Home / ಕವನ / ಕವಿತೆ / ನೆರೆ

ನೆರೆ

ಮೊನ್ನೆ ಸುರಿದ ಭಾರಿ ಮಳೆಗೆ
ಮನೆ-ಮನೆಗಳು ಒಡೆದು
ಬಯಲು ಆಲಯವಾಯ್ತು
ಸುತ್ತಿ ಸುಳಿದು ತಿರುಗಿದ ಇತಿಹಾಸ
ಗಿರಿಗಿಟ್ಟಿಯಾಗಿ ಆಕಾಶ ನದಿ ಹಳ್ಳ
ಕೊಳ್ಳಗಳು ವಿಕಾರಗಳಾದವು.

ಅನ್ನ, ಹಸಿವು ನೀರು ನೀರಡಿಕೆ
ಕರುಳಿಗೆ ಅಂಟಿಕೊಂಡ ಮಕ್ಕಳು
ದಿಕ್ಕು ದಿಸೆಯಿಲ್ಲದ ಅಲೆಮಾರಿ ಬದುಕು
ಹರಿದ ನೀರಿಗೆ ನಿದ್ದೆಬಾರದೇ
ಹೊರಳಾಡಿದ ರಾತ್ರಿಗಳು ಚಿಂದಿ
ಮನಸ್ಸುಗಳು ತೋಯ್ದು ತಪ್ಪಡಿ ಮುದ್ದೆಯಾಯಿತು.

ಸ್ಮಶಾನದ ಸಂಜೆ ಕೆಟ್ಟ ಗಾಳಿ ಬೀಸಿ
ಚಳಿಗೆ ಥರಗುಟ್ಟಿವೆ ಕೂಸು ಕುನ್ನಿಗಳು
ಕಣ್ಣ ತುಂಬ ಕಂಬನಿ ಹೊತ್ತ ಜೀವ ಭಯ
ಸಾವಿಗೆ ಹೆದರಿದ ಮೂಕ ಮರ್ಮರ
ವಿಶಾಲ ಬಯಲಿನ ತುಂಬ ಹೆರಿಗೆ ಮನೆ
ನೋವು ಸಂಕಟಗಳು ಹರಿಕೊಂಡವು.

ಬಾಡಿಗೆಗೆ ಮನೆಮಠವಿಲ್ಲ ಶಾಲೆಗಳಿಲ್ಲ
ಕರ್ಫೂ ತುಂಬಿದ ದಿನಗಳು ಚಾಕರಿಗೆ
ಬೇಕಿಲ್ಲ ಗಂಜೀ ಕುದಿಸಲು ಕಟ್ಟಿಗೆ ಇಲ್ಲ
ಹೊದೆಯಲು ವಸ್ತ್ರವಿಲ್ಲ, ಹುಣ್ಣುಗಳ
ಗಾಯಕ್ಕೆ ಮುಲಾಮು ಸವರುವವರ್‍ಯಾರು
ಪ್ರಜಾಪ್ರಭುತ್ವಕ್ಕೆ ಬೇಗ ಪ್ರಾರ್ಥನೆಯ ಭಾಷೆ ತಿಳಿಯುವುದಿಲ್ಲ.

ನೀರಲಿ ತೇಲಿದ ಮನೆ ಮಠ ಗುಡಿ
ಬಟ್ಟೆಯೇ ಹೊದಿಸದ ಹೆಣಗಳು
ಅರ್ಧ ದಾರಿಯಲಿ ಬಿಟ್ಟು ಹೋದವರ ಗೋಳು
ಮನೆ ಗೂಡಿ ಮುರಿದು ಬಿದ್ದಿವೆ ಹಕ್ಕಿಗಳು
ಹಸಿರು ಕಾಣದೇ ಎತ್ತಲೋ ಹಾರಿ ಹೋಗಿವೆ
ಮೋಡಗಳು ಕಣ್ಣೀರು ಸುರಿಸುವುದ ನಿಲ್ಲಿಸಲಿ
ನಾವು ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡೋಣ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ