Home / ಕವನ / ಕವಿತೆ / ಸ್ಪರ್ಶ

ಸ್ಪರ್ಶ

ರಾತ್ರಿ ಕತ್ತಲೆಮನೆ ನೋವಲ್ಲಿ
ಕನಸುಗಳು ಅಡರಿಸಿ ಬೆಳಂ
ಬೆಳಕಿನ ಸೂರ್ಯನಿಗೆ ನೂರು
ಪ್ರಶ್ನೆಗಳನ್ನು ಒಡ್ಡುತ್ತವೆ. ಬಚ್ಚಿಟ್ಟ
ಬೆತ್ತಲ ಬದುಕು ಮತ್ತೆ ತಲ್ಲಣ
ಗಳೊಂದಿಗೆ ಹೊಸ ಬೆಳಗು ಹುಟ್ಟುತ್ತವೆ.

ಹುಟ್ಟುವ ಕ್ರಿಯೆ ಇಲ್ಲದಿದ್ದರೆ ಈ
ಜಗತ್ತು ನಾನು ನೀನು ಕವಿತೆ ಹೇಗೆ
ಮಿರುಗಿ ಕೊರಗಿ ಬಡಿದಾಡಿ ಹೂ ಬಳ್ಳಿ
ಚಿಗುರು ಹಮ್ಮುಬಿಮ್ಮು ಒಡಲಿಗೆ
ಹಸಿಯನ್ನು ಸುರಿಯುತ್ತವೆ ಮತ್ತೆ
ಅದ್ಭುತ ಜೀವಗಳು ಚಿಗುರುತ್ತವೆ.

ಹೀಗೆ ಚಿಗುರು ಚಿಮ್ಮಿ ವಿಸ್ಮಯ
ವಿನೀತಗೊಂಡ ಕವಿತೆಗಳು ಮಂಪರು
ಹರವಿಕೊಂಡು ಬಾಚಿತಬ್ಬುವ ತಳಮಳ
ಹನಿಗಳು ಮುತ್ತಾಗಿ ಒಡಲ ಕಡಲ
ಸೇರಿ ನಿರಂತರ ಅಲೆಗಳ ನದಿಯ ಮೌನ
ಧ್ಯಾನಿಸುತ ಮಳೆ ಮೋಡ ಬೀಜ ಕಟ್ಟುತ್ತವೆ.

ದೀರ್ಘಕಾಲ ಅರಳಿ ಬಂದ ಪ್ರೀತಿ
ಮಳೆ ಹುಡುಕಾಟ ಲೋಕ ದಾಸೋಹ
ಮನೆ ಅಂಗಳದಲ್ಲಿ ಆಕಾಶ ಬುಟ್ಟಿ
ಬೊಗಸೆ ತುಂಬ ಹರಿದ ನೀರು
ಗೂಡು ಮಾಡಿದ ಜೀವ ಜಲ
ಹಣತೆಯ ತುಂಬ ಬೆಳಕಿನ ಹಕ್ಕಿ ಹಾಡು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...