Home / ಲೇಖನ / ಇತರೆ / ಹೀಗಾದರೆ ಮುಂದಿನ ಗತಿ?

ಹೀಗಾದರೆ ಮುಂದಿನ ಗತಿ?

“ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಹೆಂಡತಿಗಿಂತಲೂ ಅಧಿಕವಾಗಿ ಪ್ರೀತಿಸುವರಿದ್ದಾರೆ.”

“ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಮಗು ಅಷ್ಟೇ ಏಕೆ ಪತಿರಾಯನಿಗಿಂತಲೂ ಹೆಚ್ಚು ಕಾಳಜಿ ಮಾಡುವ ಪ್ರೀತಿಸುವವರಿದ್ದಾರೆ.”

“ನನ್ನ ಆಪ್ತ ಸ್ನೇಹಿತರಿಗಿಂತಲೂ ಅಧಿಕವೆಂದು ನಾನು ಸ್ಮಾರ್‍ಟ್ ಫೋನನ್ನು ನಂಬಿದ್ದೇನೆ”- ಹೀಗಾದರೆ ಮುಂದಿನ ಗತಿ? ಬರುಬರುತ್ತಾ ಮಾನವೀಯ ಸಂಬಂಧಗಳ ಗತಿ ಏನು? ನಾವೆತ್ತ ಸಾಗಿದ್ದೇವೆ??

ಇತ್ತೀಚೆಗೆ ಜಾಗತಿಕ ಸಾರ್‍ವಜನಿಕ ಅಭಿಪ್ರಾಯ ಸಂಶೋಧನಾ ಸಲಹಾ ಸಮಿತಿ ಅಂತರ್‍ಜಾಲದ ಮೂಲಕ ಈ ಸಮೀಕ್ಷೆ ಕೈಗೊಂಡಿತ್ತು! ಆಗಸ್ಟ್ ೨೦೧೫ರಲ್ಲಿ ಮೊಟೊರೊಲಾ ಕಂಪನಿ ನಡೆಸಿದ ಈ ಸಮೀಕ್ಷೆಯಲ್ಲಿ ಸುಮಾರು ಏಳು ಸಾವಿರ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಮಗ್ರ ಅಧ್ಯಯನವೊಂದನ್ನು ಸಿದ್ಧಗೊಳಿಸಿದೆ.

ಅದರ ಪ್ರಕಾರ ಭಾರತೀಯರು ಅನೇಕರು ಸ್ಮಾರ್‍ಟ್‌ಫೋನಿನಲ್ಲೇ ಮಗ್ನರಾಗುತ್ತಿದ್ದಾರೆನ್ನುವ ವಿಚಾರ ಒಂದೆಡೆಯಾದರೆ ಮತ್ತೊಂದೆಡೆ ಅದು ಕೆಲವರ ಹಾಸಿಗೆಯ ಸಂಗಾತಿಯೆಂದು ಹೇಳಿಕೊಂಡಿದ್ದಾರೆ!

ಹೌದು! ಇದು ತುಸು ಅತಿರೇಕವೆನಿಸಿದರೂ ನಿಜದ ಸಂಗತಿ ಎನ್ನುತ್ತಿದೆ ಇತ್ತೀಚೆಗೆ ಬಿಡುಗಡೆಯಾದ ಸೆವೆನ್ ಕಂಟ್ರಿ ಸಮೀಕ್ಷಾ ವರದಿ.

ಸ್ಮಾರ್‍ಟ್‌ಫೋನ್‌ನೊಂದಿಗೆ ಏಕಾಂತವಾಗಿ ಕಾಲ ಕಳೆಯಲು ಅನೇಕರು ತಮ್ಮ ತಂದೆತಾಯಿ, ಅಕ್ಕತಂಗಿ, ಹೆಂಡತಿ, ಮಕ್ಕಳನ್ನು ತಮ್ಮ ಗುರುಗಳನ್ನು ದೂರ ಮಾಡಿಕೊಳ್ಳಲು ಸಿದ್ಧರಾಗಿರುವರು!

ಶೇಕಡಾ ೬೦%ರಷ್ಟು ಜನರು ಸ್ಮಾರ್‍ಟ್‌ಫೋನ್ ಕೈಯಲ್ಲಿಡಿದು ಪಕ್ಕದಲ್ಲಿಟ್ಟುಕೊಂಡು ಮಲಗುವುದಾಗಿ ಹೇಳಿಕೊಂಡಿದ್ದಾರೆ.

ಸ್ನಾನ, ಊಟ, ತಿಂಡಿ ಮಾಡುವಾಗಲೂ ಫೋನ್ ಇರಬೇಕೆಂದೂ ಆರರಲ್ಲಿ ಒಬ್ಬರು ಸಾರಿಕೊಂಡಿದ್ದಾರೆ, ಎಂಥಾ ಅಪಾಯ ಸಂದರ್‍ಭಗಳಾದ ಡ್ರೈವಿಂಗ್, ಈಜು, ಸೈಕಲ್, ಆಟ ಇತ್ಯಾದಿ ವೇಳೆಯಲ್ಲಿ ನಮ್ಮ ಗಮನ ಫೋನ್ ಕಡೆಗೇ ಹೇಗುವುದೆಂದೂ ಶೇಕಡಾ ೫೪% ರಷ್ಟು ಜನರು ಸಾರಿರುವರು!

ಇನ್ನು ಶೇಕಡಾ ೪೦% ರಷ್ಟು ಜನರು ಕೆಲವು ರಹಸ್ಯಗಳು, ಅಂಕಿ‌ಅಂಶಗಳು, ಫೋಟೋಗಳು, ತಂತ್ರಕುತಂತ್ರ, ವೈಯಕ್ತಿಕ ತಾಣಗಳು ಅಲ್ಲಿವೆ. ಹೀಗಾಗಿ ಜೀವದ ಗೆಳೆಯನಿಗಿಂತಲೂ ಜೀವದ ಸ್ಮಾರ್‍ಟ್‌ಫೋನ್ ಮುಂದಿನ ಮಾಯಜಾಲವೆಂದು ಬಹಿರಂಗ ಪಡಿಸಿರುವರು.

ಭವ್ಯಭಾರತದ ಜನವೆಲ್ಲ ಹೀಗಾದರೆ ಮುಂದಿನ ಗತಿ…?!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...