Home / ಕವನ / ಕವಿತೆ / ಶ್ರಮದ ಹಿರಿಮೆ

ಶ್ರಮದ ಹಿರಿಮೆ

ಶ್ರಮ ಜೀವನಕೆ ಜಯವೆನ್ನಿ ಶ್ರಮಿಕರಿಗೆಲ್ಲಾ ಜಯವೆನ್ನಿ

ಶ್ರಮವೇ ಜೀವನಕಾಧಾರ ಶ್ರಮದಿಂದಲೇ ಜೀವನಸಾರ
ಶ್ರಮವೇ ಬದುಕಿನ ಬೇರು ಶ್ರಮವಿಲ್ಲದೆ ಬದುಕೇ ನಿಸ್ಸಾರ

ಮಣ್ಣಿನ ಕಣಕಣದೆಲ್ಲಿಡೆ ಮಿಡಿಯುತ ಹೂವೂ ಹಣ್ಣು ನಿತ್ಯಾ
ನಿಸರ್ಗವೆಲ್ಲಾ ಚೆಲುವಿನ ತವರು ಶ್ರಮವೇ ವಿಶ್ವದ ಸತ್ಯಾ

ರಾಜಾಧಿರಾಜರ ಕೋಟೆಕೊತ್ತಲ ಅರಮನೆ ಗುರುಮನೆಗೆಲ್ಲ
ಶ್ರಮಜೀವಿಗಳೇ ಕಾರಣಕರ್ತರು ಚರಿತ್ರೆ ಬುನಾದಿಗೆಲ್ಲ

ಹೊನ್ನರಾಶಿಗಳು ಮುತ್ತು ರತ್ನಗಳು ಬೀದಿಗಳಲ್ಲಿ ಮೆರೆದಿರಲು
ಬೆನ್ನನುಬಗ್ಗಿಸಿ ದುಡಿಯುವ ಅವನ್ನು ತಂದವರೇ ಶ್ರಮ ಜೀವಿಗಳು

ಚರಿತ್ರೆಯನ್ನೇ ಕಟ್ಟಿ ಬೆಳೆಸಿದ ಶ್ರಮಜೀವಿಗಳ ಹೆಸರೆಲ್ಲಿ
ಸಾವಿರ ವರ್ಷದ ಸಂಸ್ಕೃತಿಗಳನ್ನು ಸೃಷ್ಟಿಸಿದವರ ಗುರುತೆಲ್ಲಿ

ದೇಶಕ್ಕೆಲ್ಲ ಅನ್ನವ ಕೊಡುವುದು ದುಡಿಯುವ ರೈತನ ಶ್ರಮವು
ಉಣ್ಣುವ ಉಡುವ ಎಲ್ಲ ವಸ್ತುಗಳ ಮೂಲದಲ್ಲಿದೆ ಶ್ರಮವು

ರಸ್ತೆ ಬೀದಿಗಳ ಮಹಲು ಮನೆಗಳ ಕಟ್ಟುವುದೆಲ್ಲ ಶ್ರಮವೆ
ನಾಗರಿಕತೆಗಳ ವೈಭವಗಳನ್ನು ಬೆಳೆಸಿದೆಲ್ಲ ಶ್ರಮವೆ

ಅಣೆಕಟ್ಟುಗಳ ಕಾರಖಾನೆಗಳ ನಿರ್ಮಿಸಿರುವರು ದುಡಿವವರು
ಬೆವರು ರಕ್ತಗಳ ಹರಿಸಿ ದುಡಿವವರು ಹೆಸರಿಲ್ಲದೆಯೆ ಮಡಿವವರು

ಗುಡ್ಡ ಗಣಿಗಳಲಿ ಕಬ್ಬಿಣ ಅಗೆವರು ಕಬ್ಬಿಣದಂಥಾ ದುಡಿವವರು
ದುಡಿವರ ಬೆನ್ನಿನ ಮೇಲ್ಗಡೆ ಕುಳಿತು ಮೆರೆವವರು ಹಣವುಳ್ಳವರು
ಮಂತ್ರಿ ಶಾಸಕರ ಆರಿಸಿ ಗದ್ದುಗೆಗೇರಿಸಿ ಹೊರುವರು ದುಡಿವವರು
ಸ್ವಾಮಿ ಜಗದ್ಗುರುಗಳ ಪಲ್ಲಕಿಯಲಿ ಮೆರೆಸಿ ಸಾಯುವರು ದುಡಿವವರು

ಶ್ರಮ ಜೀವಿಗಳಿಗೆ ಮೋಸವ ಮಾಡುವ ದೇಶವು ಎಂದೂ ಬೆಳೆಯೊಲ್ಲ
ಶ್ರಮ ಗೌರವವನು ಮರೆತ ಜನಾಂಗಕೆ ಪ್ರಗತಿಯ ಭವಿಷ್ಯ ಉಳಿಯೊಲ್ಲ

ಶ್ರಮ ಜೀವಿಗಿಂತ ಶ್ರೇಷ್ಠನು ಯಾರು ಅವನಿಗೆ ಎಲ್ಲರು ಸಣ್ಣವರು
ಪವಿತ್ರ ತೀರ್ಥವು ಯಾವುದು ಇಲ್ಲ ಅದುವೇ ಶ್ರಮದಾ ಬೆವರು

ಶ್ರಮವೇ ದೇಹಾರೋಗ್ಯಕ್ಕೆ ಮೂಲ ಮನದಾರೋಗ್ಯವು ಕೂಡ
ಜಪತಪ ಪೂಜಾ ಯಜ್ಞಯೋಗಗಳು ಶ್ರಮಕ್ಕೆ ಸಣ್ಣವು ನೋಡ

ಚೆಲುವಿನ ರಹಸ್ಯ ಗೆಲುವಿನ ಗುಟ್ಟು ಶ್ರಮ ಸಾಧನೆಯಲೆ ಅಡಗಿಹುದು
ದೀರ್ಘಾಧಾಯುಷ್ಯ ಶಕ್ತಿ ಸಾಮರ್ಥ್ಯ ಶ್ರಮದಿಂದ ಸಿದ್ದಿಯಾಗುವುದು

ತಲತಲಾಂತರದ ಕರ್ಮಕೌಶಲತೆ ಕಲೆ ಜಾಣ್ಮೆ ಪ್ರತಿಭೆಯೆಲ್ಲ
ಹನಿ ಹನಿ ಕೂಡಿದ ಹೊಳೆಯು ಸಂಸ್ಕೃತಿಯು
ಎಲ್ಲ ಶ್ರಮದ ಕೊಡುಗೆಯಲಾ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...