ಗೂಡಿಂದ ಗೂಡಿಗೆ

ನಿನ್ನೆ ಮೊನ್ನೆಯೇ ಮದುವೆಯಾದಂತಿದೆ
ಆಕೆಯ ಕೈಮೇಲಿನ ಮೆಹೆಂದಿ, ಹಸಿರುಬಳೆ
ಕಾಲುಂಗುರ ಗರಿಗರಿಯಾದ ಸೀರೆ-
ಆತನ ಮುಂಗೈ ರೇಶ್ಮೆದಾರ
ಮದುವೆಯ ಥ್ರೀ ಪೀಸ್ ಸೂಟು.

ಹನಿಮೂನಿಗೆ ಸಮಯವೇ ಇಲ್ಲವೆಂದಾಗಿದ್ದರೆ
ಇಲ್ಲಾದರೂ ಒಂದಿಷ್ಟು ಪ್ರೀತಿ ಮಾತು
ಮುತ್ತು ನಗು ಕೊಡಬಹುದಾಗಿತ್ತೇನೋ
ಹೇಳುತ್ತಲೇ ಇದ್ದಾನೆ ತನಗರಿವಿಲ್ಲದಂತೆ
ಅಮೆರಿಕದ ಗಡಿಬಿಡಿ ಜೀವನ
ಆಫೀಸು, ಶಾಪಿಂಗು, ಮನೆಗೆಲಸ
ಡ್ರೆಸ್ಸು, ಫುಡ್ಡು, ನೇಬರು ಎಂದೇನೆಲ್ಲ…..
ಆಶ್ಚರ್ಯ ಭಯ ಕಾತರದ ಆ ಹುಡುಗಿ
ಹೂಂ ಗುಡುತ್ತಲೇ ಅಮೆರಿಕದ ಕನಸಿನಲ್ಲಿ
ಹುಬ್ಬುಗಳೊಳಗೇ ಕಳವಳದ ಮಾತುಗಳು.

ನಾಚಿಕೆಯ ಅವಳ ಕೆನ್ನೆಯ ಗುಳಿ
ನಗು ನೋಡಬೇಕೆಂದ ನಾನು…..
ಆತ ನ್ಯೂಯಾರ್ಕಿನ ತನ್ನ
ವೇಳಾಪತ್ರಿಕೆ ಸಿಸ್ತು ಅದೂ ಇದೂ ಹೇಳಿ
ಸುಸ್ತಾಗಿಸಿದ್ದ ಆಕೆಗೆ ನಾಳೆ ಬೆಳಿಗ್ಗೆಯೇ
ಆಫೀಸಿನಲ್ಲಿರಬೇಕೆಂದು ಹೇಳಿ
ಅವಳಿಗೆ ಹೊದೆಸಿ ತಾನೂ ಸೀಟಿಗೊರಗಿದ
ಗೂಡಿಗಿನ್ನೂ ತಲುಪದ ಹುಡುಗಿಯ
ವಿದೇಶಿ ಕನಸು….
ಬಿಟ್ಟ ಕಣ್ಣು ಬಿಟ್ಟಂತೆಯೇ ಆತಂಕದ ಹುಡುಗಿ
ನಿರ್ಣಯ ಸರಿಯೋ ತಪ್ಪೊ…..
ಬೆವರೊರೆಸುತ ಸೀಟಿಗೊರಗಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಚ್ಚರ!
Next post ಪೂಜೆ ಪ್ರಸಾದ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…