Home / ಕವನ / ಕವಿತೆ / ಜಯ ಜಯಾ!

ಜಯ ಜಯಾ!

ರಾಗ ನವರಸಕನ್ನಡ ರೂಪಕತಾಳ
(‘ನಿನುವಿನಾ ನಾಮದೇಂದು’ ಎಂಬ ತ್ಯಾಗರಾಜ ಕೃತಿಯಂತೆ)

ಜಯಜಯಾ ನಮ್ಮೊಡೆಯಾ!
ಜಗದೊಡೆಯಾ ಜಯಜಯಾ! ||ಪಲ್ಲ||
ಜಯಜಯ ಭಾರತದಜೊಡೆಯಾ!
ಬಡವರೊಡೆಯ ಜಯಜಯಾ! ||ಅನು||

ಏನು ಚೆಲುವೊ ದೇವ ನಿನ್ನೀ
ಭಾರತಮೂರ್ತಿ!
ತೆರೆಯ ಗೆಜ್ಜೆ, ಹಸುರ ಸೀರೆ,
ನದಿ ಸರ, ಹಿಮ ಮುಡಿಯ ಸ್ಫೂರ್ತಿ! ||೧||

ತನುಮನದೀ ಸರ್ವಂಸಹೆ
ಯಶಾಂತಿ ನೋಡ!
ಪರತಂತ್ರರ ಗೋಳ ಕೇಳ-
ಸರ್ವತ್ರ ಸಿಡಿಲ್ವ ಮೋಡ! ||೨||

ಮೂಡುವನೆಂದೀ ಭಾರತ
ಭಾಗ್ಯ ಭಾಸ್ಕರಂ?
ಮರಳುವುದೆಂದೆಮಗಗಲಿದ
ಸ್ವತಂತ್ರಮತಿಯಶಸ್ಕರಂ? ||೩||

ಪೂರ್ವಾಪರ ಪುಣ್ಯಸಂಗ
ಮಮೀ ಭಾರತಂ
ಕೂಗುವುದಿದೊ ನಿನ್ನನು ನೀ
ನಿನ್ನೆಂದಿಗೆ ಜಾಗರಿತಂ? ||೪||

ನಮಗೀ ಪರತಂತ್ರತೆ ಹೊಲೆ
ಗಲಸಿರಲಿಂತು,
ನಿನ್ನಯ ಸಂತಾನರೆಂತು?
ಕಾದಪೆ ಮನುಜತೆಯನೆಂತು? ||೫||

ನಿನ್ನ ಭಾರತಕೆ ಸ್ವರಾಜ್ಯ
ತಾರದ ಮುನ್ನ,
ನಂಬಲೆಂತು ದೀನಜನಾ
ನನ್ಯಶರಣನೆಂದು ನಿನ್ನ? ||೬||

ಎಂತೀ ಭಾರತಮನಂತೆ
ನಮ್ಮನುರಕ್ತಿ
ಜಗವೆಲ್ಲವನಕ್ಕರಿಪಂ
ತೀಯೆಮಗಸ್ವಾರ್ಥಶಕ್ತಿ! ||೭||

ಧರೆಯೊಳೆಲ್ಲರನರವರ ಸ್ವ
ರಾಜ್ಯವ ನೀಡ-
ಸಮ ಸೌದರ್ಯದೊಳೆ ನೆಲಸಿ
ಮುಗಿಸಾಳೊಡೆಯೆಂಬ ಸೇಡ! ||೮||

ಭಾರತದಲಿ ಸರ್ವಧರ್ಮ
ಮೊಂದಲಿ ಸದನಂ,
ಮಾಣಿಸಲೀಕೆಯ ಸ್ವಸ್ತಿ
ಧ್ವಜಮಧರ್ಮದೊಳಕದನಂ! ||೯||

ನಿನ್ನೊಳಲ್ಲದೆರೆಯಲೆ ನ
ಮ್ಮಯ ಬಿಡುಗಡೆಯಾ?
ನೀನದನೆಮ್ಮಿಂದ ದುಡಿಸ
ದರ್ಹರೆ ನಾವದಕೊಡೆಯಾ ||೧೦||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...