ಇರುವೆಗಳಿದಾವೆ

ಇರುವೆಗಳಿದಾವೆ ಜಾಗ್ರತೆ
ಪುಟಾಣಿ ಇರುವೆಗಳು
ಕಟಾಣಿ ಇರುವೆಗಳು

ಎತ್ತಲೋ ಹೊರಟಿರ್‍ತ
ಇತ್ತ ನೋಡೋಣಾಂತ
ಸುತ್ತ ಬಂದಿವೆ
ನಮ್ಮ ಅಟ್ಟುಂಬೊಳಕ್ಕೆ

ಸಕ್ಕರೆ ತೆಗೆವಾಗ ಚೆಲ್ಲಿಬಿಟ್ಟೀರಿ
ಸಕ್ಕರೆ ಎಂದರವಕ್ಕೆ ಪಂಚಪ್ರಾಣ
ಬೆಲ್ಲದ ಡಬ್ಬವ ತೆರೆದೇ ಇಟ್ಟೀರಿ
ಬೆಲ್ಲ ಎಂದರವಕ್ಕೆ ಜೀವ
ಜೇನಿನ ಮುಚ್ಚಳ ಹಾಕಲು ಮರೆತೀರಿ
ಜೇನೆಂದರವಕ್ಕೆ ತಡೆಯದ ಮೋಹ

ಜೇನಿನ ಹಾಗೇ ತೆರೆದಿಡಬೇಡಿ
ಬಿದ್ದರೆ ನಿಮಗೆ ಜೇನಿನ ಕೇಡು
ಬಿದ್ದರೆ ಅವುಗಳಿಗೆ ಜೀವವೆ ಕೇಡು

ನಿಮ್ಮ ದೈತ್ಯಪಾದಗಳ ಅವರ ಮೇಲಿರಿಸದಿರಿ
ಮಹಾಬಾಹುಗಳ ಹೊಡೆತ ಹಾಕದಿರಿ
ಕಟ್ಟಿರುವೆಯಾದರೆ ದೂರವಿಡಿ
ಉಳಿದಿರುವೆಯಾದರೆ ಊದಿಬಿಡಿ
*****

One thought on “0

  1. ಚಂದದ ಕವಿತೆ.ಕವಿತೆ ಎಂದರೆ ತಿರುಮೇಶರು ತಿರುಮಲೇಶರು ಎಂದರೆ ಕವಿತೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹನೆ-ಶಿವ
Next post ಉಮರನ ಒಸಗೆ – ೩೩

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…