Home / ಕವನ / ಕವಿತೆ / ನಿಂಗ್ ನೆಪ್ಪೈತ ನಂಜಿ?

ನಿಂಗ್ ನೆಪ್ಪೈತ ನಂಜಿ?

ಒಂದೇ ಕೇರೀಲ್ ಉಟ್ಟ್ ಬೆಳದೋರು
ಒಂದೇ ಬೀದೀಲ್ ಒತ್ ಕಳದೋರು
ನಾವ್ಗೊಳ್ ಆಡಿ ಮಾಡಿದ್ದೆಲ್ಲಾ
ನಿಂಗ್ ನೆಪ್ಪೈತ ನಂಜಿ?
ಕಲ್ಲು ಬಕ್ರೆ ಆರೀಸ್ಕೋಂತ
ಗಂಡ ಯೆಡ್ತೀರ್ ಸಂಸಾರಾಂತ
ಚಿಕ್ಕಂದ್ನಲ್ ನಾವ್ ಆಟಗೊಳ್ ಆಡಿದ್
ನಿಂಗ್ ನೆಪ್ಪೈತ ನಂಜಿ? ೧

ರತ್ನ ನಂಜಿ ಗಂಡ ಯೆಡ್ತಿ
ಅಂತ ಕೇರೀವ್ರ್ ಗೇಲೀನ್ ಇಡ್ದಿ
ನಾಚ್ಕೊಂಡ ಮನೆಯಾಗ್ ಔತ್ಕೊಂಡಿದ್ದು
ನಿಂಗ್ ನೆಪ್ಪೈತ ನಂಜಿ?
ಲಗ್ನಕ್ ಮುಂಚೆ ತೋಟಕ್ ಓಗಿ
ಊವ ಕಿತ್ತಿ ನಿಂಗೆ ಕೂಗಿ
ನನ್ ನಂಜೀಂತ ನಾ ಮುಡಿಸಿದ್ದು
ನಿಂಗ್ ನೆಪ್ಪೈತ ನಂಜಿ? ೨

ಲಗ್ನದ್ ದಿವಸ ನಿನ್ ಮೊಕ್ ನಾನು
ಬಂಡಾರಾನ ಅಣೆ ತುಂಬಾನು
ಬಳದಿ ಕನಡಿ ತೋರ್‍ಸಿದ್ ನಿಂಗೆ
ನಿಂಗ್ ನೆಪ್ಪೈತ ನಂಜಿ?
ನೀ ಮನೆಗ್ ಒಸದಾಗ್ ಬಂದೋಳಂತ
ನಿನ್ ಮೊಕಾನೆ ನೋಡಿಗ್ಕೋಂತ
ಆವೊತ್‌ ಚಾಕ್ರೀಗ್ ಓಗ್ನೇನಿಲ್ಲ
ನಿಂಗ್ ನೆಪ್ಪೈತ ನಂಜಿ? ೩

ವೊಸದಾಗ್ ಇಬ್ರೆ ಸಂಸಾರ್ ಊಡಿ
ಯೆಸರು ಪಾಯಸ ಊಟಾ ಮಾಡಿ
ನೆನೆದರ್ ನನಗೇ ನೆಗ ಬರತೈತೆ-
ನಿಂಗ್ ನೆಪ್ಪೈತ ನಂಜಿ?
‘ಇದ್ದಿದ್ ದಿವಸ ಯೆಸರು ಯಿಟ್ಟು
ಇಲ್ದಿದ್ರ್ ಒಟ್ಟೇಗ್ ಬಟ್ಟೇನ್ ಕಟ್ಟು’
ಅಂತ್ ಆಯಾಗಿ ಬದುಕೋಣಾಂದೊ
ನಿಂಗ್ ನೆಪ್ಪೈತ ನಂಜಿ? ೪

ಮನೆಯಾಗ್ ಒಂದ್ ದಿನ ತಿನ್ನಾಕ್ ಇಲ್ದೆ
ನನಗ್ ಇಲ್ಲಾಂತ ನೀನೂ ಒಲ್ದೆ
ಕರೆದೋರ್ ಅಟ್ಟೀಗ್ ಓಗೋಲ್ಲೇಂದದ್
ನಿಂಗ್ ನೆಪ್ಪೈತ ನಂಜಿ?
ಆವೊತ್ತೆಲ್ಲ ಯಿಟ್ಟೇ ಇಲ್ದೆ
ಸಾಯ್ತಿದ್ರೂನೆ ನೆಗತ ಸೋಲ್ದೆ
‘ಬದಕೋದ್ ತಿನ್ನಾಕೆ ಅಲ್ಲಾ’ಂತ ಅಂದದ್
ನಿಂಗ್ ನೆಪ್ಪೈತ ನಂಜಿ? ೫

ಕಷ್ಟ ಸುಕ ಏನ್ ಬಂದ್ರೂನೆ
ನಿಂಗೆ ನಾನೆ ನಂಗೆ ನೀನೆ
ಮುಳುಗೋನ್ ಬೆನ್ನಿನ್ ಬೆಂಡಿದ್ದಂಗೆ
ನಿಂಗ್ ನೆಪ್ಪಿರಲಿ ನಂಜಿ!
ಬಟ್ಟೆ ಒಟ್ಟೇಗ್ ಇಲ್ದಿದ್ರೂನೆ
ನಂ ನಂ ಪ್ರೀತಿ ಇರೊವರ್‍ಗೂನೆ
ದೇ‌ಆ ಓದ್ರು ಮನಸೋಗಾಲ್ಲ-
ನಿಂಗ್ ನೆಪ್ಪಿರಲಿ ನಂಜಿ! ೬
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...