ಉರುಳಿ ಅರಿವಿನ ಮೋರಿಯಲ್ಲಿ

ಉರುಳಿ ಅರಿವಿನ ಮೋರಿಯಲ್ಲಿ
ನರಳುತ್ತಿರುವೆ
ಇಲ್ಲಿ ನೆಮ್ಮದಿ ಎಲ್ಲಿ ?
ಕೊಳೆತು ನಾರುತ್ತಿರುದ ಹಳೆಯ ಭೂತ ;
ಅದರ ಮೇಲೇ ಮೊಳೆತ ಹೊಸ ಕನಸುಗಳ ತುಡಿತ,
ಎರಡು ಗಡಿಗಳ ನಡುವೆ
ಒಡೆದು ಬಿದ್ದಿದೆ ರೂಪ.
ಹೊಕ್ಕುಳಿನ ಹುರಿ ಕಡಿದು
ಹಳಿ ಬಿಟ್ಟು ಹೊರನಡೆದು
ಪ್ರತ್ಯೇಕತೆಯ ಸುಳ್ಳ ಕೋಟಿ ಕೊರಳುಗಳಲ್ಲಿ
ಕೂಗಿ ದಣಿದಿದೆ ಪಾಪ

ಚಿತ್ತ ಹೊತ್ತ ಮನುಷ್ಯ
ಚಿತ್ತವಿಲ್ಲದ ನೆಲ,
ಬೆಟ್ಟ ಮರ ಗಿಡ ಕಲ್ಲು,
ಹುಲ್ಲು ಪರಿಮಳ ಜಲ ;
ಯಾರು ಉತ್ತಮ, ಯಾರು ಅಧಮ, ಏತಕೆ, ಹೇಗೆ ?
ಯಾರು ಪಡೆಯುತ್ತಾರೆ ಯಾರಿಂದ, ಏತಕ್ಕೆ ?
ಹೇಗೆ ದುಡಿಸುತ್ತಾರೆ, ದುಡಿಸಿ ಗುಡಿಸುತ್ತಾರೆ
ಯಾರು ಯಾರನ್ನೇಕೆ ಜೀತಕ್ಕೆ ?

ಯೋಚಿಸಬರದ ಅಶೋಕ
ಋತು ತಪ್ಪದೆ ಸುರಿವ ಚಿಗುರು,
ಯೋಚಿಸಲಾಗದ ಆಲದ ಅರ್ಧ ಎಕರೆ ನೆರಳು
ಯೋಚಿಸಲಾಗದ ಮಾವು,
ಆಲೋಚಿಸಲಾಗದ ಹೂವು,
ಯೋಚಿಸುವ ಮನುಷ್ಯನನ್ನೇ
ಸಾಕುವ ಪರಿಯನ್ನು
ಆಲೋಚಿಸಬೇಕು ನಾವು

ಚಿತ್ತವೇ ಶತ್ರುವೇ ನಮಗೆ ? ಸೃಷ್ಟಿಯ ಹಡೆದ
ಮೂಲಕ್ಕೆ ಮಿಥ್ಯವೇ ?
ಅದಕ್ಕೂ ಮೀರಿದ ಶಕ್ತಿ ಜಡಕ್ಕೆ ಸಲೀಸು ದಕ್ಕಿ
ಸತ್ಯ ಪ್ರತ್ಯಕ್ಷವೆ ಅದಕ್ಕೆ ?
ಕಡಿಸಿಕೊಳ್ಳುವ ನೋವು ಕಡಿಯುವ ಜೀವಕ್ಕಿರದ
ಸ್ಥಿತಿ ಮರ್ತ್ಯಮಾತ್ರವೆ ?
ಮೂಲಪ್ರಜ್ಞೆಯ ಬಿಂಬ
ಕೋಟಿ ಚೂರುಗಳಾಗಿ
ಹಿರಿಕಡಲು ಹನಿಹನಿಗಳಾಗಿ ಒಡೆದ ವಿಕಾರ
ಗುರುತಿಸಿದರೂ ನಿಜವ ರುಚಿಯಲ್ಲಿ, ಹನಿಗೆಲ್ಲಿ
ಹಡಗುಗಳ ತೇಲಿಸುವ ಅಧಿಕಾರ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗುವಿತ್ತು ಹೂವಂತ ಮಾತಿತ್ತು
Next post ನಂಬಿಕೆಯೇ ದೇವರು

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…