ಅವಳು

ಕಾದ ಬಿಸಿಲಿನ ಝಳದಲಿ
ಅವಳು ಬೆವರ ಹನಿಗಳು
ಹೊತ್ತು ಸಾಗಿದ್ದಾಳೆ ಆಯಾಸದಲಿ
ಹೊರೆಯಲಿ ಆ ದಿನದ ಒಲೆಯ ಕಾವಿದೆ.

ಆಡದ ಮಾತುಗಳು ನೂರಿವೆ
ತೋರಗೊಡುವದಿಲ್ಲ ಅವಳು
ಮುಖದ ನೆರಿಗೆಗಳಲಿ ಮಿಡಿದ
ಯಾರೇನು ಮಾಡಲಾಗದ ಭಾವ ಕಂದೀಲಿನಲಿ.

ಹೊರುವದೆಲ್ಲವ ಹೊರಬೇಕು
ಗುಡಿಸಲ ಮಧ್ಯೆದಲಿ ಮಕ್ಕಳ ಗುಂಪು
ತಾನಾಗಿ ಬಂದ ಹಗಲಿನ ಹಸಿವು
ರಾತ್ರಿ ಹಿಂಗುತ್ತದೆ ಸೂರ್ಯ ಮುಖ ಮರೆಯಿಸಿದ್ದಾನೆ.

ಅವಳ ಕೂಗು ಯಾರಿಗೂ ಕೇಳಿಸುವದಿಲ್ಲ.
ಹೊರಗೆ ಬರೀ ಗೌಜು ಗದ್ದಲ
ಮೇಜು ಕುಟ್ಟುವವರಿಗೆ ತನಗಾದ್ದು ಮಾತ್ರ
ಕೇಳಿಸುತ್ತದೆ ದೂರುಗಳಿಲ್ಲದೇ ಅವಳು ಸರಿದು ಹೋಗಿದ್ದಾಳೆ.

ಆಡಿದರೆ ಒಂದೂ ಮಾತು ಧ್ವನಿಯಾಗುವದಿಲ್ಲ
ಆಡದೇ ಉಳಿದರೆ ಎದೆ ಸುಡುವ ದಾಹ
ಮೌನ ಕಡೆಯ ಮಾತೆಂದು ಸುಮ್ಮನಾಗಿ
ಇನ್ನೊಮ್ಮೆ ಹೇಳಿದರಾಯ್ತು ಎಂದು ನಡೆದಿದ್ದಾಳೆ ಅವಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗ ಬದಲಾದರು ಜೀವನ ಬದಲದು!
Next post ಏಕಾಂತ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…