ಕನ್ನಡದಾ ಬಾವುಟ

ಕನ್ನಡದಾ ಬಾವುಟವ ಹಾರಿಸಬನ್ನಿ
ಕನ್ನಡದಾ ಕಹಳೆಯ ಮೊಳಗ ಬನ್ನಿ
ಕನ್ನಡದಾ ದೀವಿಗೆ ನೀವಾಗಿ ಬನ್ನಿ
ಕನ್ನಡಿಗರು ನಾವೆಂದು ಎದೆ ತಟ್ಟಿ ಬಾಳಿ||

ಕೆಂಪು ಹಳದಿ ಬಣ್ಣದ ಧ್ವಜವ ಹಿಡಿದು
ವೀರಗಾಥೆಯ ತಿಲಕವನ್ನು ಹಣೆಯ ಮೇಲೆ ಇಟ್ಟು
ಐಕ್ಯತೆಯ ಭಾವುಕದ ಮೆರಗನ್ನು ಕೊಟ್ಟು
ಕನ್ನಡಿಗರು ನಾವೆಂದು ಎದೆ ತಟ್ಟಿ ಬಾಳಿ ||

ಇಟ್ಟ ಹೆಜ್ಜೆ ತೊಟ್ಟ ದೀಕ್ಷೆಕೊಟ್ಟ ಭಾಷೆ
ಮಾನರಕ್ಷೆ ಅಭಿಮಾನ ಪ್ರಾಣಕ್ಕೆ ಮಿಗಿಲು
ಇತಿಹಾಸ ಸಂಸ್ಕೃತಿಯ ಒಕ್ಕಲುತನ ಬೆಳೆದು
ಕನ್ನಡಿಗರ ಕೀರ್ತಿ ಉತ್ತುಂಗವೇರಲಿ ಎಂದೆಂದು||

ತನುಮನ ಕನ್ನಡ ನುಡಿ ಕನ್ನಡ ಬಾಳ್ಗೆ
ಜನಕನ್ನಡ ಗಣಕನ್ನಡ ನಡೆಕನ್ನಡ ಏಳ್ಗೆ
ಸಿರಿತನದ ಅನುಭಾವ ಹಸಿರಾಗಿರಲಿ ಗೆಲ್ಗೆ
ಕನ್ನಡಿಗರು ನಾವೆಂದು ಮನ ಮುಟ್ಟಿ ಕಾಣ್ವೆ||
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಚ್ಚಿ ಜೇನ್ ಪಾದರಿಯ ಜೊತೆ ಮಾತಾಡಿದ್ದು
Next post ನಂಗೊತ್ತಿಲ್ಲ ಸ್ವಾಮೀ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…