Home / ಕವನ / ಕವಿತೆ / ಮಿಲೆ ಸುರ್ ಮೇರಾ ತುಮ್ಹಾರಾ

ಮಿಲೆ ಸುರ್ ಮೇರಾ ತುಮ್ಹಾರಾ

ಗಾನ ಗಂಧರ್‍ವ ಸೃಷ್ಟಿಸಿದ
ಸಂಗೀತ ಲೋಕದಲ್ಲಿ ಎದ್ದೆದ್ದು
ಬಡಿದ ಘನ ಗಂಭೀರ
ಸಮುದ್ರದಲೆಗಳು ಸ್ಥಬ್ಧವಾಗಿವೆ.

ಮಿಲೆ ಸುರ್ ಮೇರ್ ತುಮ್ಹಾರಾ
ತೊ ಸುರ್ ಬನೇ ಹಮಾರಾ
ಭಾರತವನ್ನೊಂದುಗೂಡಿಸಿದ ತತ್ವ
ಎಂತಹ ಮೋಡಿ ಆ ಗಾರುಡಿಗನದು?

ರೋಣದ ನೆಲದಲ್ಲಿ ಹುಟ್ಟಿದ
ಭಾರತ ರತ್ನದ ಧ್ವನಿಗೆ
ಬೇರೆ ಸರಿಸಾಟಿ ಬೇಕೆ?
ತನ್ನ ಧ್ವನಿಗೆ ತಾನೇ ಒಡೆಯ.

ನಾದ ದೇವತೆಯನು ನಂಬಿ
ಭಾಗ್ಯದ ಲಕ್ಷ್ಮೀಯನ್ನು ಕರೆದು
ಲೀನವಾದ ನಾದ ಬ್ರಹ್ಮ
ದೇಶದಲಿ ಆತ್ಮಸಾಕ್ಷಿ ಬಿಂಬಿಸಿದ
ತಕರಾರಿಲ್ಲದ ಸೌಜನ್ಯವಂತ ಸಂತ.

ಸುಡುಬಿಸಿಲಲಿ ಬರಿಗಾಲಿನ
ನಡಿಗೆ, ಗುರುಮನೆಗೆ ನೀರುಹೊತ್ತು
ಸಂಗೀತ ಕಲಿತ ಆ ಭೀಮ
ಶರೀರ ವೃದ್ಧವಾದರೇನಂತೆ
ಗಾಯಕನಿಗೆ ವೃದ್ಧಾಪ್ಯವಿಲ್ಲ.

ಬಡಕಲು ಶರೀರದ ಭೀಮ
ನಾದಬ್ರಹ್ಮನ ಕಿರುಣಾ ಘರಾಣಾ
ಭಾವಕ್ಕೆ ದನಿ ತುಂಬಿದ ಅಮರ ಕಾವ್ಯ
ಪರವಶಗೊಳಿಸಿದ ಬಂದಿಶ್ ಮಾಂತ್ರಿಕ.

ನಾದದಲಿ ಭೀಷ್ಮ ಪಿತಾಮಹ
ಸಂಗೀತ ಲೋಕದ ತಾನಸೇನ
ಭೈರವಿ ಹಾಡಿ ಬದುಕಿಗೆ ವಿದಾಯ
ಹೃದಯದಲಿ ನೆಲೆ ನಿಂತವನು
ಗಡಿಗಳ ಸಿಮೋಲ್ಲಂಘನ.

ಮರೆಯದ ಮಾಣಿಕ್ಯದ ಕಣ್ಮರೆ
ನಾದ ಲೋಕವೊಂದರ ಯುಗಾಂತ್ಯ
ಮಾಧುಟ್ಯ ಸೂರ್‍ಯನ ಅಂತ್ಯ
ಸಾಧನೆಗೆ ಸೀಮೆಗಳ ನಿರ್‍ಬಂಧವಿಲ್ಲ
ಗಾಯನಶಾಶ್ವತ, ದೇಹ ನಶ್ಚರ.

ಮೌನವಾಗಿ ಲೀನವಾಗಿದೆ
ಹಿಮಾಲಯದ ಮೇರು ಶಿಖರ.
ಸೂರ್‍ಯ ಅಸ್ತಂಗತನಾದ ಸುದ್ದಿ ಕೇಳಿ
ಅಲ್ಲಾಡದೇ ನಿಂತಿವೆ ನೋಡು
ಗಿರಿ, ಶಿಖರ, ಗಾಳಿ, ನದಿ, ಲೋಕ
ಸಾವು ನಿಶ್ಚಿತ, ಧ್ವನಿ ಅಮರ.
*****
(ಭೀಮ್‌ ಸೇನ್ ಜೋಶಿಯವರು ನಿಧನರಾದ ಸಂದರ್‍ಭ)

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...