ಯುದ್ಧ

ಯುದ್ಧಗಳ ಹಿಂಸೆ ಗದ್ದಲದಲಿ
ರಣರಂಗ ರಕ್ತ ಚೆಲ್ಲಿದೆ ಮತ್ತೆ
ಗಾಯಾಳುಗಳು ಚೀರುತ್ತಿದ್ದಾರೆ
ಸಾವಿನಲ್ಲಿ ನೋವು ಹರಡಿಕೊಂಡಿದೆ
ಅಲ್ಲಿ ಖಾಲಿ ಆವರಿಸಿಕೊಂಡಿದೆ.

ಘಟಿಸುವ ಘಟನೆಗಳನ್ನು
ದಾಖಲೆಗಳ ಲೆಕ್ಕಕ್ಕೆ ಇಟ್ಟವರ್‍ಯಾರು
ಇತಿಹಾಸದಲಿ ಹಸಿದ ಕರಳು
ಮರೆತವರು ಅಮಾಯಕರ
ನೋಟುಗಳು ಬರೀ ಶೂನ್ಯಗಳಾಗಿವೆ.

ಮುರಿದ ರುಂಡ ಮುಂಡಗಳ
ಚದುರಂಗದ ಆಟ ದಾಳ ಉರುಳಿಸಿ
ಅಲ್ಲಲ್ಲಿ ಬಿದ್ದ ರಕ್ತದೋಕುಳಿ
ಎಲ್ಲಾ ಸಾಮಗ್ರಿಗಳು ಸವೆದ ದಾರಿ
ವ್ಯವಸ್ಥೆ ಕೊಲ್ಲುವ ಯಂತ್ರವಾಗಿದೆ.

ಮಾರಣಾಂತಿಕ ಹಲ್ಲೆಗಳ
ಸರಮಾಲೆ ತಯಾರಾಗಿ ಕುಳಿತಿದ್ದಾನೆ
ಕೊಲೆಗಾರ ಯಾರಿಗೋ ಕಾಯುತ್ತ
ಯಾವ ತಾಯಿಯ ಮಡಿಲು ಬರಿದೋ
ಎಲ್ಲವೂ ಸುಟ್ಟ ಕರಕಾಗುವ ಆಕ್ರಮಣ.

ಎಲ್ಲಾ ಚೀತ್ಕಾರಗಳ ನಡುವೆ
ಸೂರ್ಯ ಕಿರಣಗಳ ಬಿಟ್ಟಿದ್ದಾನೆ
ಸಾಯುವ ನೋಯುವ ಕ್ಷಣಗಳ
ಕಾರ್ಯ ಕಾಯಕ ನರಮೇಧ
ಕಾರಣ ನಾನಲ್ಲ ಎಂದು ಕಂತುತ್ತಿದ್ದಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೃದಯ ಒಲವಿಗೆ ಅಲ್ಲದಿನ್ನೇತಕೆ?
Next post ಎಚ್ಚರ!

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…