Home / ಕವನ / ಕವಿತೆ / ಮಿಲೆ ಸುರ್ ಮೇರಾ ತುಮ್ಹಾರಾ

ಮಿಲೆ ಸುರ್ ಮೇರಾ ತುಮ್ಹಾರಾ

ಗಾನ ಗಂಧರ್‍ವ ಸೃಷ್ಟಿಸಿದ
ಸಂಗೀತ ಲೋಕದಲ್ಲಿ ಎದ್ದೆದ್ದು
ಬಡಿದ ಘನ ಗಂಭೀರ
ಸಮುದ್ರದಲೆಗಳು ಸ್ಥಬ್ಧವಾಗಿವೆ.

ಮಿಲೆ ಸುರ್ ಮೇರ್ ತುಮ್ಹಾರಾ
ತೊ ಸುರ್ ಬನೇ ಹಮಾರಾ
ಭಾರತವನ್ನೊಂದುಗೂಡಿಸಿದ ತತ್ವ
ಎಂತಹ ಮೋಡಿ ಆ ಗಾರುಡಿಗನದು?

ರೋಣದ ನೆಲದಲ್ಲಿ ಹುಟ್ಟಿದ
ಭಾರತ ರತ್ನದ ಧ್ವನಿಗೆ
ಬೇರೆ ಸರಿಸಾಟಿ ಬೇಕೆ?
ತನ್ನ ಧ್ವನಿಗೆ ತಾನೇ ಒಡೆಯ.

ನಾದ ದೇವತೆಯನು ನಂಬಿ
ಭಾಗ್ಯದ ಲಕ್ಷ್ಮೀಯನ್ನು ಕರೆದು
ಲೀನವಾದ ನಾದ ಬ್ರಹ್ಮ
ದೇಶದಲಿ ಆತ್ಮಸಾಕ್ಷಿ ಬಿಂಬಿಸಿದ
ತಕರಾರಿಲ್ಲದ ಸೌಜನ್ಯವಂತ ಸಂತ.

ಸುಡುಬಿಸಿಲಲಿ ಬರಿಗಾಲಿನ
ನಡಿಗೆ, ಗುರುಮನೆಗೆ ನೀರುಹೊತ್ತು
ಸಂಗೀತ ಕಲಿತ ಆ ಭೀಮ
ಶರೀರ ವೃದ್ಧವಾದರೇನಂತೆ
ಗಾಯಕನಿಗೆ ವೃದ್ಧಾಪ್ಯವಿಲ್ಲ.

ಬಡಕಲು ಶರೀರದ ಭೀಮ
ನಾದಬ್ರಹ್ಮನ ಕಿರುಣಾ ಘರಾಣಾ
ಭಾವಕ್ಕೆ ದನಿ ತುಂಬಿದ ಅಮರ ಕಾವ್ಯ
ಪರವಶಗೊಳಿಸಿದ ಬಂದಿಶ್ ಮಾಂತ್ರಿಕ.

ನಾದದಲಿ ಭೀಷ್ಮ ಪಿತಾಮಹ
ಸಂಗೀತ ಲೋಕದ ತಾನಸೇನ
ಭೈರವಿ ಹಾಡಿ ಬದುಕಿಗೆ ವಿದಾಯ
ಹೃದಯದಲಿ ನೆಲೆ ನಿಂತವನು
ಗಡಿಗಳ ಸಿಮೋಲ್ಲಂಘನ.

ಮರೆಯದ ಮಾಣಿಕ್ಯದ ಕಣ್ಮರೆ
ನಾದ ಲೋಕವೊಂದರ ಯುಗಾಂತ್ಯ
ಮಾಧುಟ್ಯ ಸೂರ್‍ಯನ ಅಂತ್ಯ
ಸಾಧನೆಗೆ ಸೀಮೆಗಳ ನಿರ್‍ಬಂಧವಿಲ್ಲ
ಗಾಯನಶಾಶ್ವತ, ದೇಹ ನಶ್ಚರ.

ಮೌನವಾಗಿ ಲೀನವಾಗಿದೆ
ಹಿಮಾಲಯದ ಮೇರು ಶಿಖರ.
ಸೂರ್‍ಯ ಅಸ್ತಂಗತನಾದ ಸುದ್ದಿ ಕೇಳಿ
ಅಲ್ಲಾಡದೇ ನಿಂತಿವೆ ನೋಡು
ಗಿರಿ, ಶಿಖರ, ಗಾಳಿ, ನದಿ, ಲೋಕ
ಸಾವು ನಿಶ್ಚಿತ, ಧ್ವನಿ ಅಮರ.
*****
(ಭೀಮ್‌ ಸೇನ್ ಜೋಶಿಯವರು ನಿಧನರಾದ ಸಂದರ್‍ಭ)

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...