Home / ಕವನ / ಕವಿತೆ / ನಿಂಗ್ ನೆಪ್ಪೈತ ನಂಜಿ?

ನಿಂಗ್ ನೆಪ್ಪೈತ ನಂಜಿ?

ಒಂದೇ ಕೇರೀಲ್ ಉಟ್ಟ್ ಬೆಳದೋರು
ಒಂದೇ ಬೀದೀಲ್ ಒತ್ ಕಳದೋರು
ನಾವ್ಗೊಳ್ ಆಡಿ ಮಾಡಿದ್ದೆಲ್ಲಾ
ನಿಂಗ್ ನೆಪ್ಪೈತ ನಂಜಿ?
ಕಲ್ಲು ಬಕ್ರೆ ಆರೀಸ್ಕೋಂತ
ಗಂಡ ಯೆಡ್ತೀರ್ ಸಂಸಾರಾಂತ
ಚಿಕ್ಕಂದ್ನಲ್ ನಾವ್ ಆಟಗೊಳ್ ಆಡಿದ್
ನಿಂಗ್ ನೆಪ್ಪೈತ ನಂಜಿ? ೧

ರತ್ನ ನಂಜಿ ಗಂಡ ಯೆಡ್ತಿ
ಅಂತ ಕೇರೀವ್ರ್ ಗೇಲೀನ್ ಇಡ್ದಿ
ನಾಚ್ಕೊಂಡ ಮನೆಯಾಗ್ ಔತ್ಕೊಂಡಿದ್ದು
ನಿಂಗ್ ನೆಪ್ಪೈತ ನಂಜಿ?
ಲಗ್ನಕ್ ಮುಂಚೆ ತೋಟಕ್ ಓಗಿ
ಊವ ಕಿತ್ತಿ ನಿಂಗೆ ಕೂಗಿ
ನನ್ ನಂಜೀಂತ ನಾ ಮುಡಿಸಿದ್ದು
ನಿಂಗ್ ನೆಪ್ಪೈತ ನಂಜಿ? ೨

ಲಗ್ನದ್ ದಿವಸ ನಿನ್ ಮೊಕ್ ನಾನು
ಬಂಡಾರಾನ ಅಣೆ ತುಂಬಾನು
ಬಳದಿ ಕನಡಿ ತೋರ್‍ಸಿದ್ ನಿಂಗೆ
ನಿಂಗ್ ನೆಪ್ಪೈತ ನಂಜಿ?
ನೀ ಮನೆಗ್ ಒಸದಾಗ್ ಬಂದೋಳಂತ
ನಿನ್ ಮೊಕಾನೆ ನೋಡಿಗ್ಕೋಂತ
ಆವೊತ್‌ ಚಾಕ್ರೀಗ್ ಓಗ್ನೇನಿಲ್ಲ
ನಿಂಗ್ ನೆಪ್ಪೈತ ನಂಜಿ? ೩

ವೊಸದಾಗ್ ಇಬ್ರೆ ಸಂಸಾರ್ ಊಡಿ
ಯೆಸರು ಪಾಯಸ ಊಟಾ ಮಾಡಿ
ನೆನೆದರ್ ನನಗೇ ನೆಗ ಬರತೈತೆ-
ನಿಂಗ್ ನೆಪ್ಪೈತ ನಂಜಿ?
‘ಇದ್ದಿದ್ ದಿವಸ ಯೆಸರು ಯಿಟ್ಟು
ಇಲ್ದಿದ್ರ್ ಒಟ್ಟೇಗ್ ಬಟ್ಟೇನ್ ಕಟ್ಟು’
ಅಂತ್ ಆಯಾಗಿ ಬದುಕೋಣಾಂದೊ
ನಿಂಗ್ ನೆಪ್ಪೈತ ನಂಜಿ? ೪

ಮನೆಯಾಗ್ ಒಂದ್ ದಿನ ತಿನ್ನಾಕ್ ಇಲ್ದೆ
ನನಗ್ ಇಲ್ಲಾಂತ ನೀನೂ ಒಲ್ದೆ
ಕರೆದೋರ್ ಅಟ್ಟೀಗ್ ಓಗೋಲ್ಲೇಂದದ್
ನಿಂಗ್ ನೆಪ್ಪೈತ ನಂಜಿ?
ಆವೊತ್ತೆಲ್ಲ ಯಿಟ್ಟೇ ಇಲ್ದೆ
ಸಾಯ್ತಿದ್ರೂನೆ ನೆಗತ ಸೋಲ್ದೆ
‘ಬದಕೋದ್ ತಿನ್ನಾಕೆ ಅಲ್ಲಾ’ಂತ ಅಂದದ್
ನಿಂಗ್ ನೆಪ್ಪೈತ ನಂಜಿ? ೫

ಕಷ್ಟ ಸುಕ ಏನ್ ಬಂದ್ರೂನೆ
ನಿಂಗೆ ನಾನೆ ನಂಗೆ ನೀನೆ
ಮುಳುಗೋನ್ ಬೆನ್ನಿನ್ ಬೆಂಡಿದ್ದಂಗೆ
ನಿಂಗ್ ನೆಪ್ಪಿರಲಿ ನಂಜಿ!
ಬಟ್ಟೆ ಒಟ್ಟೇಗ್ ಇಲ್ದಿದ್ರೂನೆ
ನಂ ನಂ ಪ್ರೀತಿ ಇರೊವರ್‍ಗೂನೆ
ದೇ‌ಆ ಓದ್ರು ಮನಸೋಗಾಲ್ಲ-
ನಿಂಗ್ ನೆಪ್ಪಿರಲಿ ನಂಜಿ! ೬
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...