Home / ಕವನ / ಕವಿತೆ / ನೆರೆ

ನೆರೆ

ಮೊನ್ನೆ ಸುರಿದ ಭಾರಿ ಮಳೆಗೆ
ಮನೆ-ಮನೆಗಳು ಒಡೆದು
ಬಯಲು ಆಲಯವಾಯ್ತು
ಸುತ್ತಿ ಸುಳಿದು ತಿರುಗಿದ ಇತಿಹಾಸ
ಗಿರಿಗಿಟ್ಟಿಯಾಗಿ ಆಕಾಶ ನದಿ ಹಳ್ಳ
ಕೊಳ್ಳಗಳು ವಿಕಾರಗಳಾದವು.

ಅನ್ನ, ಹಸಿವು ನೀರು ನೀರಡಿಕೆ
ಕರುಳಿಗೆ ಅಂಟಿಕೊಂಡ ಮಕ್ಕಳು
ದಿಕ್ಕು ದಿಸೆಯಿಲ್ಲದ ಅಲೆಮಾರಿ ಬದುಕು
ಹರಿದ ನೀರಿಗೆ ನಿದ್ದೆಬಾರದೇ
ಹೊರಳಾಡಿದ ರಾತ್ರಿಗಳು ಚಿಂದಿ
ಮನಸ್ಸುಗಳು ತೋಯ್ದು ತಪ್ಪಡಿ ಮುದ್ದೆಯಾಯಿತು.

ಸ್ಮಶಾನದ ಸಂಜೆ ಕೆಟ್ಟ ಗಾಳಿ ಬೀಸಿ
ಚಳಿಗೆ ಥರಗುಟ್ಟಿವೆ ಕೂಸು ಕುನ್ನಿಗಳು
ಕಣ್ಣ ತುಂಬ ಕಂಬನಿ ಹೊತ್ತ ಜೀವ ಭಯ
ಸಾವಿಗೆ ಹೆದರಿದ ಮೂಕ ಮರ್ಮರ
ವಿಶಾಲ ಬಯಲಿನ ತುಂಬ ಹೆರಿಗೆ ಮನೆ
ನೋವು ಸಂಕಟಗಳು ಹರಿಕೊಂಡವು.

ಬಾಡಿಗೆಗೆ ಮನೆಮಠವಿಲ್ಲ ಶಾಲೆಗಳಿಲ್ಲ
ಕರ್ಫೂ ತುಂಬಿದ ದಿನಗಳು ಚಾಕರಿಗೆ
ಬೇಕಿಲ್ಲ ಗಂಜೀ ಕುದಿಸಲು ಕಟ್ಟಿಗೆ ಇಲ್ಲ
ಹೊದೆಯಲು ವಸ್ತ್ರವಿಲ್ಲ, ಹುಣ್ಣುಗಳ
ಗಾಯಕ್ಕೆ ಮುಲಾಮು ಸವರುವವರ್‍ಯಾರು
ಪ್ರಜಾಪ್ರಭುತ್ವಕ್ಕೆ ಬೇಗ ಪ್ರಾರ್ಥನೆಯ ಭಾಷೆ ತಿಳಿಯುವುದಿಲ್ಲ.

ನೀರಲಿ ತೇಲಿದ ಮನೆ ಮಠ ಗುಡಿ
ಬಟ್ಟೆಯೇ ಹೊದಿಸದ ಹೆಣಗಳು
ಅರ್ಧ ದಾರಿಯಲಿ ಬಿಟ್ಟು ಹೋದವರ ಗೋಳು
ಮನೆ ಗೂಡಿ ಮುರಿದು ಬಿದ್ದಿವೆ ಹಕ್ಕಿಗಳು
ಹಸಿರು ಕಾಣದೇ ಎತ್ತಲೋ ಹಾರಿ ಹೋಗಿವೆ
ಮೋಡಗಳು ಕಣ್ಣೀರು ಸುರಿಸುವುದ ನಿಲ್ಲಿಸಲಿ
ನಾವು ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡೋಣ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...