Home / ಕವನ / ಅನುವಾದ / ಹುಚ್ಚಿ ಜೇನ್ ಪಾದರಿಯ ಜೊತೆ ಮಾತಾಡಿದ್ದು

ಹುಚ್ಚಿ ಜೇನ್ ಪಾದರಿಯ ಜೊತೆ ಮಾತಾಡಿದ್ದು

ಮೂಲ: ವಿಲಿಯಂ ಬಟ್ಲರ್ ಏಟ್ಸ್

ದಾರಿಯಲ್ಲಿ ಎದುರಾದರು ಪಾದ್ರಿ
ಮಾತ ಮಧ್ಯೆ ಎಚ್ಚರಿಸಿದರು.
‘ಚಪ್ಪಟೆ ಮೊಲೆಗಳು ಜೋತಿವೆ ಕೆಳಗೆ,
ಬತ್ತಿ ಹೋಗುತಿವೆ ನಾಳಗಳು;
ವಾಸಿಸು ಹೆಣ್ಣೆ ದೇವಸೌಧದಲಿ,
ತಕ್ಕುವಲ್ಲ ಕೊಳೆರೊಪ್ಪಗಳು’.

ಕೂಗಿ ಹೇಳಿದೆನು ಪಾದ್ರಿಗೆ ನಾನು
‘ಸೊಗಸಿಗು ಹೊಲಸಿಗು ನಂಟು ಇದೆ
ಬೇಕೇ ಬೇಕು ಸೊಗಸಿಗೆ ಹೊಲಸು.
ಗೆಳೆಯರಿಲ್ಲ ನಿಜ, ಆದರದು
ದೇಹದ ದೈನ್ಯದ, ಹೃದಯದ ಹೆಮ್ಮೆಯ ಗರಡಿಯಲ್ಲಿ ಕಲಿತಂಥದ್ದು
ಗೋರಿಯಂತೆಯೇ ಹಾಸಿಗೆ ಕೂಡ ಅಲ್ಲಗಳೆಯದ ಸತ್ಯವದು.

ಎಷ್ಟೆ ಹಮ್ಮಿರಲಿ ಒಲಿದ ಹೆಣ್ಣಿಗೆ
ಎಷ್ಟೇ ಸೆಟೆದಿರಲಿ;
ಪ್ರೇಮ ನಿಲ್ಲಿಸಿದೆ ತನ್ನ ಮಹಲನ್ನ
ಉಚ್ಚೆಯ ಬಚ್ಚಲಲಿ;
ಹರಿಯದೆ ಯಾವುದು ಹೇಗಾದೀತು ತನಗೆ ತಾನೆ ಪೂರ್‍ಣ?
ಹರಿಯದೆ ಹೇಗೆ ಇಡಿಯಾದೀತು ಕರೆಯದೆ ಇನ್ನೊಂದನ್ನ?
*****
ಭೋಗ ಮತ್ತು ವಿರಾಗಪರವಾದ ಎರಡೂ ನಿಲುವುಗಳ ಢಿಕ್ಕಿಯನ್ನು ಕವಿ ಈ ಪದ್ಯದಲ್ಲಿ ಚಿತ್ರಿಸುತ್ತಾನೆ. ತಾನು ಕಂಡಿದ್ದ ಮೇರಿ ಎಂಬ ಹುಚ್ಚಿ ಹೆಣ್ಣೊಬ್ಬಳನ್ನು ಒಂದು ಪಾತ್ರವಾಗಿ ಹೊರಳಿಸಿಕೊಂಡು ಏಟ್ಸ್ ಎಂಟು ಪದ್ಯಗಳನ್ನು ಬರೆದಿದ್ದಾನೆ. ಇದು ಅವುಗಳಲ್ಲಿ ಹೆಚ್ಚು ಪ್ರಸಿದ್ಧವಾದದ್ದು. ‘ಜ್ಞಾನಿ’ಯಾದ ಬಿಷಪ್ಪನಿಗೆ ‘ಹುಚ್ಚಿ’ಯಾದ ಜೇನ್ ಕೊಡುವ ಉತ್ತರ ಮಾರ್‍ಮಿಕವಾಗಿದೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...