ನಗುವಿತ್ತು ಹೂವಂತ ಮಾತಿತ್ತು

ಹಠಾತ್ತಾಗಿ ಬಂದ ಚಡಪಡಿಕೆ
ಅದ್ಹೇಕೋ ನಿನ್ನ ಪಾದಗಳು
ಒಮ್ಮೆಲೆ ನೆನಪಾದವು
ಪಾದಗಳ ಬಳಿ ಕುಳಿತು
ಸರಿರಾತ್ರಿ ಧ್ಯಾನಿಸಿದ ನೆನಪು

ಇಡೀ ದೇಹವನ್ನು ಉಂಡ ಮೇಲೆ
ಉಳಿದದ್ದೇನು??
ತೃಪ್ತಿಯಿಂದ ಅಪ್ಪಿ ಮಲಗುವುದಷ್ಟೇ
ಕನಸು ನನಸು ಬೀಜ ಮೊರೆತದ
ಜೀವ ಮಿಡಿತದ ಸದ್ದು
ಕಿವಿಗೆ ಮಾತಾಡಿ ತೆರಳಿತು

ಪಾದಗಳ ಬಳಿ ಕುಳಿತು ಧ್ಯಾನಿಸಿದೆ
ಮಗು ಪುಟ್ಟು ಕಾಲುಗಳಿಂದ
ಹಿತವಾಗಿ ಮುಖಕ್ಕೆ ಒದೆಯುತ್ತಿತ್ತು ಕಿಲಕಿಲ
ನಗುತ್ತಿತ್ತು ,ಭೂಮಿ ಮಳೆಮಿಂದು ನಕ್ಕಂತೆ

ಮಗು ತನ್ನ ಮುಖದಲ್ಲಿ
ನನಗೆ ಕನ್ನಡಿ ಹಿಡಿದಿತ್ತು
ಪಾದಗಳ‌ ಬಳಿ ಕುಳಿತು ಶರಣಾದೆ

ಬೆಳಗೊಳದ ಬಾಹುಬಲಿ
ಕಲ್ಲಾಗಿ ಆಕಾಶದೆತ್ತರಕೆ ಬೆಳೆದಿದ್ದ
ಅವನ ಪಾದಗಳ ಬಳಿ ನಿಂತೆ
ಕುಳಿತೆ ಧ್ಯಾನಿಸಿದೆ ಮಲಗಿದೆ

ಆಗಲೂ ನೆನಪಾದದ್ದು
ನೀನು, ಮಗುವಿನ ಒದೆತ ತಿವಿತ
ಪಾದಗಳ ಬಳಿ ಕುಳಿತು ಧ್ಯಾನಿಸುವುದೆಂದರೆ
ಅದು ಸಾಮಾನ್ಯವೇನಲ್ಲ??

ಭೂಮಿ ತಾಯಿಯ ಬಳಿ ಬಂದೆ
ಹೊಲದಲ್ಲಿ ಮಲಗಿದೆ, ಸ್ವಲ್ಪ ಹೊತ್ತು ನಡೆದೆ…
ಕೈಗಳಿಂದ ಮಣ್ಣ ಸ್ಪರ್ಶಿಸಿದೆ
ಮಣ್ಣಲ್ಲಿ ಆಕೆಯ ಪಾದಗಳು ಸಿಕ್ಕವು
ಅಲ್ಲೇ ಆಕೆಯ ಧ್ವನಿ ಇತ್ತು
ಬದುಕಿತ್ತು ಒಡಲಿತ್ತು
ದಶಕಗಳ ನಂತರ ಹೊಲದ ಮುಖ ನೋಡಿದೆ
ಬಾಲ್ಯ ಮರುಕಳಿಸಿತು
ಇದೇ ಹೊಲದಲ್ಲಿ ಎತ್ತುಗಳು ದುಡಿದಿದ್ದವು, ಅಪ್ಪನ ಬೆವರಿತ್ತು ನಗುವಿತ್ತು ಹೂವಂತ ಮಾತಿತ್ತು

ಇದೇ ಹೊಲದಲ್ಲಿ ಬೆಳೆದ ನವಣೆ ಜೋಳದ ತೆನೆಯ ಜೊತೆ ಆಟವಾಡಿ, ಹಣ್ಣು ತಿಂದು ನಕ್ಕಿದ್ದೆವು ಹಸಿಗಡಲೆ ಸುಟ್ಟು ಮುಕ್ಕಿದ್ದೆವು

ಹೊಲದ ಪಾದಗಳ ಬಳಿ ಕುಳಿತು ಧ್ಯಾನಿಸುವುದೆಂದರೆ
ಹುಡುಗಾಟವಲ್ಲ
ಕಳೆದು ಹೋದ ತಾಯಿ, ಯೌವ್ವನದ ಪ್ರೇಯಸಿಯ ಜೊತೆ
ನಕ್ಕಂತೆ ಬಿಕ್ಕಿದಂತೆ
ಮತ್ತೆ ನಕ್ಕು ಜಾತ್ರೆ ಮುಗಿಸಿ
ಮರಳಿ ಬದುಕಿಗೆ ನಡೆದಂತೆ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವಿನ ಜುಟ್ಟು
Next post ಉರುಳಿ ಅರಿವಿನ ಮೋರಿಯಲ್ಲಿ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…