ಕೊಳದೆಡೆಯ ಇರುಳು

ಬುವಿಬಾನಳೆದುರವಣಿಸಿದ
ಹರಿ ಪಾದಕೆ ತಲೆಯೊಡ್ಡುತ
ಕೆಳ ಲೋಕಕೆ ತೆರಳುತ್ತಿಹ
ಬಲಿದೊರೆಯಂದದೊಳು,
ಮಿಗುವಿರುಳಿನ ನಿಡು ನೀಟಿದ
ದೆಸೆ ಮೆಟ್ಟಿದ ಮುಗಿಲಡಿಯಡಿ
ಮರೆಯಾದುದು ಪಗಲೈಸಿರಿ
ಪಡುವಣ ಕಮರಿಯೊಳು

ಹಿಮವದ್ಗಿರಿಗಹ್ವರದೆಡೆ
ತಪವೆಸಗುವ ವರ ಯೋಗಿಯ
ನಿಶ್ಚಲ ಕಿಂಚಿನ್ಮೀಲಿತ-
ಫಾಲಾಂಬಕಮೆನಲು,
ಬೆಳ್ಳಂಚಿನ ಕರಿಮುಗಿಲಿನ
ನಡುವಣ ಬಾನಿನ ನೆತ್ತಿಯೊ-
ಳೆಂತೊಪ್ಪಿದೆ ಹೊಂಬಣ್ಣದ
ಬಿದಿಗೆಯ ಪೆರೆಯೆಸಳು.

ಚಣ ಚಣಕೂ ಮಿರುಮಿಂಚುವ
ಕೋಲ್ಕಿಂಚಿನ ಸಂಚೇನಿದು-
ತಪ ಭಂಗಕೆ ಕುಸುವಾಸ್ತ್ರವ-
ನಣಿಗೈವನೊ ಮಾರಂ?
ಚಣ ಚಣಕೂ ಕಿವಿಗಿನಿದೆನೆ
ಗುಡುಗುಡುಗುವ ದನಿಯೇನಿದು –
ಸಿಂಗಾಡಿಗೆ ಹೆದೆಯೇರಿಸಿ
ಮಿಡಿವನೊ ಎದೆಗಾರಂ?

ಕಣ್ಮನಗಳ ನೀರಡಿಸುವ
ನಿಶ್ಯಾಂತಿಯ ಈ ಇರುಳೊಳು
ಉತ್ಸುಕಿಸಿಹೆ, ಕಾತರಿಸಿಹೆ,
ಭಾವುಕ ಕತಮೇನೈ?
ಕಣ್ಸೋಲಲು ನಿಟ್ಟಿಸುವೀ
ಕಿವಿ ಸೋಲಲು ಲಾಲಿಸುವೀ
ಬಗೆ ಸೋಲಲು ಭಾವಿಸುವೀ
ಭ್ರಾಂತಿಯ ಬಗೆಯೇನೈ?

ನೇಪುರದಿನಿದನಿ ಯಾವುದ
ಸೂಡಿದ ಪೂಗಂಪಾವುದ
ನೋಟದ ಕುಣಿಮಿಂಚಾವುದ
ಸ್ಮೃತಿಧನುವಿಂದೊಗೆದು,
ನಿನ್ನೆದೆಗವಿಯೊಳಗಿಂತೆಯೆ
ತವಿಪ ನಿರಾಶೆಯ ರುದ್ರನ
ಎಚ್ಚರಿಸುತ, ಒಲವಾವುದು
ಬೇಳುವೆಯಾಗಿಹುದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇನೆತಿನ್ನುವ ಹಾಡು
Next post ಆಧುನಿಕ ವಚನ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…