ಮಿಲೆ ಸುರ್ ಮೇರಾ ತುಮ್ಹಾರಾ

ಗಾನ ಗಂಧರ್‍ವ ಸೃಷ್ಟಿಸಿದ
ಸಂಗೀತ ಲೋಕದಲ್ಲಿ ಎದ್ದೆದ್ದು
ಬಡಿದ ಘನ ಗಂಭೀರ
ಸಮುದ್ರದಲೆಗಳು ಸ್ಥಬ್ಧವಾಗಿವೆ.

ಮಿಲೆ ಸುರ್ ಮೇರ್ ತುಮ್ಹಾರಾ
ತೊ ಸುರ್ ಬನೇ ಹಮಾರಾ
ಭಾರತವನ್ನೊಂದುಗೂಡಿಸಿದ ತತ್ವ
ಎಂತಹ ಮೋಡಿ ಆ ಗಾರುಡಿಗನದು?

ರೋಣದ ನೆಲದಲ್ಲಿ ಹುಟ್ಟಿದ
ಭಾರತ ರತ್ನದ ಧ್ವನಿಗೆ
ಬೇರೆ ಸರಿಸಾಟಿ ಬೇಕೆ?
ತನ್ನ ಧ್ವನಿಗೆ ತಾನೇ ಒಡೆಯ.

ನಾದ ದೇವತೆಯನು ನಂಬಿ
ಭಾಗ್ಯದ ಲಕ್ಷ್ಮೀಯನ್ನು ಕರೆದು
ಲೀನವಾದ ನಾದ ಬ್ರಹ್ಮ
ದೇಶದಲಿ ಆತ್ಮಸಾಕ್ಷಿ ಬಿಂಬಿಸಿದ
ತಕರಾರಿಲ್ಲದ ಸೌಜನ್ಯವಂತ ಸಂತ.

ಸುಡುಬಿಸಿಲಲಿ ಬರಿಗಾಲಿನ
ನಡಿಗೆ, ಗುರುಮನೆಗೆ ನೀರುಹೊತ್ತು
ಸಂಗೀತ ಕಲಿತ ಆ ಭೀಮ
ಶರೀರ ವೃದ್ಧವಾದರೇನಂತೆ
ಗಾಯಕನಿಗೆ ವೃದ್ಧಾಪ್ಯವಿಲ್ಲ.

ಬಡಕಲು ಶರೀರದ ಭೀಮ
ನಾದಬ್ರಹ್ಮನ ಕಿರುಣಾ ಘರಾಣಾ
ಭಾವಕ್ಕೆ ದನಿ ತುಂಬಿದ ಅಮರ ಕಾವ್ಯ
ಪರವಶಗೊಳಿಸಿದ ಬಂದಿಶ್ ಮಾಂತ್ರಿಕ.

ನಾದದಲಿ ಭೀಷ್ಮ ಪಿತಾಮಹ
ಸಂಗೀತ ಲೋಕದ ತಾನಸೇನ
ಭೈರವಿ ಹಾಡಿ ಬದುಕಿಗೆ ವಿದಾಯ
ಹೃದಯದಲಿ ನೆಲೆ ನಿಂತವನು
ಗಡಿಗಳ ಸಿಮೋಲ್ಲಂಘನ.

ಮರೆಯದ ಮಾಣಿಕ್ಯದ ಕಣ್ಮರೆ
ನಾದ ಲೋಕವೊಂದರ ಯುಗಾಂತ್ಯ
ಮಾಧುಟ್ಯ ಸೂರ್‍ಯನ ಅಂತ್ಯ
ಸಾಧನೆಗೆ ಸೀಮೆಗಳ ನಿರ್‍ಬಂಧವಿಲ್ಲ
ಗಾಯನಶಾಶ್ವತ, ದೇಹ ನಶ್ಚರ.

ಮೌನವಾಗಿ ಲೀನವಾಗಿದೆ
ಹಿಮಾಲಯದ ಮೇರು ಶಿಖರ.
ಸೂರ್‍ಯ ಅಸ್ತಂಗತನಾದ ಸುದ್ದಿ ಕೇಳಿ
ಅಲ್ಲಾಡದೇ ನಿಂತಿವೆ ನೋಡು
ಗಿರಿ, ಶಿಖರ, ಗಾಳಿ, ನದಿ, ಲೋಕ
ಸಾವು ನಿಶ್ಚಿತ, ಧ್ವನಿ ಅಮರ.
*****
(ಭೀಮ್‌ ಸೇನ್ ಜೋಶಿಯವರು ನಿಧನರಾದ ಸಂದರ್‍ಭ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೀಗಾದರೆ ಮುಂದಿನ ಗತಿ?
Next post ಸಹನೆ-ಶಿವ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…