ಲೋಕದ ಮನುಜರ

ಲೋಕದ ಮನುಜರ ಚಿಂತೆಯು
ಕಾಡುವುದು ಚಿತೆಯಾಗಿ
ಚಿಂತೆಯು ಬೇಡ ಚಿತೆಯು ಬೇಡ
ಬೇಡವೇ ಬೇಡ ಅವರಿವರ ಸಹವಾಸ||

ಸಂಸಾರ ನಿಸ್ಸಾರ ಬಂಧು ಬಳಗ
ತಾನವಿತ್ತಾನ ಬಿತ್ತು ನೆಮ್ಮದಿಯ
ಬೀಜ ಮರವಾಗೀನ ಫಲ ರುಚಿಯು
ಚಿಂತೆಯು ಬೇಡವೇ ಬೇಡ ನಮಗೆ||

ಆಸರೆ ಸೆರೆಯಾಸರೆ ಬದುಕು
ಬವಣೆ ಚಿತ್ತಾರ ಬಿಡಿಸಿ
ರೂಪವ ಕೊಟ್ಟು ಅಂಗೈಯಲಿ ಆಡಿಸಿ
ನೋಡುವ ಚಿಂತೆ ಬೇಡವೇ ಬೇಡ ನಮಗೆ||

ಜಾತಿ ನೀತಿ ಜಗತ್ತು ತೂಗಿ
ತೂಗುವ ಅವರವರ ಭಾವಕ್ಕೆ
ಜೀವಾಳಕ್ಕೆ ಸರಿದೂಗುವ ಕಾಯಕ
ಚಿಂತೆಯು ಬೇಡವೇ ಬೇಡ ನಮಗೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇಶಭಾಷೆಗಳನ್ನು ಬೂದಿ ಮಾಡುವ ಬಜೆಟ್ ಭಾಷೆ
Next post ಕವಿ-ಕವನ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…