ಹೊರಟಿದ್ದೇನೆ ಕುಬೇರನ ದೇಶಕ್ಕೆ

ಹೊರಟಿದ್ದೇನೆ ಕುಬೇರನ ನಾಡಿಗೆ
ಅಲ್ಲಿ ಏನೆಲ್ಲ ಇದೆಯಂತೆ
ಅದೊಂದು ಮಾಯಾ ಪೆಟ್ಟಿಗೆಯಂತೆ
ಬೇಕೆಂದದ್ದೂ ಬೇಡವೆಂದದ್ದೂ ಕಾಣುತ್ತದಂತೆ
ಸುಮ್ಮನೆ ಕನಸು ಕಾಣಬಾರದಂತೆ;
ಮೈ ಮನಸುಗಳೆಲ್ಲೆಲ್ಲಾ ಕಚಗುಳಿ ಕುತೂಹಲ
ವಿಚಿತ್ರವಲ್ಲದೇ ಮತ್ತಿನ್ನೇನು-

ಕಣ್ಣಿಗೆ ಎಣ್ಣೆ ಹಾಕಿಕೊಂಡೇ ಕಿಟಕಿಯ ಪಕ್ಕ ಕುಳಿತಿದ್ದೇನೆ.
ಅಕ್ಕಪಕ್ಕ-ಮುಂದಿನ-ಹಿಂದಿನ ಸೀಟುಗಳಲ್ಲೆಲ್ಲಾ
ಘಾಟಿಯೋ, ಹುಳಿಯೊಗರಿನ ಎಣ್ಣೆಯ ವಾಸನೆ.
ಅವರೂ ಚುರುಕಾಗಿರಬೇಕೆಂದೇ ತಾನೆ!
ಕುಬೇರನರಮನೆಗೆ ಹೋಗಲು
ಕಣ್ತುಂಬ ಮನತುಂಬ ಲೂಟಿ ಮಾಡಲು-

ಮೋಡಗಳು ಅದೇಕೋ ಹಿಂದೆ ಹಿಂದೆಯೇ ಉಳಿದವು.
ಸಮುದ್ರ ತೆರೆಗಳಿಗೆ ನಗುವಿಲ್ಲ, ಬಾಯಿಗೆ ಬೀಗ ಹಾಕಿಕೊಂಡವೋ
ಅವುಗಳೊಂದಿಗೆ ಮಾತನಾಡುತ್ತಿದ್ದೆನಲ್ಲಾ!!!
ಕುಬೇರನ ವಿಲಾಸಿ ಬುದಕ ನೋಡ ಹೊರಟಿರುವೆನೆಂದು
ಯಾಕೋ ಮುಖ ಕವುಚಿಕೊಂಡು
ಕೇಳಿಯೂ ಕೇಳಿಸದಂತೆ ಮೆಳ್ಳಗಣ್ಣಲ್ಲಿ
ಮೈಯೊಡಮೂರಿ ಆಚೆ ಹೊರಳಿದವು.

ವೈನ್ ಸುರಿವ ಸುಂದರಿ ಕಿಲಕಿಲಸಿ
‘ಮೊದಲ ಸಲ ಅಮೇರಿಕಾ ಪ್ರವಾಸವೆ?
ಸುರಿಯಲೇ ಮಾಯಾನಗರಿಯ ರಹಸ್ಯ.’
ಆರಡಿ ಹೆಣ್ಣಿನ ಮೂರು ಮಾತುಗಳು
ಹಸಿರು ಕಣ್ಣಿನ ಬೆಕ್ಕಿನ ನೋಟ
ಕಿವಿಯವರೆಗಿನ ಬಾಯಗಲ ನಗು
ಕುಬೇರನರಮನೆಯ ಸ್ವಾಗತ ಕಾರಿಣಿಯ
ಬೆಡಗಿಗೆ ಮೊದಲ ಹಂತದಲ್ಲೇ ಬೆಚ್ಚಿ ಬಿದ್ದೆ.

ಕುತೂಹಲದ ಮೂಟೆಯ ನನ್ನ ಮುಖ
ಹಳಬನೊಬ್ಬ ಕುಬೇರನರಮನೆಯ ಹೊಕ್ಕು
ಚಿತ್ರ ವಿಚಿತ್ರ ಸೆಳೆತದ ಭ್ರಮೆ ಸಂತೋಷಿಸಿ
ನೆಮ್ಮದಿ ಕಳೆದುಕೊಂಡದ್ದಾಗಿ,
ಶಾಂತಿಗಾಗಿ ಯೋಗಾಶ್ರಮಗಳು ಹುಡುಕುತ್ತಾ
ಊರೂರ ಅಲೆಯುತ್ತಿರುವುದಾಗಿ ಉಸಿರಾಡಿದ.
ಕಿಟಕಿಯಾಚೆ ಮೋಡಗಳ ಗಹಗಹಿಸುವಿಕೆ
ದೂರದೂರ ಕೆಳಗೆ ಸಮುದ್ರದಬ್ಬರಿಸುವಿಕೆಯ
ಶಬ್ದ ಶಬ್ದ ಶಬ್ದ
ಅದೇಕೋ ಮತ್ತೊಮ್ಮೆ ನನ್ನ ನೂಕಿ
ತೇಲಾಡಿ ಸುತ್ತಾಡಿ ಹೊರಳಾಡಿ
ಗಕ್ಕೆಂದು ಹಿಂದಿರುಗಿ ಹೊರಟೇ ಹೋದವು.

ಹಾಗಾದರೆ ಕುಬೇರನ ದೇಶ ನೋಡಲೆ?
ಅಥವಾ ನಾಳೆ ಬೆಳಗಾಗುವುದರಲ್ಲೇ
ಮರು ಪ್ರಯಾಣಿಸಿ ಯೋಗಾಶ್ರಮ ಹುಡುಕಲೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಮನೆ
Next post ಕಲ್ಲಂಗಡಿ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…