ಶ್ರಮದ ಹಿರಿಮೆ

ಶ್ರಮ ಜೀವನಕೆ ಜಯವೆನ್ನಿ ಶ್ರಮಿಕರಿಗೆಲ್ಲಾ ಜಯವೆನ್ನಿ

ಶ್ರಮವೇ ಜೀವನಕಾಧಾರ ಶ್ರಮದಿಂದಲೇ ಜೀವನಸಾರ
ಶ್ರಮವೇ ಬದುಕಿನ ಬೇರು ಶ್ರಮವಿಲ್ಲದೆ ಬದುಕೇ ನಿಸ್ಸಾರ

ಮಣ್ಣಿನ ಕಣಕಣದೆಲ್ಲಿಡೆ ಮಿಡಿಯುತ ಹೂವೂ ಹಣ್ಣು ನಿತ್ಯಾ
ನಿಸರ್ಗವೆಲ್ಲಾ ಚೆಲುವಿನ ತವರು ಶ್ರಮವೇ ವಿಶ್ವದ ಸತ್ಯಾ

ರಾಜಾಧಿರಾಜರ ಕೋಟೆಕೊತ್ತಲ ಅರಮನೆ ಗುರುಮನೆಗೆಲ್ಲ
ಶ್ರಮಜೀವಿಗಳೇ ಕಾರಣಕರ್ತರು ಚರಿತ್ರೆ ಬುನಾದಿಗೆಲ್ಲ

ಹೊನ್ನರಾಶಿಗಳು ಮುತ್ತು ರತ್ನಗಳು ಬೀದಿಗಳಲ್ಲಿ ಮೆರೆದಿರಲು
ಬೆನ್ನನುಬಗ್ಗಿಸಿ ದುಡಿಯುವ ಅವನ್ನು ತಂದವರೇ ಶ್ರಮ ಜೀವಿಗಳು

ಚರಿತ್ರೆಯನ್ನೇ ಕಟ್ಟಿ ಬೆಳೆಸಿದ ಶ್ರಮಜೀವಿಗಳ ಹೆಸರೆಲ್ಲಿ
ಸಾವಿರ ವರ್ಷದ ಸಂಸ್ಕೃತಿಗಳನ್ನು ಸೃಷ್ಟಿಸಿದವರ ಗುರುತೆಲ್ಲಿ

ದೇಶಕ್ಕೆಲ್ಲ ಅನ್ನವ ಕೊಡುವುದು ದುಡಿಯುವ ರೈತನ ಶ್ರಮವು
ಉಣ್ಣುವ ಉಡುವ ಎಲ್ಲ ವಸ್ತುಗಳ ಮೂಲದಲ್ಲಿದೆ ಶ್ರಮವು

ರಸ್ತೆ ಬೀದಿಗಳ ಮಹಲು ಮನೆಗಳ ಕಟ್ಟುವುದೆಲ್ಲ ಶ್ರಮವೆ
ನಾಗರಿಕತೆಗಳ ವೈಭವಗಳನ್ನು ಬೆಳೆಸಿದೆಲ್ಲ ಶ್ರಮವೆ

ಅಣೆಕಟ್ಟುಗಳ ಕಾರಖಾನೆಗಳ ನಿರ್ಮಿಸಿರುವರು ದುಡಿವವರು
ಬೆವರು ರಕ್ತಗಳ ಹರಿಸಿ ದುಡಿವವರು ಹೆಸರಿಲ್ಲದೆಯೆ ಮಡಿವವರು

ಗುಡ್ಡ ಗಣಿಗಳಲಿ ಕಬ್ಬಿಣ ಅಗೆವರು ಕಬ್ಬಿಣದಂಥಾ ದುಡಿವವರು
ದುಡಿವರ ಬೆನ್ನಿನ ಮೇಲ್ಗಡೆ ಕುಳಿತು ಮೆರೆವವರು ಹಣವುಳ್ಳವರು
ಮಂತ್ರಿ ಶಾಸಕರ ಆರಿಸಿ ಗದ್ದುಗೆಗೇರಿಸಿ ಹೊರುವರು ದುಡಿವವರು
ಸ್ವಾಮಿ ಜಗದ್ಗುರುಗಳ ಪಲ್ಲಕಿಯಲಿ ಮೆರೆಸಿ ಸಾಯುವರು ದುಡಿವವರು

ಶ್ರಮ ಜೀವಿಗಳಿಗೆ ಮೋಸವ ಮಾಡುವ ದೇಶವು ಎಂದೂ ಬೆಳೆಯೊಲ್ಲ
ಶ್ರಮ ಗೌರವವನು ಮರೆತ ಜನಾಂಗಕೆ ಪ್ರಗತಿಯ ಭವಿಷ್ಯ ಉಳಿಯೊಲ್ಲ

ಶ್ರಮ ಜೀವಿಗಿಂತ ಶ್ರೇಷ್ಠನು ಯಾರು ಅವನಿಗೆ ಎಲ್ಲರು ಸಣ್ಣವರು
ಪವಿತ್ರ ತೀರ್ಥವು ಯಾವುದು ಇಲ್ಲ ಅದುವೇ ಶ್ರಮದಾ ಬೆವರು

ಶ್ರಮವೇ ದೇಹಾರೋಗ್ಯಕ್ಕೆ ಮೂಲ ಮನದಾರೋಗ್ಯವು ಕೂಡ
ಜಪತಪ ಪೂಜಾ ಯಜ್ಞಯೋಗಗಳು ಶ್ರಮಕ್ಕೆ ಸಣ್ಣವು ನೋಡ

ಚೆಲುವಿನ ರಹಸ್ಯ ಗೆಲುವಿನ ಗುಟ್ಟು ಶ್ರಮ ಸಾಧನೆಯಲೆ ಅಡಗಿಹುದು
ದೀರ್ಘಾಧಾಯುಷ್ಯ ಶಕ್ತಿ ಸಾಮರ್ಥ್ಯ ಶ್ರಮದಿಂದ ಸಿದ್ದಿಯಾಗುವುದು

ತಲತಲಾಂತರದ ಕರ್ಮಕೌಶಲತೆ ಕಲೆ ಜಾಣ್ಮೆ ಪ್ರತಿಭೆಯೆಲ್ಲ
ಹನಿ ಹನಿ ಕೂಡಿದ ಹೊಳೆಯು ಸಂಸ್ಕೃತಿಯು
ಎಲ್ಲ ಶ್ರಮದ ಕೊಡುಗೆಯಲಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸ್ಟ್ರೇಲಿಯಾ
Next post ಶರಣನ ಕುರುಹು

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…