ಹೊರಟಿದ್ದೇನೆ ಕುಬೇರನ ದೇಶಕ್ಕೆ

ಹೊರಟಿದ್ದೇನೆ ಕುಬೇರನ ನಾಡಿಗೆ
ಅಲ್ಲಿ ಏನೆಲ್ಲ ಇದೆಯಂತೆ
ಅದೊಂದು ಮಾಯಾ ಪೆಟ್ಟಿಗೆಯಂತೆ
ಬೇಕೆಂದದ್ದೂ ಬೇಡವೆಂದದ್ದೂ ಕಾಣುತ್ತದಂತೆ
ಸುಮ್ಮನೆ ಕನಸು ಕಾಣಬಾರದಂತೆ;
ಮೈ ಮನಸುಗಳೆಲ್ಲೆಲ್ಲಾ ಕಚಗುಳಿ ಕುತೂಹಲ
ವಿಚಿತ್ರವಲ್ಲದೇ ಮತ್ತಿನ್ನೇನು-

ಕಣ್ಣಿಗೆ ಎಣ್ಣೆ ಹಾಕಿಕೊಂಡೇ ಕಿಟಕಿಯ ಪಕ್ಕ ಕುಳಿತಿದ್ದೇನೆ.
ಅಕ್ಕಪಕ್ಕ-ಮುಂದಿನ-ಹಿಂದಿನ ಸೀಟುಗಳಲ್ಲೆಲ್ಲಾ
ಘಾಟಿಯೋ, ಹುಳಿಯೊಗರಿನ ಎಣ್ಣೆಯ ವಾಸನೆ.
ಅವರೂ ಚುರುಕಾಗಿರಬೇಕೆಂದೇ ತಾನೆ!
ಕುಬೇರನರಮನೆಗೆ ಹೋಗಲು
ಕಣ್ತುಂಬ ಮನತುಂಬ ಲೂಟಿ ಮಾಡಲು-

ಮೋಡಗಳು ಅದೇಕೋ ಹಿಂದೆ ಹಿಂದೆಯೇ ಉಳಿದವು.
ಸಮುದ್ರ ತೆರೆಗಳಿಗೆ ನಗುವಿಲ್ಲ, ಬಾಯಿಗೆ ಬೀಗ ಹಾಕಿಕೊಂಡವೋ
ಅವುಗಳೊಂದಿಗೆ ಮಾತನಾಡುತ್ತಿದ್ದೆನಲ್ಲಾ!!!
ಕುಬೇರನ ವಿಲಾಸಿ ಬುದಕ ನೋಡ ಹೊರಟಿರುವೆನೆಂದು
ಯಾಕೋ ಮುಖ ಕವುಚಿಕೊಂಡು
ಕೇಳಿಯೂ ಕೇಳಿಸದಂತೆ ಮೆಳ್ಳಗಣ್ಣಲ್ಲಿ
ಮೈಯೊಡಮೂರಿ ಆಚೆ ಹೊರಳಿದವು.

ವೈನ್ ಸುರಿವ ಸುಂದರಿ ಕಿಲಕಿಲಸಿ
‘ಮೊದಲ ಸಲ ಅಮೇರಿಕಾ ಪ್ರವಾಸವೆ?
ಸುರಿಯಲೇ ಮಾಯಾನಗರಿಯ ರಹಸ್ಯ.’
ಆರಡಿ ಹೆಣ್ಣಿನ ಮೂರು ಮಾತುಗಳು
ಹಸಿರು ಕಣ್ಣಿನ ಬೆಕ್ಕಿನ ನೋಟ
ಕಿವಿಯವರೆಗಿನ ಬಾಯಗಲ ನಗು
ಕುಬೇರನರಮನೆಯ ಸ್ವಾಗತ ಕಾರಿಣಿಯ
ಬೆಡಗಿಗೆ ಮೊದಲ ಹಂತದಲ್ಲೇ ಬೆಚ್ಚಿ ಬಿದ್ದೆ.

ಕುತೂಹಲದ ಮೂಟೆಯ ನನ್ನ ಮುಖ
ಹಳಬನೊಬ್ಬ ಕುಬೇರನರಮನೆಯ ಹೊಕ್ಕು
ಚಿತ್ರ ವಿಚಿತ್ರ ಸೆಳೆತದ ಭ್ರಮೆ ಸಂತೋಷಿಸಿ
ನೆಮ್ಮದಿ ಕಳೆದುಕೊಂಡದ್ದಾಗಿ,
ಶಾಂತಿಗಾಗಿ ಯೋಗಾಶ್ರಮಗಳು ಹುಡುಕುತ್ತಾ
ಊರೂರ ಅಲೆಯುತ್ತಿರುವುದಾಗಿ ಉಸಿರಾಡಿದ.
ಕಿಟಕಿಯಾಚೆ ಮೋಡಗಳ ಗಹಗಹಿಸುವಿಕೆ
ದೂರದೂರ ಕೆಳಗೆ ಸಮುದ್ರದಬ್ಬರಿಸುವಿಕೆಯ
ಶಬ್ದ ಶಬ್ದ ಶಬ್ದ
ಅದೇಕೋ ಮತ್ತೊಮ್ಮೆ ನನ್ನ ನೂಕಿ
ತೇಲಾಡಿ ಸುತ್ತಾಡಿ ಹೊರಳಾಡಿ
ಗಕ್ಕೆಂದು ಹಿಂದಿರುಗಿ ಹೊರಟೇ ಹೋದವು.

ಹಾಗಾದರೆ ಕುಬೇರನ ದೇಶ ನೋಡಲೆ?
ಅಥವಾ ನಾಳೆ ಬೆಳಗಾಗುವುದರಲ್ಲೇ
ಮರು ಪ್ರಯಾಣಿಸಿ ಯೋಗಾಶ್ರಮ ಹುಡುಕಲೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಮನೆ
Next post ಕಲ್ಲಂಗಡಿ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…