Home / ಕವನ / ಕವಿತೆ / ಹೊರಟಿದ್ದೇನೆ ಕುಬೇರನ ದೇಶಕ್ಕೆ

ಹೊರಟಿದ್ದೇನೆ ಕುಬೇರನ ದೇಶಕ್ಕೆ

ಹೊರಟಿದ್ದೇನೆ ಕುಬೇರನ ನಾಡಿಗೆ
ಅಲ್ಲಿ ಏನೆಲ್ಲ ಇದೆಯಂತೆ
ಅದೊಂದು ಮಾಯಾ ಪೆಟ್ಟಿಗೆಯಂತೆ
ಬೇಕೆಂದದ್ದೂ ಬೇಡವೆಂದದ್ದೂ ಕಾಣುತ್ತದಂತೆ
ಸುಮ್ಮನೆ ಕನಸು ಕಾಣಬಾರದಂತೆ;
ಮೈ ಮನಸುಗಳೆಲ್ಲೆಲ್ಲಾ ಕಚಗುಳಿ ಕುತೂಹಲ
ವಿಚಿತ್ರವಲ್ಲದೇ ಮತ್ತಿನ್ನೇನು-

ಕಣ್ಣಿಗೆ ಎಣ್ಣೆ ಹಾಕಿಕೊಂಡೇ ಕಿಟಕಿಯ ಪಕ್ಕ ಕುಳಿತಿದ್ದೇನೆ.
ಅಕ್ಕಪಕ್ಕ-ಮುಂದಿನ-ಹಿಂದಿನ ಸೀಟುಗಳಲ್ಲೆಲ್ಲಾ
ಘಾಟಿಯೋ, ಹುಳಿಯೊಗರಿನ ಎಣ್ಣೆಯ ವಾಸನೆ.
ಅವರೂ ಚುರುಕಾಗಿರಬೇಕೆಂದೇ ತಾನೆ!
ಕುಬೇರನರಮನೆಗೆ ಹೋಗಲು
ಕಣ್ತುಂಬ ಮನತುಂಬ ಲೂಟಿ ಮಾಡಲು-

ಮೋಡಗಳು ಅದೇಕೋ ಹಿಂದೆ ಹಿಂದೆಯೇ ಉಳಿದವು.
ಸಮುದ್ರ ತೆರೆಗಳಿಗೆ ನಗುವಿಲ್ಲ, ಬಾಯಿಗೆ ಬೀಗ ಹಾಕಿಕೊಂಡವೋ
ಅವುಗಳೊಂದಿಗೆ ಮಾತನಾಡುತ್ತಿದ್ದೆನಲ್ಲಾ!!!
ಕುಬೇರನ ವಿಲಾಸಿ ಬುದಕ ನೋಡ ಹೊರಟಿರುವೆನೆಂದು
ಯಾಕೋ ಮುಖ ಕವುಚಿಕೊಂಡು
ಕೇಳಿಯೂ ಕೇಳಿಸದಂತೆ ಮೆಳ್ಳಗಣ್ಣಲ್ಲಿ
ಮೈಯೊಡಮೂರಿ ಆಚೆ ಹೊರಳಿದವು.

ವೈನ್ ಸುರಿವ ಸುಂದರಿ ಕಿಲಕಿಲಸಿ
‘ಮೊದಲ ಸಲ ಅಮೇರಿಕಾ ಪ್ರವಾಸವೆ?
ಸುರಿಯಲೇ ಮಾಯಾನಗರಿಯ ರಹಸ್ಯ.’
ಆರಡಿ ಹೆಣ್ಣಿನ ಮೂರು ಮಾತುಗಳು
ಹಸಿರು ಕಣ್ಣಿನ ಬೆಕ್ಕಿನ ನೋಟ
ಕಿವಿಯವರೆಗಿನ ಬಾಯಗಲ ನಗು
ಕುಬೇರನರಮನೆಯ ಸ್ವಾಗತ ಕಾರಿಣಿಯ
ಬೆಡಗಿಗೆ ಮೊದಲ ಹಂತದಲ್ಲೇ ಬೆಚ್ಚಿ ಬಿದ್ದೆ.

ಕುತೂಹಲದ ಮೂಟೆಯ ನನ್ನ ಮುಖ
ಹಳಬನೊಬ್ಬ ಕುಬೇರನರಮನೆಯ ಹೊಕ್ಕು
ಚಿತ್ರ ವಿಚಿತ್ರ ಸೆಳೆತದ ಭ್ರಮೆ ಸಂತೋಷಿಸಿ
ನೆಮ್ಮದಿ ಕಳೆದುಕೊಂಡದ್ದಾಗಿ,
ಶಾಂತಿಗಾಗಿ ಯೋಗಾಶ್ರಮಗಳು ಹುಡುಕುತ್ತಾ
ಊರೂರ ಅಲೆಯುತ್ತಿರುವುದಾಗಿ ಉಸಿರಾಡಿದ.
ಕಿಟಕಿಯಾಚೆ ಮೋಡಗಳ ಗಹಗಹಿಸುವಿಕೆ
ದೂರದೂರ ಕೆಳಗೆ ಸಮುದ್ರದಬ್ಬರಿಸುವಿಕೆಯ
ಶಬ್ದ ಶಬ್ದ ಶಬ್ದ
ಅದೇಕೋ ಮತ್ತೊಮ್ಮೆ ನನ್ನ ನೂಕಿ
ತೇಲಾಡಿ ಸುತ್ತಾಡಿ ಹೊರಳಾಡಿ
ಗಕ್ಕೆಂದು ಹಿಂದಿರುಗಿ ಹೊರಟೇ ಹೋದವು.

ಹಾಗಾದರೆ ಕುಬೇರನ ದೇಶ ನೋಡಲೆ?
ಅಥವಾ ನಾಳೆ ಬೆಳಗಾಗುವುದರಲ್ಲೇ
ಮರು ಪ್ರಯಾಣಿಸಿ ಯೋಗಾಶ್ರಮ ಹುಡುಕಲೆ?
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...