ಶ್ರಮದ ಹಿರಿಮೆ

ಶ್ರಮ ಜೀವನಕೆ ಜಯವೆನ್ನಿ ಶ್ರಮಿಕರಿಗೆಲ್ಲಾ ಜಯವೆನ್ನಿ

ಶ್ರಮವೇ ಜೀವನಕಾಧಾರ ಶ್ರಮದಿಂದಲೇ ಜೀವನಸಾರ
ಶ್ರಮವೇ ಬದುಕಿನ ಬೇರು ಶ್ರಮವಿಲ್ಲದೆ ಬದುಕೇ ನಿಸ್ಸಾರ

ಮಣ್ಣಿನ ಕಣಕಣದೆಲ್ಲಿಡೆ ಮಿಡಿಯುತ ಹೂವೂ ಹಣ್ಣು ನಿತ್ಯಾ
ನಿಸರ್ಗವೆಲ್ಲಾ ಚೆಲುವಿನ ತವರು ಶ್ರಮವೇ ವಿಶ್ವದ ಸತ್ಯಾ

ರಾಜಾಧಿರಾಜರ ಕೋಟೆಕೊತ್ತಲ ಅರಮನೆ ಗುರುಮನೆಗೆಲ್ಲ
ಶ್ರಮಜೀವಿಗಳೇ ಕಾರಣಕರ್ತರು ಚರಿತ್ರೆ ಬುನಾದಿಗೆಲ್ಲ

ಹೊನ್ನರಾಶಿಗಳು ಮುತ್ತು ರತ್ನಗಳು ಬೀದಿಗಳಲ್ಲಿ ಮೆರೆದಿರಲು
ಬೆನ್ನನುಬಗ್ಗಿಸಿ ದುಡಿಯುವ ಅವನ್ನು ತಂದವರೇ ಶ್ರಮ ಜೀವಿಗಳು

ಚರಿತ್ರೆಯನ್ನೇ ಕಟ್ಟಿ ಬೆಳೆಸಿದ ಶ್ರಮಜೀವಿಗಳ ಹೆಸರೆಲ್ಲಿ
ಸಾವಿರ ವರ್ಷದ ಸಂಸ್ಕೃತಿಗಳನ್ನು ಸೃಷ್ಟಿಸಿದವರ ಗುರುತೆಲ್ಲಿ

ದೇಶಕ್ಕೆಲ್ಲ ಅನ್ನವ ಕೊಡುವುದು ದುಡಿಯುವ ರೈತನ ಶ್ರಮವು
ಉಣ್ಣುವ ಉಡುವ ಎಲ್ಲ ವಸ್ತುಗಳ ಮೂಲದಲ್ಲಿದೆ ಶ್ರಮವು

ರಸ್ತೆ ಬೀದಿಗಳ ಮಹಲು ಮನೆಗಳ ಕಟ್ಟುವುದೆಲ್ಲ ಶ್ರಮವೆ
ನಾಗರಿಕತೆಗಳ ವೈಭವಗಳನ್ನು ಬೆಳೆಸಿದೆಲ್ಲ ಶ್ರಮವೆ

ಅಣೆಕಟ್ಟುಗಳ ಕಾರಖಾನೆಗಳ ನಿರ್ಮಿಸಿರುವರು ದುಡಿವವರು
ಬೆವರು ರಕ್ತಗಳ ಹರಿಸಿ ದುಡಿವವರು ಹೆಸರಿಲ್ಲದೆಯೆ ಮಡಿವವರು

ಗುಡ್ಡ ಗಣಿಗಳಲಿ ಕಬ್ಬಿಣ ಅಗೆವರು ಕಬ್ಬಿಣದಂಥಾ ದುಡಿವವರು
ದುಡಿವರ ಬೆನ್ನಿನ ಮೇಲ್ಗಡೆ ಕುಳಿತು ಮೆರೆವವರು ಹಣವುಳ್ಳವರು
ಮಂತ್ರಿ ಶಾಸಕರ ಆರಿಸಿ ಗದ್ದುಗೆಗೇರಿಸಿ ಹೊರುವರು ದುಡಿವವರು
ಸ್ವಾಮಿ ಜಗದ್ಗುರುಗಳ ಪಲ್ಲಕಿಯಲಿ ಮೆರೆಸಿ ಸಾಯುವರು ದುಡಿವವರು

ಶ್ರಮ ಜೀವಿಗಳಿಗೆ ಮೋಸವ ಮಾಡುವ ದೇಶವು ಎಂದೂ ಬೆಳೆಯೊಲ್ಲ
ಶ್ರಮ ಗೌರವವನು ಮರೆತ ಜನಾಂಗಕೆ ಪ್ರಗತಿಯ ಭವಿಷ್ಯ ಉಳಿಯೊಲ್ಲ

ಶ್ರಮ ಜೀವಿಗಿಂತ ಶ್ರೇಷ್ಠನು ಯಾರು ಅವನಿಗೆ ಎಲ್ಲರು ಸಣ್ಣವರು
ಪವಿತ್ರ ತೀರ್ಥವು ಯಾವುದು ಇಲ್ಲ ಅದುವೇ ಶ್ರಮದಾ ಬೆವರು

ಶ್ರಮವೇ ದೇಹಾರೋಗ್ಯಕ್ಕೆ ಮೂಲ ಮನದಾರೋಗ್ಯವು ಕೂಡ
ಜಪತಪ ಪೂಜಾ ಯಜ್ಞಯೋಗಗಳು ಶ್ರಮಕ್ಕೆ ಸಣ್ಣವು ನೋಡ

ಚೆಲುವಿನ ರಹಸ್ಯ ಗೆಲುವಿನ ಗುಟ್ಟು ಶ್ರಮ ಸಾಧನೆಯಲೆ ಅಡಗಿಹುದು
ದೀರ್ಘಾಧಾಯುಷ್ಯ ಶಕ್ತಿ ಸಾಮರ್ಥ್ಯ ಶ್ರಮದಿಂದ ಸಿದ್ದಿಯಾಗುವುದು

ತಲತಲಾಂತರದ ಕರ್ಮಕೌಶಲತೆ ಕಲೆ ಜಾಣ್ಮೆ ಪ್ರತಿಭೆಯೆಲ್ಲ
ಹನಿ ಹನಿ ಕೂಡಿದ ಹೊಳೆಯು ಸಂಸ್ಕೃತಿಯು
ಎಲ್ಲ ಶ್ರಮದ ಕೊಡುಗೆಯಲಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸ್ಟ್ರೇಲಿಯಾ
Next post ಶರಣನ ಕುರುಹು

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…