Home / ಕಥೆ / ಸಣ್ಣ ಕಥೆ / ಸರ್ವಾಧಿಕಾರಿ ನಂಜರಾಜಯ್ಯ

ಸರ್ವಾಧಿಕಾರಿ ನಂಜರಾಜಯ್ಯ

೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ.

ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲೆ ಈರ್ವರೂ ಪ್ರಧಾನಿಯ ಕೆಲಸದಲ್ಲಿದ್ದ ಕನ್ನಂಬಾಡಿ ವೆಂಕಟಪತಯ್ಯನೆಂಬಾತನನ್ನು ಸೇರಿಸಿಕೊಂಡು ಆಡಳಿತವನ್ನು ಮೊದಲಿಟ್ಟರು. ಮೂವರೂ ಸೇರಿ ಅರಮನೆಯ ಆದಾಯದಲ್ಲಿ ಸಾಧ್ಯವಾದಷ್ಟು ಹಣವನ್ನು ತಾವೇ ಸ್ವಂತ ವೆಚ್ಚಕ್ಕಾಗಿ ಉಪಯೋಗಿಸಿಕೊಂಡುದಲ್ಲದೆ ತನ್ನ ಊಳಿಗದವರು ಲಂಚ ತಿಂದು ಶಿಫಾರಸುಮಾಡಿದವರಿಗೆ ಕೆಲಸಗಳನ್ನು ಮಾಡಿಸುತ್ತಲಿದ್ದರು. ಅಯೋಗ್ಯರಾದವರು ಅಧಿಕಾರಿಗಳಾದುದಲ್ಲದೆ ರಾಜ್ಯದ ಆದಾಯವು ಈ ಮೂವರ ಮತ್ತು ಅವರ ಅನುಚರರ ಪಾಲಾಗುತ್ತಿತ್ತು.

ಹೀಗೆ ೫-೬ ವರ್ಷಗಳು ನಡೆದವು. ವಂಚನೆಯಿಂದ ಮೂವರೂ ಹಣವನ್ನು ಸಂಪಾದಿಸಿದ ನಂಜರಾಜಯ್ಯನೂ ಐಶ್ವರ್ಯವನ್ನು ಸೇಕರಿಸಿಕೊಂಡಿದ್ದನು. ಆತನಿಗೆ ಮಕ್ಕಳಿರಲಿಲ್ಲ. ಅಲ್ಲದೆ ಅಂತ್ಯಕಾಲವು ಸಮೀಪವಾಯಿತು. ಆಗ ನಂಜರಾಜಯ್ಯನು ತಾನು ಮಾಡಿದ ನೀಚಕಾರ್ಯಕ್ಕೆ ಮನಸ್ಸಿನಲ್ಲಿ ನೊಂದುಕೊಂಡನು. ತಾನು ಗಳಿಸಿಟ್ಟ ದ್ರವ್ಯವು ರಾಜರದೇ ಆಗಿದ್ದುದರಿಂದ ತನ್ನ ಕುಟುಂಬ ಚಂದಾಯಮ್ಮಣ್ಣಿಯ ಜೀವನಕ್ಕೆ ಮಾತ್ರ ಸ್ವಲ್ಪ ಉಳಿಸಿಕೊಂಡು ಉಳಿದ ೨ ಲಕ್ಷ ವರಹಗಳಷ್ಟು ಧನವನ್ನು ದೊರೆಗಳಿಗೆ ತಂದೊಪ್ಪಿಸಿದನು. ಮಾತುಶ್ರೀಯವರನ್ನು ಕಂಡು ಯಥಾರ್ಥವನ್ನು ತಿಳಿಸಿ ದುಷ್ಟರ ವಿಷಯವಾಗಿ ಎಚ್ಚರಿಕೆ ಕೊಟ್ಟು ಪಶ್ಚಾತ್ತಾಪಡುತ್ತ ಈತನು ೧೭೩೯ರಲ್ಲಿ ಶ್ರೀರಂಗಪಟ್ಟಣದಲ್ಲಿಯೇ ಕಾಲವಾದನು. ಸಾಯುವ ಕಾಲದಲ್ಲಿ “ನನ್ನ ತರುವಾಯು ನನ್ನ ಪದವಿಗೆ ದಳವಾಯಿ ದೇವರಾಜಯ್ಯನ ತಮ್ಮ ಕರಾಚೂರಿ ನಂಜರಾಜನು ಬಂದರೆ ತೊಂದರೆಯೇ ಸಂಭವಿಸುವುದು” ಎಂದು ಎಚ್ಚರಿಸಿದ್ದನು. ಆದರೂ ಸರ್ವಾಧಿಕಾರಿತನವು ಆ ಕರಾಚರಿ ನಂಜರಾಜಯ್ಯನಿಗೇ ಪ್ರಾಪ್ತವಾಯಿತು.
*****
[ವಂಶರತ್ನಾಕರ ಪುಟ ೧೬೫ ; ವಂಶಾವಳಿ-ಪುಟ ೧೭೫-೧೭೬; ಮತ್ತು ವಿಲ್ಕ್ಸ್, ಮುಂದಿನ ಕಥೆಗಳಲ್ಲಿ ವಿಲ್ಕ್ಸ್ ಗ್ರಂಥವನ್ನೇ ಹೆಚ್ಚಾಗಿ ಅವಲಂಬಿಸಿದೆ]

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...