರಮವಾಗಿ ಬಳೆಯಿತು; ರಾಜ್ಯವು ಹೆಚ್ಚಿದಂತೆ ವೆಚ್ಚವೂ ಹೆಚ್ಚಿತು. ರಾಜಒಡೆಯರು ಉಪಾಯದಿಂದ ನಿರ್ವಹಿಸುತ್ತಿದ್ದರು. ಕಂಠೀರವ ಒಡೆಯರು ಹಣದ ತೊಂದರೆ ಬಂದಾಗ ಒಂದು ಉಪಾಯವನ್ನು ಮಾಡಿದರು; ಧನಿಕರೆಂದು ಹೆಸರಾದವರನ್ನು ಹಿಡಿದು ಅವರಿಂದ ಹೆಚ್ಚಾದ ದ್ರವ್ಯವನ್ನು ತೆಗೆದುಕೊಳ್ಳುತ್ತಿದ್ದರು. ಅರಸರು ಬಲಿಷ್ಟರಾಗಿದ್ದುದರಿಂದ ಅವರ ವಿರೋಧವನ್ನು ಕಟ್ಟಿಕೊಳ್ಳುವುದಕ್ಕೆ ಅಂತಹವರು ಹೆದರುತ್ತಿದ್ದರು. ಚಿಕ್ಕದೇವರಾಜ ಒಡೆಯರಿಗೆ ರಾಜ-ಭಾರದಲ್ಲಿ ಬೊಕಸವನ್ನು ತುಂಬಬೇಕೆಂದು ಬಲವಾದ ಆಸೆಯಾಯಿತು.

ಕಾಲಕಳೆಯುತ್ತ ಈ ದೊರೆಗೆ ಹಣದ ಯೋಚನೆಯೇ ಬಹಳವಾಯಿತು. ರಾಜಾದಾಯ ಹೆಚ್ಚುವಂತೆ ಮೊದಲು ಈ ದೊರೆಗಳು ನೆಲಗಂದಾಯವನ್ನು ಹೆಚ್ಚಿಸಿದರು. ಆಗ ಕೆಲವು ರೈತರು “ಅರಮನೆಗೆ ಕೊಡತಕ್ಕ ಕಂದಾಯ, ವಾರದ ದವಸ ಮುಂತಾದುವನ್ನು ನಾವು ಕೊಡುವದಿಲ್ಲ. ಕಾಡಭೂಮಿಯನ್ನು ಬಸವಣ್ಣನು ಉಳುತ್ತಾನೆ. ದೇವೇಂದ್ರನು ಮಳೆಯನ್ನು ಕರೆಯುತ್ತಾನೆ, ನಾವು ಕಷ್ಟ ಪಟ್ಟು ಪೈರುಮಾಡಿ ನಿಮಗೇತಕ್ಕೆ ಕೊಡಬೇಕು” ಎನ್ನುತ್ತ ಕಂದಾಯವನ್ನು ಸಲ್ಲಿಸದೆ ದಂಗೆಯೇಳುವ ಯೋಚನೆಯಲ್ಲಿದ್ದರು. ಆಗ ಒಡೆಯರವರು ಮುಖ್ಯರಾದ ರೈತರನ್ನು ಹಿಡತರಿಸಿ ಶಿಕ್ಷೆಗೆ ಗುರಿ ಮಾಡಿಸಿದರು; ದಂಗೆಯು ಏಳುವುದಕ್ಕೆ ಮೊದಲೇ ಅಡಗಿ ಹೋಯಿತು.

ನೆಲಗಂದಾಯವೇ ಅಲ್ಲದೆ ಇತರ ಅನೇಕ ಮಾರ್ಗಗಳಲ್ಲಿ ಈ ದೊರೆಗಳು ಹಣವನ್ನು ಶೇಖರಮಾಡಿದರು. ನಿತ್ಯವೂ ೨೦೦೦ ವರಹಗಳು ನಾಮತೀರ್ಥದ ವೇಳೆಗೆ ಅರಮನೆಗೆ ಸಂದಾಯವಾಗತಕ್ಕದ್ದೆಂದು ಕಟ್ಟಳೆಮಾಡಿದ್ದರು; ಎಂದಾದರೂ ಹಣ ಬರುವುದು ಸಾವಕಾಶವಾದರೆ ದೊರೆಗಳು ರಾಮಾಯಣ ಪಾರಾಯಣದಲ್ಲಿಯೇ ಕಾಲ ಕಳೆದು ೨೦೦೦ ವರಹ ಬಂದ ಬಳಿಕ ಅವುಗಳನ್ನು ಖಾಸಾ ಬೊಕ್ಕಸಕ್ಕೆ ಕಳುಹಿಸಿ ಅನಂತರ ಆರೋಗಣೆಯನ್ನು ಒಪ್ಪಿಸಿಕೊಳ್ಳುತ್ತಿದ್ದರು.

ಇದರಿಂದ ಇವರಿಗೆ ನೆರೆನಾಡುಗಳಲ್ಲಿ ಲೋಭಿಗಳೆಂಬ ಹೆಸರು ಸಾಧಾರಣವಾಯಿತು. ಮಧುರೆಯ ರಾಜ್ಯದಲ್ಲಿ ಚಿಕ್ಕದೇವರಾಜ ಒಡೆಯರ ಹೆಸರನ್ನು ಹಂಗಿಸುವಂತಹ ಹಾಡುಗಳು ಜನರ ಬಾಯಿಗಳಲ್ಲಿ ಆಡುತ್ತಿದ್ದುವು; ಏಕೆಂದರೆ ಮಧುರೆಯಲ್ಲಿ ಅದೇ ಕಾಲದಲ್ಲಿ ಆಳುತ್ತಿದ್ದ ಮಂಗಮ್ಮನೆಂಬಾಕೆಯು ಅನೇಕ ಧರ್ಮ ಕಾರ್ಯಗಳನ್ನು ಮಾಡಿಸಿ ಔದಾರ್ಯಕ್ಕೆ ಪ್ರಸಿದ್ದಿಯಾಗಿದ್ದಳು. ಚಿಕ್ಕದೇವರಾಜ ಒಡೆಯರು ಹಣವನ್ನು ಸಂಪಾದನೆ ಮಾಡುವುದರಲ್ಲಿ ಇಂಗ್ಲೆಂಡಿನ ೭ನೆ ಹೆನ್ರಿಯಂತಿದ್ದರು. ಅವರಿಗೆ ಈ ರೀತಿ ಕೆಟ್ಟ ಹೆಸರು ಬಂದರೂ ಅವರು ಗಳಿಸಿದ ಹಣದಿಂದ ರಾಜ್ತವು ಭದ್ರವಾಯಿತು.
*****
[ವಂಶರತ್ನಾಕರ ಪುಟ ೧೨೧, ೧೨೪; ವಂಶಾವಳಿ ಪುಟ ೧೨೩, ೧೨೬; ಸತ್ಯನಾಥಯ್ಯರ್ರವರ ಮಧುರೆ ನಾಯಕರ ಚರಿತ್ರೆ ಮತ್ತು ಹೊಸ ಗೆಜಟಿಯರ್]

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...