ಸ್ಪರ್ಶ

ರಾತ್ರಿ ಕತ್ತಲೆಮನೆ ನೋವಲ್ಲಿ
ಕನಸುಗಳು ಅಡರಿಸಿ ಬೆಳಂ
ಬೆಳಕಿನ ಸೂರ್ಯನಿಗೆ ನೂರು
ಪ್ರಶ್ನೆಗಳನ್ನು ಒಡ್ಡುತ್ತವೆ. ಬಚ್ಚಿಟ್ಟ
ಬೆತ್ತಲ ಬದುಕು ಮತ್ತೆ ತಲ್ಲಣ
ಗಳೊಂದಿಗೆ ಹೊಸ ಬೆಳಗು ಹುಟ್ಟುತ್ತವೆ.

ಹುಟ್ಟುವ ಕ್ರಿಯೆ ಇಲ್ಲದಿದ್ದರೆ ಈ
ಜಗತ್ತು ನಾನು ನೀನು ಕವಿತೆ ಹೇಗೆ
ಮಿರುಗಿ ಕೊರಗಿ ಬಡಿದಾಡಿ ಹೂ ಬಳ್ಳಿ
ಚಿಗುರು ಹಮ್ಮುಬಿಮ್ಮು ಒಡಲಿಗೆ
ಹಸಿಯನ್ನು ಸುರಿಯುತ್ತವೆ ಮತ್ತೆ
ಅದ್ಭುತ ಜೀವಗಳು ಚಿಗುರುತ್ತವೆ.

ಹೀಗೆ ಚಿಗುರು ಚಿಮ್ಮಿ ವಿಸ್ಮಯ
ವಿನೀತಗೊಂಡ ಕವಿತೆಗಳು ಮಂಪರು
ಹರವಿಕೊಂಡು ಬಾಚಿತಬ್ಬುವ ತಳಮಳ
ಹನಿಗಳು ಮುತ್ತಾಗಿ ಒಡಲ ಕಡಲ
ಸೇರಿ ನಿರಂತರ ಅಲೆಗಳ ನದಿಯ ಮೌನ
ಧ್ಯಾನಿಸುತ ಮಳೆ ಮೋಡ ಬೀಜ ಕಟ್ಟುತ್ತವೆ.

ದೀರ್ಘಕಾಲ ಅರಳಿ ಬಂದ ಪ್ರೀತಿ
ಮಳೆ ಹುಡುಕಾಟ ಲೋಕ ದಾಸೋಹ
ಮನೆ ಅಂಗಳದಲ್ಲಿ ಆಕಾಶ ಬುಟ್ಟಿ
ಬೊಗಸೆ ತುಂಬ ಹರಿದ ನೀರು
ಗೂಡು ಮಾಡಿದ ಜೀವ ಜಲ
ಹಣತೆಯ ತುಂಬ ಬೆಳಕಿನ ಹಕ್ಕಿ ಹಾಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಮ್ಮತ್ತು
Next post ನೆರಳು

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys