ಹೃದಯ ಒಲವಿಗೆ ಅಲ್ಲದಿನ್ನೇತಕೆ?

ಹೃದಯ ಒಲವಿಗೆ ಅಲ್ಲದಿನ್ನೇತಕೆ?
ಬಾನಿನಲಿ ತಾರೆಗಳ ಮಾಲೆಯೇಕೆ?

ಆ ಮೂರು ಮೋಡಗಳ ನಡುವೆ ಚೆಂಡಿನಹಾಗೆ
ಕೇಸರಿಯ ಕಿರಣಗಳ ಮಂಜಮೇಲೆ
ಹರಹುತ್ತ ಏರುತಿಹ ಚಂದಿರನ ಬೆಳ್ಳಿಯಲಿ
ನೀ ಬಾರದಿರೆ ನನ್ನ ಹಾಡಿದೇಕೆ?

ಓ ನನ್ನ ಉಷೆ, ನಿನ್ನ ‘ಓ’ ದನಿಯೆ ಕೇಳದಿದೆ,
ಎನಿತೆನಿತು ಕೂಗಿದರು ಬಾರೆಯೇಕೆ?
ನನ್ನ ನಿನ್ನೊಲವಿಂದ ಒಂದೆ ಬಾಳಿನ ಚಂದ
ಜಗಕೆ ತೋರುವ ಎನಲು, ಮುನಿವುದೇಕೆ?

ಮೋಡಗಳ ಮೈಯಿಳಿದು, ಮಳೆಯಿಳಿದು, ಮುಗಿದಾಗ,
ಹೂಗಿರಣ ಅರಳುವುದು ಜಗದೊಳೇಕೆ?
ಎಲೆಯ ಕುಣಿತದ ತಾಳ, ಮಂಜು ಹನಿಗಳ ಮೇಳ,
ಗಾಳಿಯಿಂಪಿನ ಗೀತ ಸುಳಿವುದೇಕೆ?

ಜೀವನದ ನಗೆ ನೀನು, ನಗೆಯೊಳನಗೆ ನೀನು,
ನೀ ಬಾರದಿರೆ ಎಲ್ಲ ನಗೆಯಿದೇಕೆ?
ಕಲ್ಪನೆಯ ಬಿಸಿಯಲ್ಲಿ ಸುಳಿದೊಂದು ಕನಸಂತೆ
ನೀ ತೋರದಿರೆ ನನ್ನ ಬಾಳಿದೇಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರೋಪ – ೭
Next post ಯುದ್ಧ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…