ಯುದ್ಧ

ಯುದ್ಧಗಳ ಹಿಂಸೆ ಗದ್ದಲದಲಿ
ರಣರಂಗ ರಕ್ತ ಚೆಲ್ಲಿದೆ ಮತ್ತೆ
ಗಾಯಾಳುಗಳು ಚೀರುತ್ತಿದ್ದಾರೆ
ಸಾವಿನಲ್ಲಿ ನೋವು ಹರಡಿಕೊಂಡಿದೆ
ಅಲ್ಲಿ ಖಾಲಿ ಆವರಿಸಿಕೊಂಡಿದೆ.

ಘಟಿಸುವ ಘಟನೆಗಳನ್ನು
ದಾಖಲೆಗಳ ಲೆಕ್ಕಕ್ಕೆ ಇಟ್ಟವರ್‍ಯಾರು
ಇತಿಹಾಸದಲಿ ಹಸಿದ ಕರಳು
ಮರೆತವರು ಅಮಾಯಕರ
ನೋಟುಗಳು ಬರೀ ಶೂನ್ಯಗಳಾಗಿವೆ.

ಮುರಿದ ರುಂಡ ಮುಂಡಗಳ
ಚದುರಂಗದ ಆಟ ದಾಳ ಉರುಳಿಸಿ
ಅಲ್ಲಲ್ಲಿ ಬಿದ್ದ ರಕ್ತದೋಕುಳಿ
ಎಲ್ಲಾ ಸಾಮಗ್ರಿಗಳು ಸವೆದ ದಾರಿ
ವ್ಯವಸ್ಥೆ ಕೊಲ್ಲುವ ಯಂತ್ರವಾಗಿದೆ.

ಮಾರಣಾಂತಿಕ ಹಲ್ಲೆಗಳ
ಸರಮಾಲೆ ತಯಾರಾಗಿ ಕುಳಿತಿದ್ದಾನೆ
ಕೊಲೆಗಾರ ಯಾರಿಗೋ ಕಾಯುತ್ತ
ಯಾವ ತಾಯಿಯ ಮಡಿಲು ಬರಿದೋ
ಎಲ್ಲವೂ ಸುಟ್ಟ ಕರಕಾಗುವ ಆಕ್ರಮಣ.

ಎಲ್ಲಾ ಚೀತ್ಕಾರಗಳ ನಡುವೆ
ಸೂರ್ಯ ಕಿರಣಗಳ ಬಿಟ್ಟಿದ್ದಾನೆ
ಸಾಯುವ ನೋಯುವ ಕ್ಷಣಗಳ
ಕಾರ್ಯ ಕಾಯಕ ನರಮೇಧ
ಕಾರಣ ನಾನಲ್ಲ ಎಂದು ಕಂತುತ್ತಿದ್ದಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೃದಯ ಒಲವಿಗೆ ಅಲ್ಲದಿನ್ನೇತಕೆ?
Next post ಎಚ್ಚರ!

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys