ಎಚ್ಚರ!

ಮನಸೇ ಹಸಿರಾಗಿರು ನೀನು
ಈ ಉಸಿರು ತಾನಾಗಿ ನಿಲ್ಲುವ ತನಕ
ಉಸಿರೇ ಹೆಸರಾಗಿರು ನೀನು
ಈ ಬಸಿರ ಖಿಣವು ತಾ ತೀರುವ ತನಕ ||ಪ||

ಚೆಲುವೊ-ನಲಿವೋ ಹೃನ್ಮನದ ಒಲವೊ
ಗೆಲುವ ಛಲದ ಬಲವೊಽ
ಹೂವೊ ಹಣ್ಣೊ ತಂಬೆಲರ ಸೊಗಸೊ
ನವನವದ ನವ್ಯ ನಂದನವೊಽ
ಮನ ಮನದಿ ಮಥನ
ಸೌಗಂಧ ತನನ ನವರಾಗದಿಂಪ ಸ್ವರವೊಽ
ಜೀವ ದೇವ ಭಾವೋನ್ಮಾದದ ಮಿಲನವೊಽ
ಸೋಲುಗೆಲುವ ರಂಗ ತಂತ್ರವೊಽ ||೧||

ಕಷ್ಟ-ಕಠಿಣ ಸಂಕರದ ಜಾಲವೊ
ಹಗೆಯ ಧಗೆಯ ಸುಳಿಯೊಽ
ಬರಮೋಡದಲೆಗಳಲವತನಿಲ ಸೊಗಸೊ
ಬಿರುಬಿಸಿಲ ಮರಳರಳ ನೆಲವೊಽ
ಕಣ ಕಣದಿ ದಮನದುರಿಯೊ
ಅಣು-ಅಣುವುದಹಿಸೊ ಕಡು ತಾಪ ಕೂಪವೊಽ
ದೇಹ-ಮೋಹ ದಾಹೋನ್ಮಾದದ ತಂತ್ರವೊಽ
ಅಳಿವು-ಳಿವಿನಾ ಶೂಲ ಜಾಲವೋಽ ||೨||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುದ್ಧ
Next post ಗೂಡಿಂದ ಗೂಡಿಗೆ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…