ಕಡೆದ ಕಡಲಿನ ಮೊದಲ ಫಲದಂತೆ, ಕಡೆಗೊಗೆವ
ಸೊದೆಗೆ ಹಿರಿಯಣ್ಣನಂದದೊಳು ಭಾರತದ ಜನ-
ದುದಧಿಯೊಳಗಿಂದು ಮೂಡುತಿದೆ ಹಾಲಾಹಲಂ,
ನಡೆದೆಲ್ಲ ಪಾಪಗಳ ಕೋಲಾಹಲಂ, ಕರ್ಮ
ದಾವಾನಲಂ; ನಿಷ್ಕೃತಿಯ ರೂಪಮಿದ ತಾಳಿ
ಬದುಕುವೆವೆ ಬದುಕುಂಟು, ಸಂಮೋದವುಂಟು, ಸಂ-
ಪದವುಂಟು; ತಾಳೆವೇ ಸತ್ತೆವಾವೀ ವಿಷವ
ಭಾವಿಪರದಾರು, ಸೈರಿಪರಾರು? ಮೊರೆಯಾರ್ಗೆ?
ಮೃತ್ಯುಂಜಯಾ ನಮ್ಮ ಧೃತಿಗೈತರೈ ಎಂದು,
ಮರುಳ್ಗಳೊಡೆಯನೆ ನಮ್ಮ ಸಹನೆಗಿಂಬಾಗೆಂದು,
ಗರವ ಕುಡಿದನೆ ನಮ್ಮ ಮೌನದೊಳು ನಿಲ್ಲೆಂದು,
ಸತ್ಯನೆ ಸದಾಶಿವನೆ ಕರುಣಿ, ಕರುಣಿಪುದೆಂದು-
ಅಣುಮಹತ್ತುಗಳಲ್ಲಿ ಪರಮ ಸಂಯಮವ ತೋರಿ
ಜಗವ ನಡೆಸುವ ಶಿವಕೆ ಮೊರೆಯಿಡುವ ಬಾರಿ ಬಾರಿ.
*****
Related Post
ಸಣ್ಣ ಕತೆ
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
-
ಏಡಿರಾಜ
ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
-
ಪ್ರೇಮನಗರಿಯಲ್ಲಿ ಮದುವೆ
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…